Home / ಕವನ / ಕವಿತೆ / ಮಳೆಯ ಹಾಡು

ಮಳೆಯ ಹಾಡು

ಮತ್ತೆ ಮಳೆ ಹೊಯ್ಯುತಿದೆ ಆದರೆ
ಎಲ್ಲಾ ನೆನಪಾಗುವುದಿಲ್ಲ.
ಮತ್ತೆ ಮತ್ತೆ ಮಳೆ ಬರಬೇಕು
ಅಂದರೇ ಈ ನೆಲ ಹಸಿರಾಗುವುದು
ಹಸಿರಾದೊಡೆ ಚಿಗುರಿತೆಂದು ನಾವು
ಭ್ರಮಿಸುವುದು, ಅದು ಜ್ವಾಲಾಮುಖಿಯ
ಮೇಲಿನ ಹಸಿರೆಂದು ಈ ಇಳೆ ಅದೆಷ್ಟು
ಸಲ ಗುಡುಗಿಲ್ಲ. ಗುಡುಗುತ್ತ ಹೇಳಿಲ್ಲ.
ಕೇಳುವ ಕಿವಿಯಿದ್ದರಲ್ಲವೆ?

ಮೊದಲು ಅವಳು ಹೀಗಿರಲಿಲ್ಲವಂತೆ
ಎಲ್ಲೆಲ್ಲೂ ಹಸಿರುಕ್ಕಿಸಿದ್ದಳಂತೆ
ಉಸಿರುಕ್ಕಿಸಿದ್ದಳಂತೆ ಕ್ಷಮಯಾ ಧರಿತ್ರಿ
ಎಂದು ಹಾಡಿ ಹೊಗಳಿಸಿಕೊಂಡಿದ್ದಳಂತೆ
ನಿನ್ನೊಳಗೇ ಈ ಬೇನೆ ಬೆಂಕಿಯೆ
ಕಾರಣವೇನಮ್ಮ ತಾಯೇ
ಮತ್ತೆ ಮತ್ತೆ ಬರುವ ಈ ಮಳೆಯೇ ಎಷ್ಟೋ ವಾಸಿ
ತಂಪಾಗಿಸಿದೆ ಈ ನಿನ್ನ ಬಿಸಿಯೊಡಲ ಬೆಂಕಿಯ
ಚೆಂಡಾಗಿ ಉರಿಯುತ್ತಿದ್ದೆ ನೀನು ಎಂದ ಆ
ವಿಜ್ಞಾನಿಗಳು ಪಾಪ ಪೆದ್ದರಾದರು. ಈಗಲೂ
ನೀನು ಉರಿಯುವ ಚೆಂಡೆಂದು ಅವರಿಗೆ ಕಾಣುವುದೇ ಇಲ್ಲ.
ಧಾರೆ ಹರಿವ ಮಳೆರಾಯನಿಗೇ ಗೊತ್ತು
ನಿನ್ನ ಗಾತ್ರ ತೂಕ ಪ್ರಮಾಣ, ತಮ್ಮ ಒಂಟಿ
ಮೇಜಿನ ಮುಂದೆ ಕುಳಿತು ಚಿತ್ರ ಬರೆಯುವ
ಆ ಪೆದ್ದರೀಗೇನು ಗೊತ್ತು?
ಆ ಮಳೆರಾಯ ಬಂದಾಗೊಮ್ಮೆ ನಿನಗೆ ಸಡಗರ
ಸದ್ಯ ನಿನ್ನ ಉರಿ ಸ್ವಲ್ಪ ಕಡಿಮೆ, ಮತ್ತೆ ಬಾಯಾ
ರುವವರೆಗೆ ಚಿಂತೆಯಿಲ್ಲ. ನಾವೂ ನಿನ್ನ ನೆನೆಯುತ್ತೇವೆ.
ನಿನ್ನೊಂದಿಗೇ ಹರಿಯುತ್ತೇವೆ ಅವನೊಂದಿಗೆ ನಿನ್ನ
ಈ ಜುಗಲ್‌ಬಂದಿಗೆ ಪ್ರೇಕ್ಷಕರೇ ನಾವೆಂದು
ಇನ್ನೂ ಅರಿವಾಗಿಲ್ಲವೇ ನಿನಗೆ, ಕಡೆಗಣಿಸಬಹುದೇ
ನಮ್ಮನ್ನು ಹೀಗೆ, ಇದು ತರವಲ್ಲ ತಾಯೆ ನಿನಗೆ
ಒಮ್ಮೆ ಒಂದು ಕ್ಷಣ ಸುಮ್ಮನಾಗು, ನಿಶ್ಚಿಂತಳಾಗು.
ಗರಗರ ತಿರುಗುವುದನ್ನೇನೂ ನಿಲ್ಲಿಸಬೇಡ
ಹಗಲೂ ರಾತ್ರಿ ಕಣ್ಣೆವೆ ತೆರೆದು ಮುಚ್ಚುವುದನ್ನೂ
ನಿಲ್ಲಿಸಬೇಡ ಒಳಗೊಳಗೇ ಅದುಮಿಟ್ಟ, ಆ
ಬೆಂಕಿಯನ್ನು ಅದರದೇ ಆದ ಬಾಯಿದೆ
ಯುಗಯುಗಗಳಿಂದ ಅಲ್ಲಿಂದ ಹರಿಯಬಿಡು
ಹೊರಗೆ, ತಣ್ಣಗಾಗು ಅಲ್ಲಿಗೆ, ಹೀಗೆ ಎಲ್ಲೆಲ್ಲೋ
ಗುಡುಗಾಡಿ ಅಪರಿಮಿತ ಯಕ್ಷಗಾನ ಬಯಲಾಡ
ಬೇಡ, ಕಿಲಾರಿಯಾಗಬೇಡ, ಗುಜರಾತಿನ
ಗುಡ್ಡಗಾಡುಗಳ ತಲೆ ಕಳಗು ಮಾಡಬೇಡ,
ಮತ್ತೆ ಮತ್ತೆ ಮಳೆ ಹೊಯ್ಯುತಿರಲೆಂದೇ
ನಿನ್ನ ಋತುಚಕ್ರ ತಿರುಗಿಸಿ ಆವಿಯಾಗಿಸಿ
ಮೋಡವಾಗಿಸಿ ಮಳೆಯಾಗಿಸಿ ಸುರಿಸು
ಉರಿಸಿ ಕಾಯಿಸು.
ಒಳಗಿನ ಬೆಂಕಿ ಇರಲಿ ಅಲ್ಲೇ
ಹೊರಗೆಲ್ಲಾ ಚಿಗುರಾಗಿ ಹಸಿರಾಗಿ ನಲಿ.
*****
-ಅನ್ವೇಷಣೆ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...