ಅಲ್ಲಲ್ಲಿ ನಿಂತು

ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು
ದಾರಿ ಸಾಗುವುದೆ ಒಳ್ಳೆಯದು
ಎಲ್ಲಿಯೂ ನಿಲ್ಲದೆ ಏನನೂ ಕಾಣದೆ
ಧಾವಿಸುವುದೇ ತಲ್ಲಣ

ಕೆರೆಯ ನೋಡುವುದು ಕೊಳವ ನೋಡುವುದು
ಜಲಾಶಯದ ಬಳಿ ತಂಗುವುದು
ಗಿರಿಯನೇರುವುದು ಕಣಿವೆಯನಿಳಿಯುವುದು
ಬಳಸು ದಾರಿಗಳಲ್ಲಿ ಸರಿಯುವುದು
ಅದೂ ಯಾನವಲ್ಲವೇ

ಹೊಲಗಳಲಿ ಅಲೆಯುವುದು ಹುಲ್ಲಮೇಲೊರಗುವುದು
ಹಲವರುಗಳ ತಿರುಗುವುದು
ಮೆಲುದನಿಯಲಿ ಮಾತಾಡುವುದು ಮಕ್ಕಳ ಜತೆ ಆಡುವುದು
ಹಕ್ಕಿಗಳ ಕಲರವರಕೆ ಮನ ಸೋಲುವುದು

ಧ್ಯಾನ ಮಾಡುವುದು ಕರ್‍ಮ ಮಾಡುವುದು
ವಿದ್ಯಾದಾನ ಮಾಡುವುದು
ಆಗಾಗ ಮೌನ ವಹಿಸುವುದು

ಜಗ ದೊಡ್ಡದು ಗಗನ ದೊಡ್ಡದು
ಯುಗ ದೊಡ್ಡದು ಕಾಲ ಅಗಾಧ
ನಾನೆ ಪರಿಮಿತ

ಮೊಗೆದರೂ ಮುಗಿಯದ ಯಾವುದೋ ಒಂದು ಭಾವ
ಯಾವಾಗಲೂ ಇರುವುದು
ಇಂದು ನಿನ್ನೆಯದಲ್ಲ ಯಾರು ಕಂಡುದು ಅಲ್ಲ
ಹೆಸರು ಬೇಕಿಲ್ಲ ಗುರುತು ಬೇಕಿಲ್ಲ

ಅದು ಅಲ್ಲ ಇದು ಅಲ್ಲ ಯಾವುದೂ ಅಲ್ಲ
ಬಹುಳವೋ ಏಕವೋ ಎನ್ನುವುದೂ ಇಲ್ಲ
ಅನಾದಿ ಅನಂತ
ಅದ ಮರೆಯದೆ ಇರುವುದು
ಒಳ್ಳೆಯದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು
Next post ನಾಳೆಗಾಗಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…