ವರ್‍ತಮಾನ

ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ
ಮುನ್ನೆಡೆದಿದೆ ನವಯುಗದ ನವಚೇತನ
ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ ||

ಕರ್‍ನಾಟ ಗತಕಾಲದಿ ಮೆರೆದಿದೆ
ಕಲಿ ಜಾಗೃತದ ಅರಿವ ಮೂಡಿಸುವಡೆಗೆ
ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ ಮರ್‍ಮತೆ ಸಾಧನಕೆ ||

ಮನ್ವಂತರದ ಪುರಭಾವೆಯಲಿ
ಭಾವತೆಯ ಹೊಂಗಿರಣ ಬೆಳಗಿ ಹಸನಾಗಿಹ
ಗಮ್ಯ ರೂಪತೆಯೆಡೆಗೆ ಕೈ ಚಾಚಿ ಕರೆದಿದೆ ಸಿಂಹಸ್ವಪ್ನ ||

ಆಂತರಿಕ ಸ್ವಪ್ಪ ತಾಣದಲಿ ಭದ್ರತೆಯ
ಬುನಾದಿಯ ಬಿಂಬದಿಂ ಪ್ರತಿಬಿಂಬವಾಗಿ
ಯಂತ್ರಮಾನವ ಮಂತ್ರತೆಯ ಮುಗ್ಧತೆಯನ್ನು ತೋರಿದೆ ||

ಸುಧ್ವಾನ ಹಕ್ಕಿ ಬೆಳ್ಮುಗಿಲ ಸೇರಿ
ಸ್ವಾತಂತ್ರ್ಯದ ವರ್‍ತಮಾನದಿರುಳ ಶುಭ್ರತೆಯ
ಐಕ್ಯತೆಯ ತೋರಿ ಆರ್‍ತನಾದದ ಮೆಟ್ಟಲೇರಿ ನಿಂತಿದೆ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೆಯ ಮಾಯೆ
Next post ದಾಹ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…