ನನ್ನ ಪುಟ್ಟ ಕೆಂಪು ಹೃದಯದೊಳಗೆ
ಅದೆಷ್ಟು ನೋವಿನ ಲಂಗರುಗಳು
ಈ ಪುಟ್ಟ ಕಪ್ಪು ಕಣ್ಣುಗಳೊಳಗೆ
ಅದೆಷ್ಟು ನೀರ ಸಾಗರಗಳು.
ನನ್ನ ಪುಟ್ಟ ಮನೆಯ ಅಂಗಳದೊಳಗೆ
ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು,
ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ
ಅದೆಷ್ಟು ಬೆಳಕಿನ ಸೆಳಕುಗಳು ಮೂಡಿವೆ.
ಗಾಳಿಗೆ ಆರಿ ಹೋಗುವ ದೀಪಕ್ಕೆ
ನನ್ನದೇ ಮಣ್ಣ ಗುಡಿಸಲು ಆಸರೆಯಾಗಿದೆ.
ಲೋಕದಲಿ ಕೊನೆಯ ತನಕ ಉರಿಯುವ
ಯಾವುದಾದರೊಂದು ದೀಪ ಉಳಿದಿದೆಯೇ?
ಗುಟ್ಟುಗಳೆಲ್ಲಾ ಬಯಲಾಗುತ್ತವೆ ಇಲ್ಲಿಯೇ
ಗಾಢ ಮೌನವೂ ಮಾತಾಡುತ್ತದೆ ಇಲ್ಲಿಯೇ
ಮಾತಿಗೆ ಯಾಕೆ ಬೇಕು ಹೇಳಿ
ದೇಶ, ಕೋಶ, ಭಾಷೆ, ಶಬ್ದ, ಧ್ವನಿ,
ಧ್ವನಿಯಿಲ್ಲ, ಶಬ್ದವಿಲ್ಲ, ಲಿಪಿಯಿಲ್ಲ,
ನನ್ನ ಮೌನದ, ಕಣ್ಣಿನ ಭಾಷೆಗೆ
ಲೋಕದ ಭಾಷೆಗಳು ಸಾಟಿಯಿಲ್ಲ.
*****
Related Post
ಸಣ್ಣ ಕತೆ
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ವಿರೇಚನೆ
ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…