Home / ಕವನ / ಕವಿತೆ / ಮಳೆಯ ಹಾಡು

ಮಳೆಯ ಹಾಡು

ಮತ್ತೆ ಮಳೆ ಹೊಯ್ಯುತಿದೆ ಆದರೆ
ಎಲ್ಲಾ ನೆನಪಾಗುವುದಿಲ್ಲ.
ಮತ್ತೆ ಮತ್ತೆ ಮಳೆ ಬರಬೇಕು
ಅಂದರೇ ಈ ನೆಲ ಹಸಿರಾಗುವುದು
ಹಸಿರಾದೊಡೆ ಚಿಗುರಿತೆಂದು ನಾವು
ಭ್ರಮಿಸುವುದು, ಅದು ಜ್ವಾಲಾಮುಖಿಯ
ಮೇಲಿನ ಹಸಿರೆಂದು ಈ ಇಳೆ ಅದೆಷ್ಟು
ಸಲ ಗುಡುಗಿಲ್ಲ. ಗುಡುಗುತ್ತ ಹೇಳಿಲ್ಲ.
ಕೇಳುವ ಕಿವಿಯಿದ್ದರಲ್ಲವೆ?

ಮೊದಲು ಅವಳು ಹೀಗಿರಲಿಲ್ಲವಂತೆ
ಎಲ್ಲೆಲ್ಲೂ ಹಸಿರುಕ್ಕಿಸಿದ್ದಳಂತೆ
ಉಸಿರುಕ್ಕಿಸಿದ್ದಳಂತೆ ಕ್ಷಮಯಾ ಧರಿತ್ರಿ
ಎಂದು ಹಾಡಿ ಹೊಗಳಿಸಿಕೊಂಡಿದ್ದಳಂತೆ
ನಿನ್ನೊಳಗೇ ಈ ಬೇನೆ ಬೆಂಕಿಯೆ
ಕಾರಣವೇನಮ್ಮ ತಾಯೇ
ಮತ್ತೆ ಮತ್ತೆ ಬರುವ ಈ ಮಳೆಯೇ ಎಷ್ಟೋ ವಾಸಿ
ತಂಪಾಗಿಸಿದೆ ಈ ನಿನ್ನ ಬಿಸಿಯೊಡಲ ಬೆಂಕಿಯ
ಚೆಂಡಾಗಿ ಉರಿಯುತ್ತಿದ್ದೆ ನೀನು ಎಂದ ಆ
ವಿಜ್ಞಾನಿಗಳು ಪಾಪ ಪೆದ್ದರಾದರು. ಈಗಲೂ
ನೀನು ಉರಿಯುವ ಚೆಂಡೆಂದು ಅವರಿಗೆ ಕಾಣುವುದೇ ಇಲ್ಲ.
ಧಾರೆ ಹರಿವ ಮಳೆರಾಯನಿಗೇ ಗೊತ್ತು
ನಿನ್ನ ಗಾತ್ರ ತೂಕ ಪ್ರಮಾಣ, ತಮ್ಮ ಒಂಟಿ
ಮೇಜಿನ ಮುಂದೆ ಕುಳಿತು ಚಿತ್ರ ಬರೆಯುವ
ಆ ಪೆದ್ದರೀಗೇನು ಗೊತ್ತು?
ಆ ಮಳೆರಾಯ ಬಂದಾಗೊಮ್ಮೆ ನಿನಗೆ ಸಡಗರ
ಸದ್ಯ ನಿನ್ನ ಉರಿ ಸ್ವಲ್ಪ ಕಡಿಮೆ, ಮತ್ತೆ ಬಾಯಾ
ರುವವರೆಗೆ ಚಿಂತೆಯಿಲ್ಲ. ನಾವೂ ನಿನ್ನ ನೆನೆಯುತ್ತೇವೆ.
ನಿನ್ನೊಂದಿಗೇ ಹರಿಯುತ್ತೇವೆ ಅವನೊಂದಿಗೆ ನಿನ್ನ
ಈ ಜುಗಲ್‌ಬಂದಿಗೆ ಪ್ರೇಕ್ಷಕರೇ ನಾವೆಂದು
ಇನ್ನೂ ಅರಿವಾಗಿಲ್ಲವೇ ನಿನಗೆ, ಕಡೆಗಣಿಸಬಹುದೇ
ನಮ್ಮನ್ನು ಹೀಗೆ, ಇದು ತರವಲ್ಲ ತಾಯೆ ನಿನಗೆ
ಒಮ್ಮೆ ಒಂದು ಕ್ಷಣ ಸುಮ್ಮನಾಗು, ನಿಶ್ಚಿಂತಳಾಗು.
ಗರಗರ ತಿರುಗುವುದನ್ನೇನೂ ನಿಲ್ಲಿಸಬೇಡ
ಹಗಲೂ ರಾತ್ರಿ ಕಣ್ಣೆವೆ ತೆರೆದು ಮುಚ್ಚುವುದನ್ನೂ
ನಿಲ್ಲಿಸಬೇಡ ಒಳಗೊಳಗೇ ಅದುಮಿಟ್ಟ, ಆ
ಬೆಂಕಿಯನ್ನು ಅದರದೇ ಆದ ಬಾಯಿದೆ
ಯುಗಯುಗಗಳಿಂದ ಅಲ್ಲಿಂದ ಹರಿಯಬಿಡು
ಹೊರಗೆ, ತಣ್ಣಗಾಗು ಅಲ್ಲಿಗೆ, ಹೀಗೆ ಎಲ್ಲೆಲ್ಲೋ
ಗುಡುಗಾಡಿ ಅಪರಿಮಿತ ಯಕ್ಷಗಾನ ಬಯಲಾಡ
ಬೇಡ, ಕಿಲಾರಿಯಾಗಬೇಡ, ಗುಜರಾತಿನ
ಗುಡ್ಡಗಾಡುಗಳ ತಲೆ ಕಳಗು ಮಾಡಬೇಡ,
ಮತ್ತೆ ಮತ್ತೆ ಮಳೆ ಹೊಯ್ಯುತಿರಲೆಂದೇ
ನಿನ್ನ ಋತುಚಕ್ರ ತಿರುಗಿಸಿ ಆವಿಯಾಗಿಸಿ
ಮೋಡವಾಗಿಸಿ ಮಳೆಯಾಗಿಸಿ ಸುರಿಸು
ಉರಿಸಿ ಕಾಯಿಸು.
ಒಳಗಿನ ಬೆಂಕಿ ಇರಲಿ ಅಲ್ಲೇ
ಹೊರಗೆಲ್ಲಾ ಚಿಗುರಾಗಿ ಹಸಿರಾಗಿ ನಲಿ.
*****
-ಅನ್ವೇಷಣೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...