ಮಳೆಯ ಹಾಡು

ಮತ್ತೆ ಮಳೆ ಹೊಯ್ಯುತಿದೆ ಆದರೆ
ಎಲ್ಲಾ ನೆನಪಾಗುವುದಿಲ್ಲ.
ಮತ್ತೆ ಮತ್ತೆ ಮಳೆ ಬರಬೇಕು
ಅಂದರೇ ಈ ನೆಲ ಹಸಿರಾಗುವುದು
ಹಸಿರಾದೊಡೆ ಚಿಗುರಿತೆಂದು ನಾವು
ಭ್ರಮಿಸುವುದು, ಅದು ಜ್ವಾಲಾಮುಖಿಯ
ಮೇಲಿನ ಹಸಿರೆಂದು ಈ ಇಳೆ ಅದೆಷ್ಟು
ಸಲ ಗುಡುಗಿಲ್ಲ. ಗುಡುಗುತ್ತ ಹೇಳಿಲ್ಲ.
ಕೇಳುವ ಕಿವಿಯಿದ್ದರಲ್ಲವೆ?

ಮೊದಲು ಅವಳು ಹೀಗಿರಲಿಲ್ಲವಂತೆ
ಎಲ್ಲೆಲ್ಲೂ ಹಸಿರುಕ್ಕಿಸಿದ್ದಳಂತೆ
ಉಸಿರುಕ್ಕಿಸಿದ್ದಳಂತೆ ಕ್ಷಮಯಾ ಧರಿತ್ರಿ
ಎಂದು ಹಾಡಿ ಹೊಗಳಿಸಿಕೊಂಡಿದ್ದಳಂತೆ
ನಿನ್ನೊಳಗೇ ಈ ಬೇನೆ ಬೆಂಕಿಯೆ
ಕಾರಣವೇನಮ್ಮ ತಾಯೇ
ಮತ್ತೆ ಮತ್ತೆ ಬರುವ ಈ ಮಳೆಯೇ ಎಷ್ಟೋ ವಾಸಿ
ತಂಪಾಗಿಸಿದೆ ಈ ನಿನ್ನ ಬಿಸಿಯೊಡಲ ಬೆಂಕಿಯ
ಚೆಂಡಾಗಿ ಉರಿಯುತ್ತಿದ್ದೆ ನೀನು ಎಂದ ಆ
ವಿಜ್ಞಾನಿಗಳು ಪಾಪ ಪೆದ್ದರಾದರು. ಈಗಲೂ
ನೀನು ಉರಿಯುವ ಚೆಂಡೆಂದು ಅವರಿಗೆ ಕಾಣುವುದೇ ಇಲ್ಲ.
ಧಾರೆ ಹರಿವ ಮಳೆರಾಯನಿಗೇ ಗೊತ್ತು
ನಿನ್ನ ಗಾತ್ರ ತೂಕ ಪ್ರಮಾಣ, ತಮ್ಮ ಒಂಟಿ
ಮೇಜಿನ ಮುಂದೆ ಕುಳಿತು ಚಿತ್ರ ಬರೆಯುವ
ಆ ಪೆದ್ದರೀಗೇನು ಗೊತ್ತು?
ಆ ಮಳೆರಾಯ ಬಂದಾಗೊಮ್ಮೆ ನಿನಗೆ ಸಡಗರ
ಸದ್ಯ ನಿನ್ನ ಉರಿ ಸ್ವಲ್ಪ ಕಡಿಮೆ, ಮತ್ತೆ ಬಾಯಾ
ರುವವರೆಗೆ ಚಿಂತೆಯಿಲ್ಲ. ನಾವೂ ನಿನ್ನ ನೆನೆಯುತ್ತೇವೆ.
ನಿನ್ನೊಂದಿಗೇ ಹರಿಯುತ್ತೇವೆ ಅವನೊಂದಿಗೆ ನಿನ್ನ
ಈ ಜುಗಲ್‌ಬಂದಿಗೆ ಪ್ರೇಕ್ಷಕರೇ ನಾವೆಂದು
ಇನ್ನೂ ಅರಿವಾಗಿಲ್ಲವೇ ನಿನಗೆ, ಕಡೆಗಣಿಸಬಹುದೇ
ನಮ್ಮನ್ನು ಹೀಗೆ, ಇದು ತರವಲ್ಲ ತಾಯೆ ನಿನಗೆ
ಒಮ್ಮೆ ಒಂದು ಕ್ಷಣ ಸುಮ್ಮನಾಗು, ನಿಶ್ಚಿಂತಳಾಗು.
ಗರಗರ ತಿರುಗುವುದನ್ನೇನೂ ನಿಲ್ಲಿಸಬೇಡ
ಹಗಲೂ ರಾತ್ರಿ ಕಣ್ಣೆವೆ ತೆರೆದು ಮುಚ್ಚುವುದನ್ನೂ
ನಿಲ್ಲಿಸಬೇಡ ಒಳಗೊಳಗೇ ಅದುಮಿಟ್ಟ, ಆ
ಬೆಂಕಿಯನ್ನು ಅದರದೇ ಆದ ಬಾಯಿದೆ
ಯುಗಯುಗಗಳಿಂದ ಅಲ್ಲಿಂದ ಹರಿಯಬಿಡು
ಹೊರಗೆ, ತಣ್ಣಗಾಗು ಅಲ್ಲಿಗೆ, ಹೀಗೆ ಎಲ್ಲೆಲ್ಲೋ
ಗುಡುಗಾಡಿ ಅಪರಿಮಿತ ಯಕ್ಷಗಾನ ಬಯಲಾಡ
ಬೇಡ, ಕಿಲಾರಿಯಾಗಬೇಡ, ಗುಜರಾತಿನ
ಗುಡ್ಡಗಾಡುಗಳ ತಲೆ ಕಳಗು ಮಾಡಬೇಡ,
ಮತ್ತೆ ಮತ್ತೆ ಮಳೆ ಹೊಯ್ಯುತಿರಲೆಂದೇ
ನಿನ್ನ ಋತುಚಕ್ರ ತಿರುಗಿಸಿ ಆವಿಯಾಗಿಸಿ
ಮೋಡವಾಗಿಸಿ ಮಳೆಯಾಗಿಸಿ ಸುರಿಸು
ಉರಿಸಿ ಕಾಯಿಸು.
ಒಳಗಿನ ಬೆಂಕಿ ಇರಲಿ ಅಲ್ಲೇ
ಹೊರಗೆಲ್ಲಾ ಚಿಗುರಾಗಿ ಹಸಿರಾಗಿ ನಲಿ.
*****
-ಅನ್ವೇಷಣೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಿಹಿ-ಕಹಿ
Next post ಜೀವದಲುಸಿರು ಇರುವಾಗ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…