ದಾಹ

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ
ನಾ, ಧೋ ಎಂಬ ಸುರಿವ ಮಳೆಗೆ
ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ
ಅಲೆಯುತ್ತಿರುವೆ.

ಚಳಿ ನನ್ನ ನರನಾಡಿಗಳಲಿ ಇಳಿದು
ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು
ನಭದಲ್ಲಿ ಹಾರುತ್ತಿದೆ ತಲೆಯತ್ತಿ ಒಂಟಿ ಹಕ್ಕಿ,

ನಡು ನೀರಿನ ಸೆಳೆತ ಕಾಲುಗಳ ಹಿಡಿದು
ಅಲ್ಲಾಡಿಸಿವೆ ಮತ್ತೆ ಜೋಲಿ ತಪ್ಪಿದ ಹೆಜ್ಜೆಗಳು
ವಿಲವಿಲ ಒದ್ದಾಡುತ್ತ ಹನಿಯುವ ಕಣ್ಣೀರು.

ತಿಳಿಯುತ್ತಿಲ್ಲ ಯಾವ ಪ್ರೀತಿಯೂ ಈ
ಎದೆಯಾಳಕ್ಕೆ ಇಳಿದು ತಂಪು ಹಾಯಿಸಿದ ಪರಿ
ಹರಿಯುತ್ತಿದೆ ಕಿರುತೊರೆ ಎದೆ ಬಿರಿಯುವ ಹಾಡು.

ಎಂದಿಗೂ ಅರಿವಿಗೆ ಬರದು ನೀ ನನ್ನ
ಮನೆಯ ಕದ ತಟ್ಟಿದ ಮಂಜಾವು ಮತ್ತೆ
ಸರಳುಗಳಾಚೆಯ ನಿನ್ನ ಬೆಳಕಿನ ಕಿರಣಗಳು.

ನಾನೇನು ಹಾಡುತ್ತಿಲ್ಲ ಪ್ರಲಾಪದ ರಾಗಗಳ,
ನಿನ್ನ ಹಚ್ಚಿಕೊಂಡಿರುವ ಪ್ರೀತಿ ಮತ್ತೆ ಎಂದೂ
ನಿನ್ನ ಅರಿವಿಗೆ ಬಾರದ ಅರಿವು ನಾನೀಗ ಮೌನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರ್‍ತಮಾನ
Next post ದ್ರೌಪದಿ ಸ್ವಯಂವರ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…