Home / ಕವನ / ಕವಿತೆ / ಕಾಂಡ ಬೇರುಗಳ ಕಲರವ

ಕಾಂಡ ಬೇರುಗಳ ಕಲರವ

ನೆಲದಡಿಯಲಿ ಮಲಗಿದ ಪ್ರೀತಿ
ಆತ್ಮಗಳು ಉಸಿರಾಡುತ್ತವೆ, ಮಂಜು
ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ
ಎಲೆಯ ಮರೆಯ ನಿಧಾನದ ಗಾಳಿ
ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ
ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ
ಬೆಳಕು.

ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ
ಕುಸುಮ ಅರಳಿ ಆಕಾಶಕ್ಕೆ ಮೊಗ ಮಾಡಿದ
ನೆಲವ ಚುಂಬಿಸಿದ ಅಗಾಧ ಆಕಾಶ ಪ್ರೀತಿ
ಹನಿಹನಿಯಾಗಿ ಬೆವರು ಭೂಮಿಗಿಳಿದ
ಮೀರಿದ ಬೆಳಕು ಕಂಡ ಹಕ್ಕಿಗಳ ಕಲರವ
ಒಡಲ ತುಂಬ ಕಂಪಿಸಿ ಘಮ್ಮೆನ್ನುವ ಕಣ್ಣ
ಬೆಳಕು.

ಭೂಮಿಯ ಆವರ್ತದಲ್ಲಿ ಅಣು ಅಣುವಿನ
ಸೂರ್ಯನ ಚಲನೆ, ಎದೆಯೊಳಕೆ ಇಳಿದು
ಸಳಸಳ ಮಿಂಚಿ ಮಾಯವಾಗುವ ಮೀನುಗಳ ಕಡಲ
ನೆತ್ತಿ ತಣಿಸುವ ಸುತ್ತ ಮುತ್ತಲಿನ ಹಸಿರು ಕಾವ್ಯ
ಕಾಯುವುದು ಪ್ರೀತಿಯಲಿ ಕಡು ಕತ್ತಲೆ ಮಳೆ
ಕಾನನದ ಹಕ್ಕಿ ಉಲಿದ ಹಾಡುಗಳು ಅರಳಿಸಿದವು
ಕವಿಯ ಒಡಲು.

ಅದರಾಚೆಯ ಮುಗಿಲ ಮೌನದ ಮೋಡಗಳು
ಗುಡುಗಿ, ಸುರಿದ ದೈವ್ಯ ನೆನಹು ಎಲ್ಲರ
ಮನಸ್ಸಿನಾಳಕೆ ಇಳಿದು ಅಲ್ಲಮ ಜಂಗಮನಾದ
ಇಷ್ಟಗಳ ನೆಲದಲಿ ಎಂತಹ ಜೀವ ಪವಾಡ
ಚಿಗುರಿದ ಮರಗಳ ಹೂಗಳ ಕಂಪನ ಮತ್ತೆ
ತೊಯ್ದ ಮಾಡು, ತೊಳೆದ ದಾರಿ ಅಮ್ಮನ ಒಲುಮೆಯಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...