ದಾಹ

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ
ನಾ, ಧೋ ಎಂಬ ಸುರಿವ ಮಳೆಗೆ
ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ
ಅಲೆಯುತ್ತಿರುವೆ.

ಚಳಿ ನನ್ನ ನರನಾಡಿಗಳಲಿ ಇಳಿದು
ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು
ನಭದಲ್ಲಿ ಹಾರುತ್ತಿದೆ ತಲೆಯತ್ತಿ ಒಂಟಿ ಹಕ್ಕಿ,

ನಡು ನೀರಿನ ಸೆಳೆತ ಕಾಲುಗಳ ಹಿಡಿದು
ಅಲ್ಲಾಡಿಸಿವೆ ಮತ್ತೆ ಜೋಲಿ ತಪ್ಪಿದ ಹೆಜ್ಜೆಗಳು
ವಿಲವಿಲ ಒದ್ದಾಡುತ್ತ ಹನಿಯುವ ಕಣ್ಣೀರು.

ತಿಳಿಯುತ್ತಿಲ್ಲ ಯಾವ ಪ್ರೀತಿಯೂ ಈ
ಎದೆಯಾಳಕ್ಕೆ ಇಳಿದು ತಂಪು ಹಾಯಿಸಿದ ಪರಿ
ಹರಿಯುತ್ತಿದೆ ಕಿರುತೊರೆ ಎದೆ ಬಿರಿಯುವ ಹಾಡು.

ಎಂದಿಗೂ ಅರಿವಿಗೆ ಬರದು ನೀ ನನ್ನ
ಮನೆಯ ಕದ ತಟ್ಟಿದ ಮಂಜಾವು ಮತ್ತೆ
ಸರಳುಗಳಾಚೆಯ ನಿನ್ನ ಬೆಳಕಿನ ಕಿರಣಗಳು.

ನಾನೇನು ಹಾಡುತ್ತಿಲ್ಲ ಪ್ರಲಾಪದ ರಾಗಗಳ,
ನಿನ್ನ ಹಚ್ಚಿಕೊಂಡಿರುವ ಪ್ರೀತಿ ಮತ್ತೆ ಎಂದೂ
ನಿನ್ನ ಅರಿವಿಗೆ ಬಾರದ ಅರಿವು ನಾನೀಗ ಮೌನಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರ್‍ತಮಾನ
Next post ದ್ರೌಪದಿ ಸ್ವಯಂವರ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys