ನನಗೆ ತಿಳಿಯದ ಗಣಿತ

ಒಂದು ಎರಡು ಮೂರು, (a + b)2 ತೀಟಾ, ತ್ರಿಕೋನ. ಕರ್ಣ ವಿಕರ್ಣ.
ಇವುಗಳ ಸುತ್ತವೇ ಸುತ್ತುವ ಜ್ಞಾನೀ.
ಪೇಪರ್ ತುಂಬಿದವು ; ಕೈ ಮಸಿಯಾಯ್ತು; ಶಾಯಿ ಖರ್ಚಾಯ್ತು
ನಿನ್ನ ಲೆಕ್ಕ ಮುಗಿಯುವುದು ಯಾವಾಗ ?

ಲೆಕ್ಕ ಮಾಡುತ್ತೀಯ ?
ನಿನ್ನಪ್ಪನ ಪಗಾರೆಷ್ಟು? ಮನೆಯ ಬಾಡಿಗೆ ಎಷ್ಟು?
ಇಲಕ್ಟ್ರಿಕ್ ಬಿಲ್ ಎಷ್ಟು ? ಕೊನೆಗೆ ಉಳಿಯುವುದೆಷ್ಟು ?
ಮಿಗಿಲಾಗಿ, ತಲೆ ತುಂಬುವ, ತಲೆ ತಿನ್ನುವ ಸಮಸ್ಯೆಗಳೆಷ್ಟು ?
ಅದಕ್ಕೆ ಪರಿಮಿತಿ ಉಂಟೆ ? ಹೇಳು- ಇತಿಮಿತಿ ಉಂಟೆ ?

ಒಮ್ಮೆ ಪೆನ್ನು ಮುಚ್ಚು, ಕಣ್ಣ ಬಿಚ್ಚು
`ಅಬ್ಬ ! ಆಹಾ’ ಆಕಾಶ ನೋಡು – ಈ ಭೂಮಿ ನೋಡು
ಎತ್ತರ ಅಳೆ- ಆಷ್ಟೆ
ಎತ್ತರ ಬೆಳೆ
ಆಕಾಶಕ್ಕೆ ಮೇರೆ ಎಲ್ಲಿ ? ನಕ್ಷತ್ರಗಳ ಸಂಖ್ಯೆ ಎಷ್ಟು ?
ಇಷ್ಟು ಸಣ್ಣ ತಲೆಯಲ್ಲಿ ಅಂಥಂಥ ಘನ ವಿಚಾರ
ಹೊಳೆಯುವುದು ಹೇಗೆ ? ಅಲ್ಲ-
ಅವೆಲ್ಲ ತುಂಬಿದ್ದು ಹೇಗೆ?
ಲೆಕ್ಕ ಸಾಧ್ಯವಿಲ್ಲ ಅದಕ್ಕೆ ಸೂತ್ರ ಇಲ್ಲ

ಇದ್ದಲ್ಲಿ
ಗುಣಿಸು ಭಾಗಿಸು
ಕೂಡು-ಕಳೆ
ಬದುಕಿ ನುತ್ತರ ಏನು?
ಗಣಿತಜ್ಞ.
ನೀನು ಇಂಥಲ್ಲಿ ನಿನ್ನ ಲೆಕ್ಕದ ಗಣಿ-ತಜ್ಞನಾಗುವುದೇ ಜಾಸ್ತಿ

ನೀನು ಬೆಟ್ಟ ಏರಲಾರೆ-ನದಿ ಇಳಿಯಲಾರೆ
ಪ್ರತಿ ದಿವಸ ಮುಳುಗುವ ಸೂರ್ಯನ ಕಿರಣ ಎಣಿಸಲಾರೆ
ತಂಗಾಳಿಯ ಪಿಸುಮಾತಿಗೆ ವ್ಯಾಖ್ಯೆ ಕೊಡಲಾರೆ

ಇವೆಲ್ಲದರ ಒಳಗೆ ಅವಿತ
ನಿನ್ನ ಸಂಖ್ಯೆಗಳು, ಎಂದೂ ಸುಳ್ಳಾಗದ ಸಿದ್ಧಾಂತ
ಪಾಪ! ನೀ ರಚಿಸುವ ವೃತ್ತದ ಪಥವೇ ನೀನು
ನೀನು ಹಾರಲಾರೆ ತಪ್ಪಿಯೂ
ಬೀಳಲಾರೆ

ಒಂದು ಭಾಗಿಲೆ ಝೀರೋ (೧/೦)
ಝೀರೋ ಭಾಗಿಲೆ ಝೀರೋ (೦/೦)
ಉತ್ತರ ಎಷ್ಟು ?
ನಿನ್ನ ಲೆಕ್ಕ ಮುಗಿಯುವುದಿಲ್ಲ
ಅಸಂಬದ್ಧ-ಅನಿಶ್ಚಿತ-ಅನಂತ
ಹೊರಗೆ ಬರದ ನಿನ್ನ ಲೆಕ್ಕಾಚಾರ
ನನಗೆ ನಿರ್ಜೀವ – ಪೂರ ನಿಶ್ಚೇತ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೨೮
Next post ನಗೆ ಡಂಗುರ – ೨೯

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…

  • ಕಂಬದಹಳ್ಳಿಗೆ ಭೇಟಿ

    ಪ್ರಕರಣ ೪ ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು, ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್‍ಸೂಟು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…