ಚೈತ್ರ ಬಂದರೇನು?
ಚಿಗುರಿಲ್ಲವಲ್ಲ
ವಸಂತ ಬಂದರೇನು
ಹೂ ಅರಳಿಲ್ಲವಲ್ಲ.
ಯುಗಾದಿ ಬಂದರೇನು?
ಹರುಷವಿಲ್ಲವಲ್ಲ
ಕಟ್ಟಿದ ಕನಸುಗಳು
ನನಸಾಗದೆ ಬಂಧಿಯಾಗಿವೆ
ಭೂತದ ಪಂಜರದಲ್ಲಿ
ಆಸೆ ಭರವಸೆಗಳು ದಹಿಸಿವೆ
ಅಂತರಂಗದ ಅಗ್ನಿಕುಂಡದಲ್ಲಿ
ಹೃದಯ ಮನಸ್ಸುಗಳೆರಡು
ಶಿಲೆಯಾಗಿವೆ.
ಜಡಭರತ | ಸಮಾಧಿಯೊಳಗೆ
ಮುಂದೇನು? ಮುಂದೇನು?
ಭಯಾಂತಂಕದ ಬಿಳಿಲುಗಳು
ನೇತಾಡುತ್ತಿವೆ ಶವದಂತೆ
ಕಾಲವೃಕ್ಷದಲ್ಲಿ.
ಹುಟ್ಟು ಸಾವು, ನೋವು ನಲಿವು
ಬೆಲ್ಲ ಬೇವು
ತಾಕಲಾಟದ ತಕ್ಕಡಿಯಲ್ಲಿ.
ಯುಗಾದಿ ಬಂದರೇನು?
ಬಾರದಿದ್ದರೇನು?
ಬದಲಾಗದು ಸ್ವರತಾನ
ಅದೇ ರಾಗ ಅದೇ ಹಾಡು
ಬದುಕು ಬರಡು
ಬವಣೆ ಗೂಡು.
*****
Related Post
ಸಣ್ಣ ಕತೆ
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…