ಕಡಲುಕ್ಕದಿರು

ಕಡಲುಕ್ಕದಿರು ಬೆಂಕಿಯೆ ನೀ ಸೊಕ್ಕದಿರು
ಗಿರಿಯೆ ನೀ ಜರಿಯದಿರು
ನಮಗಿರುವುದಿದು ಒಂದೇ ಭೂಮಿ
ಭುವನದ ಮಕುಟದಂಥ ಸುಂದರ ಭೂಮಿ

ಜ್ವಾಲಾಮುಖಿಯೆ ನೀ ಉಗುಳದಿರು
ಉಲ್ಕೆಯೆ ನೀ ಬೀಳದಿರು
ಗಾಳಿಯೆ ನೀ ಮುಗಿಯದಿರು
ಮಳೆಯೇ ನೀ ಮಾಯದಿರು
ನಮಗಿರುವುದಿದು ಒಂದೇ ಭೂಮಿ
ಭುವನದ ಹೃದಯದಂಥ ಸುಂದರ ಭೂಮಿ

ನದಿಯೇ ನೀ ಬತ್ತದಿರು
ಹಸಿರೇ ನೀ ಕಮರದಿರು
ಮರವೇ ನೀ ಸೊರಗದಿರು
ಫಲವೇ ನೀ ಹಾಳಾಗದಿರು
ನಮಗಿರುವುದಿದು ಒಂದೇ ಭೂಮಿ
ಭುವನದ ಮಡಿಲಿನಂಥ ಸುಂದರ ಭೂಮಿ

ಭ್ರಮರವೆ ನೀ ಚಲಿಸುತಿರು
ಹಕ್ಕಿಯೆ ನೀ ಹಾರುತಿರು
ಹೂವೇ ನೀ ಬಿರಿಯುತಿರು
ದೈವವೆ ನೀ ಕಾಪಾಡುತಿರು
ನಮಗಿರುವುದಿದು ಒಂದೇ ಭೂಮಿ
ಭುವನದ ಮಾಯೆಯಂಥ ಸುಂದರ ಭೂಮಿ

ನಮಗಿರುವುದು ಒಂದೇ ಭೂಮಿ
ಭುವನದ ಭಾಗ್ಯದಂಥ ಸುಂದರ ಭೂಮಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇನ್ನು ರೋಬೊಟ್‌ಗಳ ಕೆಲಸ
Next post ಮೌನವೂ ಮಾತಾಡುತ್ತದೆ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

cheap jordans|wholesale air max|wholesale jordans|wholesale jewelry|wholesale jerseys