ಎದ್ದೇಳಿ ಎದ್ದೇಳಿ ಸೋದರರೇ

ಎದ್ದೇಳಿ ಎದ್ದೇಳಿ ಸೋದರರೇ
ಕನ್ನಡದಾ ವೀರಯೋಧರರೇ
ಕನ್ನಡದಾ ಮಣ್ಣಲ್ಲಿ ಮಣ್ಣಾಗಿ
ಕನ್ನಡದಾ ನೆಲದ ಹಸಿರಾಗಿ ||

ಬಡಿದೆಬ್ಬಿಸುತಿಹಳು ತಾಯಿ
ಮೊರೆ ಕೇಳಿ ಕನ್ನಡದಾದೀಪ ಹಚ್ಚಿ ಬೆಳಗಿ
ನುಡಿಯೊಂದ ಕೇಳಿ ಒಲವಿಂದೇ
ತೂಕಡಿಸದಿರಿ ತೂಕಡಿಸದಿರಿ ಮತ್ತೆ
ತಾಯೆ ಸೆರೆಯಲ್ಲಿ ನೀವಾಗಿ
ಭಾವಪರವಶರಾಗಿ ದಾಸ್ಯವನು ನೀಗಿಸಿ ||

ಕನ್ನಡತನದ ಐಸಿರಿಯ ಹೊಳೆಯಹರಿಸಿ
ಆತ್ಮಬಲದಿಂ ಅಭಿಮಾನ ಹಿರಿಮೆಯ
ಬೀಜ ಬಿತ್ತಿ ಮತ್ಸರವ ತೊರೆದು
ಸ್ನೇಹ ಹಸ್ತ ಸಿರಿತನದ ಒಡೆತನದ
ಹೊಸ್ತಿಲಲ್ಲಿ ಬಾಳಗರಿಮೆಯ ಕಟ್ಟ ಬನ್ನಿ ||

ಬಾಳ್ವತೆಯ ಧೃಡ ಸಂಕಲ್ಪದ
ಜ್ಯೋತಿ ಬೆಳಗಿ ಅನಂತಕಾನನದ
ಅಂತರಂಗದಿ ಕನ್ನಡಾಂಬೆಯ ಮಡಿಲ
ಹೂವಾಗಿ ಅರಳಿ ಸೊಬಗನ್ನು ಚೆಲ್ಲಿ
ಮಾನ್ಯತೆಯ ಮೆಟ್ಟಿಲೇರಿ ಭವ್ಯತೆಯಲಿ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೋಕದ ಮನೆ
Next post ಕಾಂಡ ಬೇರುಗಳ ಕಲರವ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…