ನನಗೆ ತಿಳಿಯದ ಗಣಿತ

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ.
ಇವುಗಳ ಸುತ್ತವೇ ಸುತ್ತುವ ಜ್ಞಾನೀ.
ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು
ನಿನ್ನ ಲೆಕ್ಕ ಮುಗಿಯುವುದು ಯಾವಾಗ ?

ಲೆಕ್ಕ ಮಾಡುತ್ತೀಯ ?
ನಿನ್ನಪ್ಪನ ಪಗಾರೆಷ್ಟು? ಮನೆಯ ಬಾಡಿಗೆ ಎಷ್ಟು?
ಇಲಕ್ಟ್ರಿಕ್ ಬಿಲ್ ಎಷ್ಟು ? ಕೊನೆಗೆ ಉಳಿಯುವುದೆಷ್ಟು ?
ಮಿಗಿಲಾಗಿ, ತಲೆ ತುಂಬುವ, ತಲೆ ತಿನ್ನುವ ಸಮಸ್ಯೆಗಳೆಷ್ಟು ?
ಅದಕ್ಕೆ ಪರಿಮಿತಿ ಉಂಟೆ ? ಹೇಳು- ಇತಿಮಿತಿ ಉಂಟೆ ?

ಒಮ್ಮೆ ಪೆನ್ನು ಮುಚ್ಚು, ಕಣ್ಣ ಬಿಚ್ಚು
`ಅಬ್ಬ ! ಆಹಾ’ ಆಕಾಶ ನೋಡು – ಈ ಭೂಮಿ ನೋಡು
ಎತ್ತರ ಅಳೆ- ಆಷ್ಟೆ
ಎತ್ತರ ಬೆಳೆ
ಆಕಾಶಕ್ಕೆ ಮೇರೆ ಎಲ್ಲಿ ? ನಕ್ಷತ್ರಗಳ ಸಂಖ್ಯೆ ಎಷ್ಟು ?
ಇಷ್ಟು ಸಣ್ಣ ತಲೆಯಲ್ಲಿ ಅಂಥಂಥ ಘನ ವಿಚಾರ
ಹೊಳೆಯುವುದು ಹೇಗೆ ? ಅಲ್ಲ-
ಅವೆಲ್ಲ ತುಂಬಿದ್ದು ಹೇಗೆ?
ಲೆಕ್ಕ ಸಾಧ್ಯವಿಲ್ಲ ಅದಕ್ಕೆ ಸೂತ್ರ ಇಲ್ಲ

ಇದ್ದಲ್ಲಿ
ಗುಣಿಸು ಭಾಗಿಸು
ಕೂಡು-ಕಳೆ
ಬದುಕಿ ನುತ್ತರ ಏನು?
ಗಣಿತಜ್ಞ.
ನೀನು ಇಂಥಲ್ಲಿ ನಿನ್ನ ಲೆಕ್ಕದ ಗಣಿ-ತಜ್ಞನಾಗುವುದೇ ಜಾಸ್ತಿ

ನೀನು ಬೆಟ್ಟ ಏರಲಾರೆ-ನದಿ ಇಳಿಯಲಾರೆ
ಪ್ರತಿ ದಿವಸ ಮುಳುಗುವ ಸೂರ್ಯನ ಕಿರಣ ಎಣಿಸಲಾರೆ
ತಂಗಾಳಿಯ ಪಿಸುಮಾತಿಗೆ ವ್ಯಾಖ್ಯೆ ಕೊಡಲಾರೆ

ಇವೆಲ್ಲದರ ಒಳಗೆ ಅವಿತ
ನಿನ್ನ ಸಂಖ್ಯೆಗಳು, ಎಂದೂ ಸುಳ್ಳಾಗದ ಸಿದ್ಧಾಂತ
ಪಾಪ! ನೀ ರಚಿಸುವ ವೃತ್ತದ ಪಥವೇ ನೀನು
ನೀನು ಹಾರಲಾರೆ ತಪ್ಪಿಯೂ
ಬೀಳಲಾರೆ

ಒಂದು ಭಾಗಿಲೆ ಝೀರೋ (೧/೦)
ಝೀರೋ ಭಾಗಿಲೆ ಝೀರೋ (೦/೦)
ಉತ್ತರ ಎಷ್ಟು ?
ನಿನ್ನ ಲೆಕ್ಕ ಮುಗಿಯುವುದಿಲ್ಲ
ಅಸಂಬದ್ಧ-ಅನಿಶ್ಚಿತ-ಅನಂತ
ಹೊರಗೆ ಬರದ ನಿನ್ನ ಲೆಕ್ಕಾಚಾರ
ನನಗೆ ನಿರ್ಜೀವ – ಪೂರ ನಿಶ್ಚೇತ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೨೮
Next post ನಗೆ ಡಂಗುರ – ೨೯

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…