ತಾಯೆಯ ಮಾಯೆ

ತಾಯೆ ಓ ಜಗದ ಮಾಯೆ
ಬಂಧಿಸಿರುವೆ ನಿ ಎತ್ತೆತ್ತಲು
ನಿನ್ನ ಸ್ಮರಣಿಯ ಮರೆಸಿ ಮತ್ತೆ
ದುಕ್ಕ ದುಮ್ಮಾನಗಳ ಸುತ್ತಲೂ

ನಿನ್ನ ಜ್ವಾಲೆಯಂತಹ ಕಂಗಳು
ನಿನ್ನ ನಗುವು ಬೆಳದಿಂಗಳು
ನಿನ್ನ ಕೌದ್ರಾವತಾರದ ಕೆನ್ನಾಲಗೆ
ಮೂಲೋಕಕ್ಕೆ ಸುಡುವ ಇಂಗಳು

ನಿನ್ನ ನರ್‍ತನವೂ ತಾಂಡವ ಲೀಲೆ
ನಿನ್ನ ಕೋಪಾಗ್ನಿ ದುಷ್ಟರಿಗಾಗಿ
ನಿನ್ನ ಕೃಪಕಟಾಕ್ಷ ಭಕ್ತರ ಮೇಲೆ
ನಿನ್ನ ಪ್ರೇಮಾಮೃತ ಶಿಷ್ಟರಿಗಾಗಿ

ತಾಯೆ ನಿನ್ನೆದುರಿನಲಿ ನಾ
ನನ್ನ ಅಂಗೈ ಚಾಚಿ ಬೇಡುತ್ತಿರುವೆ
ನಿನ್ನ ದರುಶನಕ್ಕಾಗಿ ನಿತ್ಯವೂ
ನಾನಿಲ್ಲೆ ಕೊರಗಿ ಬಾಡುತ್ತಿರುವೆ

ಸಾಧು ಸಂತರಿಗೂ ದರುಶನವನಿತ್ತೆ
ನಿನ್ನ ನಂಬಿದವರಿಗೂ ಕೈ ಹಿಂಡಿ
ನಾನು ಈಗ ನಿನ್ನ ಬಿಡಲಾರೆ
ಮಾಣಿಕ್ಯ ವಿಠಲ ಸಲಹು ತಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೬
Next post ವರ್‍ತಮಾನ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…