ನಗುವ ಗಗನವೆ ಮುಗಿಲ ಮೇಘವೆ

ನಗುವ ಗಗನವೆ ಮುಗಿಲ ಮೇಘವೆ
ಯಾಕೆ ನನ್ನನು ಕೂಗುವೆ
ಮುಗಿಲ ನೀರಿನ ಮುತ್ತು ತೂರುತ
ಯಾಕೆ ನನ್ನನು ಕಾಡುವೆ

ಗಟ್ಟಿ ಹುಡುಗನು ಗುಟ್ಟು ಒಡೆದನೆ
ನನ್ನ ಸೀರೆಯ ಸೆಳೆದನೆ
ಅಂತರಾತ್ಮದ ಗಿಡದ ಮಂಗನು
ಅಂಗುಲಾಗವ ಹೊಡೆದನೆ

ಇಗಾ ಪಾತರಗಿತ್ತಿ ಸುಬ್ಬಿಗೆ
ಹೂವು ಧೂಳಿಯ ಉಗ್ಗಿತೇ
ಮಂದ ಬುದ್ಧಿಯ ಮರದ ಇಣಚಿಗೆ
ಬಿಸಿಲ ಬಡಿಗೆಯು ಬಡಿಯಿತೇ

ಅಂತರಾತ್ಮದ ಆಳ ಕೊಳದಲಿ
ಇಗೊ ತಾವರೆ ಅರಳಿತು
ಮಳೆಯು ಸುರಿಯಿತು ಹೊಳೆಯು ಹರಿಯಿತು
ಕಣ್ಣು ಮಿಲನವ ಪಡೆಯಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬವಣೆ ಗೂಡು
Next post ಹಳ್ಳಿ ಬೆಳೆಯದೆ ಹಾಳು ವಿಷ ಕಳೆವುದೆಂತು?

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…