ಅಲ್ಲಲ್ಲಿ ನಿಂತು

ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು
ದಾರಿ ಸಾಗುವುದೆ ಒಳ್ಳೆಯದು
ಎಲ್ಲಿಯೂ ನಿಲ್ಲದೆ ಏನನೂ ಕಾಣದೆ
ಧಾವಿಸುವುದೇ ತಲ್ಲಣ

ಕೆರೆಯ ನೋಡುವುದು ಕೊಳವ ನೋಡುವುದು
ಜಲಾಶಯದ ಬಳಿ ತಂಗುವುದು
ಗಿರಿಯನೇರುವುದು ಕಣಿವೆಯನಿಳಿಯುವುದು
ಬಳಸು ದಾರಿಗಳಲ್ಲಿ ಸರಿಯುವುದು
ಅದೂ ಯಾನವಲ್ಲವೇ

ಹೊಲಗಳಲಿ ಅಲೆಯುವುದು ಹುಲ್ಲಮೇಲೊರಗುವುದು
ಹಲವರುಗಳ ತಿರುಗುವುದು
ಮೆಲುದನಿಯಲಿ ಮಾತಾಡುವುದು ಮಕ್ಕಳ ಜತೆ ಆಡುವುದು
ಹಕ್ಕಿಗಳ ಕಲರವರಕೆ ಮನ ಸೋಲುವುದು

ಧ್ಯಾನ ಮಾಡುವುದು ಕರ್‍ಮ ಮಾಡುವುದು
ವಿದ್ಯಾದಾನ ಮಾಡುವುದು
ಆಗಾಗ ಮೌನ ವಹಿಸುವುದು

ಜಗ ದೊಡ್ಡದು ಗಗನ ದೊಡ್ಡದು
ಯುಗ ದೊಡ್ಡದು ಕಾಲ ಅಗಾಧ
ನಾನೆ ಪರಿಮಿತ

ಮೊಗೆದರೂ ಮುಗಿಯದ ಯಾವುದೋ ಒಂದು ಭಾವ
ಯಾವಾಗಲೂ ಇರುವುದು
ಇಂದು ನಿನ್ನೆಯದಲ್ಲ ಯಾರು ಕಂಡುದು ಅಲ್ಲ
ಹೆಸರು ಬೇಕಿಲ್ಲ ಗುರುತು ಬೇಕಿಲ್ಲ

ಅದು ಅಲ್ಲ ಇದು ಅಲ್ಲ ಯಾವುದೂ ಅಲ್ಲ
ಬಹುಳವೋ ಏಕವೋ ಎನ್ನುವುದೂ ಇಲ್ಲ
ಅನಾದಿ ಅನಂತ
ಅದ ಮರೆಯದೆ ಇರುವುದು
ಒಳ್ಳೆಯದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು
Next post ನಾಳೆಗಾಗಿ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…