Home / ಕವನ / ಕವಿತೆ / ಮಳೆಯ ಹಾಡು

ಮಳೆಯ ಹಾಡು

ಮತ್ತೆ ಮಳೆ ಹೊಯ್ಯುತಿದೆ ಆದರೆ
ಎಲ್ಲಾ ನೆನಪಾಗುವುದಿಲ್ಲ.
ಮತ್ತೆ ಮತ್ತೆ ಮಳೆ ಬರಬೇಕು
ಅಂದರೇ ಈ ನೆಲ ಹಸಿರಾಗುವುದು
ಹಸಿರಾದೊಡೆ ಚಿಗುರಿತೆಂದು ನಾವು
ಭ್ರಮಿಸುವುದು, ಅದು ಜ್ವಾಲಾಮುಖಿಯ
ಮೇಲಿನ ಹಸಿರೆಂದು ಈ ಇಳೆ ಅದೆಷ್ಟು
ಸಲ ಗುಡುಗಿಲ್ಲ. ಗುಡುಗುತ್ತ ಹೇಳಿಲ್ಲ.
ಕೇಳುವ ಕಿವಿಯಿದ್ದರಲ್ಲವೆ?

ಮೊದಲು ಅವಳು ಹೀಗಿರಲಿಲ್ಲವಂತೆ
ಎಲ್ಲೆಲ್ಲೂ ಹಸಿರುಕ್ಕಿಸಿದ್ದಳಂತೆ
ಉಸಿರುಕ್ಕಿಸಿದ್ದಳಂತೆ ಕ್ಷಮಯಾ ಧರಿತ್ರಿ
ಎಂದು ಹಾಡಿ ಹೊಗಳಿಸಿಕೊಂಡಿದ್ದಳಂತೆ
ನಿನ್ನೊಳಗೇ ಈ ಬೇನೆ ಬೆಂಕಿಯೆ
ಕಾರಣವೇನಮ್ಮ ತಾಯೇ
ಮತ್ತೆ ಮತ್ತೆ ಬರುವ ಈ ಮಳೆಯೇ ಎಷ್ಟೋ ವಾಸಿ
ತಂಪಾಗಿಸಿದೆ ಈ ನಿನ್ನ ಬಿಸಿಯೊಡಲ ಬೆಂಕಿಯ
ಚೆಂಡಾಗಿ ಉರಿಯುತ್ತಿದ್ದೆ ನೀನು ಎಂದ ಆ
ವಿಜ್ಞಾನಿಗಳು ಪಾಪ ಪೆದ್ದರಾದರು. ಈಗಲೂ
ನೀನು ಉರಿಯುವ ಚೆಂಡೆಂದು ಅವರಿಗೆ ಕಾಣುವುದೇ ಇಲ್ಲ.
ಧಾರೆ ಹರಿವ ಮಳೆರಾಯನಿಗೇ ಗೊತ್ತು
ನಿನ್ನ ಗಾತ್ರ ತೂಕ ಪ್ರಮಾಣ, ತಮ್ಮ ಒಂಟಿ
ಮೇಜಿನ ಮುಂದೆ ಕುಳಿತು ಚಿತ್ರ ಬರೆಯುವ
ಆ ಪೆದ್ದರೀಗೇನು ಗೊತ್ತು?
ಆ ಮಳೆರಾಯ ಬಂದಾಗೊಮ್ಮೆ ನಿನಗೆ ಸಡಗರ
ಸದ್ಯ ನಿನ್ನ ಉರಿ ಸ್ವಲ್ಪ ಕಡಿಮೆ, ಮತ್ತೆ ಬಾಯಾ
ರುವವರೆಗೆ ಚಿಂತೆಯಿಲ್ಲ. ನಾವೂ ನಿನ್ನ ನೆನೆಯುತ್ತೇವೆ.
ನಿನ್ನೊಂದಿಗೇ ಹರಿಯುತ್ತೇವೆ ಅವನೊಂದಿಗೆ ನಿನ್ನ
ಈ ಜುಗಲ್‌ಬಂದಿಗೆ ಪ್ರೇಕ್ಷಕರೇ ನಾವೆಂದು
ಇನ್ನೂ ಅರಿವಾಗಿಲ್ಲವೇ ನಿನಗೆ, ಕಡೆಗಣಿಸಬಹುದೇ
ನಮ್ಮನ್ನು ಹೀಗೆ, ಇದು ತರವಲ್ಲ ತಾಯೆ ನಿನಗೆ
ಒಮ್ಮೆ ಒಂದು ಕ್ಷಣ ಸುಮ್ಮನಾಗು, ನಿಶ್ಚಿಂತಳಾಗು.
ಗರಗರ ತಿರುಗುವುದನ್ನೇನೂ ನಿಲ್ಲಿಸಬೇಡ
ಹಗಲೂ ರಾತ್ರಿ ಕಣ್ಣೆವೆ ತೆರೆದು ಮುಚ್ಚುವುದನ್ನೂ
ನಿಲ್ಲಿಸಬೇಡ ಒಳಗೊಳಗೇ ಅದುಮಿಟ್ಟ, ಆ
ಬೆಂಕಿಯನ್ನು ಅದರದೇ ಆದ ಬಾಯಿದೆ
ಯುಗಯುಗಗಳಿಂದ ಅಲ್ಲಿಂದ ಹರಿಯಬಿಡು
ಹೊರಗೆ, ತಣ್ಣಗಾಗು ಅಲ್ಲಿಗೆ, ಹೀಗೆ ಎಲ್ಲೆಲ್ಲೋ
ಗುಡುಗಾಡಿ ಅಪರಿಮಿತ ಯಕ್ಷಗಾನ ಬಯಲಾಡ
ಬೇಡ, ಕಿಲಾರಿಯಾಗಬೇಡ, ಗುಜರಾತಿನ
ಗುಡ್ಡಗಾಡುಗಳ ತಲೆ ಕಳಗು ಮಾಡಬೇಡ,
ಮತ್ತೆ ಮತ್ತೆ ಮಳೆ ಹೊಯ್ಯುತಿರಲೆಂದೇ
ನಿನ್ನ ಋತುಚಕ್ರ ತಿರುಗಿಸಿ ಆವಿಯಾಗಿಸಿ
ಮೋಡವಾಗಿಸಿ ಮಳೆಯಾಗಿಸಿ ಸುರಿಸು
ಉರಿಸಿ ಕಾಯಿಸು.
ಒಳಗಿನ ಬೆಂಕಿ ಇರಲಿ ಅಲ್ಲೇ
ಹೊರಗೆಲ್ಲಾ ಚಿಗುರಾಗಿ ಹಸಿರಾಗಿ ನಲಿ.
*****
-ಅನ್ವೇಷಣೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...