Home / ಕವನ / ಕವಿತೆ / ಕಾಂಡ ಬೇರುಗಳ ಕಲರವ

ಕಾಂಡ ಬೇರುಗಳ ಕಲರವ

ನೆಲದಡಿಯಲಿ ಮಲಗಿದ ಪ್ರೀತಿ
ಆತ್ಮಗಳು ಉಸಿರಾಡುತ್ತವೆ, ಮಂಜು
ಹನಿಗಳ ಮಧುರ ತಣ್ಣನೆಯ ಸ್ಪರ್ಶದಲಿ
ಎಲೆಯ ಮರೆಯ ನಿಧಾನದ ಗಾಳಿ
ಸವರಿ ತೇಲಿ ಹೋಗುತ್ತವೆ, ಪರಿತ್ಯಕ್ತ
ಎಲ್ಲಾ ಮನಸ್ಸುಗಳ ಮೂಲೆಯಲಿ ಲೋಕದ
ಬೆಳಕು.

ಎರೆಮಣ್ಣಿನಲಿ ಮುಸುಕಿನ ಗುದ್ದಾಟ ಮತ್ತೆ
ಕುಸುಮ ಅರಳಿ ಆಕಾಶಕ್ಕೆ ಮೊಗ ಮಾಡಿದ
ನೆಲವ ಚುಂಬಿಸಿದ ಅಗಾಧ ಆಕಾಶ ಪ್ರೀತಿ
ಹನಿಹನಿಯಾಗಿ ಬೆವರು ಭೂಮಿಗಿಳಿದ
ಮೀರಿದ ಬೆಳಕು ಕಂಡ ಹಕ್ಕಿಗಳ ಕಲರವ
ಒಡಲ ತುಂಬ ಕಂಪಿಸಿ ಘಮ್ಮೆನ್ನುವ ಕಣ್ಣ
ಬೆಳಕು.

ಭೂಮಿಯ ಆವರ್ತದಲ್ಲಿ ಅಣು ಅಣುವಿನ
ಸೂರ್ಯನ ಚಲನೆ, ಎದೆಯೊಳಕೆ ಇಳಿದು
ಸಳಸಳ ಮಿಂಚಿ ಮಾಯವಾಗುವ ಮೀನುಗಳ ಕಡಲ
ನೆತ್ತಿ ತಣಿಸುವ ಸುತ್ತ ಮುತ್ತಲಿನ ಹಸಿರು ಕಾವ್ಯ
ಕಾಯುವುದು ಪ್ರೀತಿಯಲಿ ಕಡು ಕತ್ತಲೆ ಮಳೆ
ಕಾನನದ ಹಕ್ಕಿ ಉಲಿದ ಹಾಡುಗಳು ಅರಳಿಸಿದವು
ಕವಿಯ ಒಡಲು.

ಅದರಾಚೆಯ ಮುಗಿಲ ಮೌನದ ಮೋಡಗಳು
ಗುಡುಗಿ, ಸುರಿದ ದೈವ್ಯ ನೆನಹು ಎಲ್ಲರ
ಮನಸ್ಸಿನಾಳಕೆ ಇಳಿದು ಅಲ್ಲಮ ಜಂಗಮನಾದ
ಇಷ್ಟಗಳ ನೆಲದಲಿ ಎಂತಹ ಜೀವ ಪವಾಡ
ಚಿಗುರಿದ ಮರಗಳ ಹೂಗಳ ಕಂಪನ ಮತ್ತೆ
ತೊಯ್ದ ಮಾಡು, ತೊಳೆದ ದಾರಿ ಅಮ್ಮನ ಒಲುಮೆಯಲಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...