ಎದ್ದೇಳಿ ಎದ್ದೇಳಿ ಸೋದರರೇ

ಎದ್ದೇಳಿ ಎದ್ದೇಳಿ ಸೋದರರೇ
ಕನ್ನಡದಾ ವೀರಯೋಧರರೇ
ಕನ್ನಡದಾ ಮಣ್ಣಲ್ಲಿ ಮಣ್ಣಾಗಿ
ಕನ್ನಡದಾ ನೆಲದ ಹಸಿರಾಗಿ ||

ಬಡಿದೆಬ್ಬಿಸುತಿಹಳು ತಾಯಿ
ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ
ನುಡಿಯೊಂದ ಕೇಳಿ ಒಲವಿಂದೇ
ತೂಕಡಿಸದಿರಿ ತೂಕಡಿಸದಿರಿ ಮತ್ತೆ
ತಾಯೆ ಸೆರೆಯಲ್ಲಿ ನೀವಾಗಿ
ಭಾವಪರವಶರಾಗಿ ದಾಸ್ಯವನು ನೀಗಿಸಿ ||

ಕನ್ನಡತನದ ಐಸಿರಿಯ ಹೊಳೆಯಹರಿಸಿ
ಆತ್ಮಬಲದಿಂ ಅಭಿಮಾನ ಹಿರಿಮೆಯ
ಬೀಜ ಬಿತ್ತಿ ಮತ್ಸರವ ತೊರೆದು
ಸ್ನೇಹ ಹಸ್ತ ಸಿರಿತನದ ಒಡೆತನದ
ಹೊಸ್ತಿಲಲ್ಲಿ ಬಾಳಗರಿಮೆಯ ಕಟ್ಟ ಬನ್ನಿ ||

ಬಾಳ್ವತೆಯ ಧೃಡ ಸಂಕಲ್ಪದ
ಜ್ಯೋತಿ ಬೆಳಗಿ ಅನಂತಕಾನನದ
ಅಂತರಂಗದಿ ಕನ್ನಡಾಂಬೆಯ ಮಡಿಲ
ಹೂವಾಗಿ ಅರಳಿ ಸೊಬಗನ್ನು ಚೆಲ್ಲಿ
ಮಾನ್ಯತೆಯ ಮೆಟ್ಟಿಲೇರಿ ಭವ್ಯತೆಯಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕದ ಮನೆ
Next post ಕಾಂಡ ಬೇರುಗಳ ಕಲರವ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

cheap jordans|wholesale air max|wholesale jordans|wholesale jewelry|wholesale jerseys