ಲೋಕದ ಮನೆ

ಲೋಕದ ಮನೆ ಇದು ಕರ್‍ಮ ಭೂಮಿ
ಕರ್‍ಮಕ್ಕೆ ಮೂಲಾಧಾರ ಮನವು ಹೌದು
ಮನಸ್ಸನ್ನು ಬಿಡದಂತೆ ನಿಗ್ರಹಿಸು ಜೋಕೆ
ಮನವು ಹೇಳಿದಂತೆ ನಿ ಓಡಲೇಕೆ!

ಕಷ್ಟವೊ ಸುಖವೊ ಸಾಂತ್ವನದಿ ಸ್ವೀಕರಿಸು
ಕಷ್ಟಗಳ ನಡುವೆಯೂ ಶಿವನ ಅನುಭವಿಸು
ಈ ಬಾಳೇ ನಿನಗೊಂದು ಪರೀಕ್ಷಾ ಕೇಂದ್ರ
ಉತ್ತೀರ್‍ಣನಾದರಾಯ್ತು ನೀ ನಾಗುವೆ ಇಂದ್ರ

ಪ್ರತಿಯೊಂದು ಮಾಡುವಾಗ ಯೋಚನೆ ಇರಲಿ
ಆ ದೇವರನ್ನು ಕಾಣುವ ಯೋಜನೆ ಇರಲಿ
ನಿನ್ನವರೆಲ್ಲ ನಿನ್ನ ದೇಹಕ್ಕೆ ಸಂಬಂಧವಿರಲಿ
ನಿನ್ನಾತ್ಮ ಮಾತ್ರ ಭಗವನಗೆ ಅರ್‍ಪಿಸಿರಲಿ

ಧ್ಯಾನ ಮಾಡು ನಿತ್ಯ ಶಿವನ ಪರಾಕಾಷ್ಠೆಯಲಿ
ನಿನ್ನ ಪ್ರ್‍ಆರ್‍ಥನೆಯಲ್ಲಿ ಸರ್‍ವರ ಕಲ್ಯಾಣವಿರಲಿ
ಮನದಲಿ ನೂರೆಂಟು ಚಿಂತೆಗಳು ಬೇಡ
ಆ ಕೆಟ್ಟ ವಿಕಾರಗಳಿಗೆ ಅವಕಾಶಬೇಡ

ನಡೆ ನುಡಿಯು ನಿನ್ನದು ಶುದ್ಧವಿರಲಿ
ನಿರ್‍ಭಾವ ನಿರಹಂಕಾರ ನಿನ್ನದಾಗಿರಲಿ
ಲಭಿಸುವವು ಆಗ ಶಾಂತಿ ಆನಂದ
ಮಾಣಿಕ್ಯ ವಿಠಲನೇ ಭಗವದಾನಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೧೩
Next post ಎದ್ದೇಳಿ ಎದ್ದೇಳಿ ಸೋದರರೇ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…