ಚೈತ್ರ ಬಂದರೇನು?
ಚಿಗುರಿಲ್ಲವಲ್ಲ
ವಸಂತ ಬಂದರೇನು
ಹೂ ಅರಳಿಲ್ಲವಲ್ಲ.
ಯುಗಾದಿ ಬಂದರೇನು?
ಹರುಷವಿಲ್ಲವಲ್ಲ
ಕಟ್ಟಿದ ಕನಸುಗಳು
ನನಸಾಗದೆ ಬಂಧಿಯಾಗಿವೆ
ಭೂತದ ಪಂಜರದಲ್ಲಿ
ಆಸೆ ಭರವಸೆಗಳು ದಹಿಸಿವೆ
ಅಂತರಂಗದ ಅಗ್ನಿಕುಂಡದಲ್ಲಿ
ಹೃದಯ ಮನಸ್ಸುಗಳೆರಡು
ಶಿಲೆಯಾಗಿವೆ.
ಜಡಭರತ | ಸಮಾಧಿಯೊಳಗೆ
ಮುಂದೇನು? ಮುಂದೇನು?
ಭಯಾಂತಂಕದ ಬಿಳಿಲುಗಳು
ನೇತಾಡುತ್ತಿವೆ ಶವದಂತೆ
ಕಾಲವೃಕ್ಷದಲ್ಲಿ.
ಹುಟ್ಟು ಸಾವು, ನೋವು ನಲಿವು
ಬೆಲ್ಲ ಬೇವು
ತಾಕಲಾಟದ ತಕ್ಕಡಿಯಲ್ಲಿ.
ಯುಗಾದಿ ಬಂದರೇನು?
ಬಾರದಿದ್ದರೇನು?
ಬದಲಾಗದು ಸ್ವರತಾನ
ಅದೇ ರಾಗ ಅದೇ ಹಾಡು
ಬದುಕು ಬರಡು
ಬವಣೆ ಗೂಡು.
*****
Related Post
ಸಣ್ಣ ಕತೆ
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಶಾಕಿಂಗ್ ಪ್ರೇಮ ಪ್ರಕರಣ
ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…