Home / ಲೇಖನ / ವಿಜ್ಞಾನ / ‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್ದರಿಂದ ವೈದ್ಯರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು ಎಂದು ಸಲಹೆ ಮಾಡುತ್ತಾರೆ. ಹೀಗಾಗಿ ಸ್ವಿಮೀಂಗು, ಜಿಮ್ಮು, ವ್ಯಾಯಾಮ ಮಾಡುವುದು, ಉಪವಾಸ ಇರುವುದನ್ನು ಮಾಡುತ್ತಾರೆ. ಆದರೆ ಕೊಲೆಸ್ಟ್ರಾಲ್ ರಕ್ತದಲ್ಲಿ ಕಡಿಮೆಯಾದರೆ ಆತ್ಮಹತ್ಯೆಯಂತಹ ಪ್ರಕರಣಗಳು ಜರುಗತ್ತವೆ ಎಂದು ೩ ವರ್ಷಗಳ ಅಧ್ಯಯನದಿಂದ (೧೯೫೫) ಅಮೇರಿಕೆಯ ವಿಜ್ಞಾನಿ ‘ಗಾಲಿಯರ್’ ಎಂಬುವವರು ಹೇಳುತ್ತಾರೆ. ಕೊಲೆಸ್ಟ್ರಾರಾಲ್ ಕುರಿತು ಇವರು ಸಾಕಷ್ಟು ಅಧ್ಯಯನ ಮಾಡಿದ ಫಲಶೃತಿ ಇದು. ಇದಕ್ಕೆ ಕಾರಣಗಳೂ ಕುತೂಲಹಕಾರಿಯಾಗಿವೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ಮಿದುಳಿನ ಸೆರೆಟೋನಿನ್ ಪ್ರಮಾಣದಲ್ಲಿ ಇಳಿತ ಕಂಡುಬರುತ್ತದೆ. ಈ ಪ್ರಮಾಣ ಕಡಿಮೆಯಾದರೆ ಮಿದುಳು ವಕ್ರೀಭವಗೊಂಡು ಆತ್ಮಹತ್ಯೆಯ ಮನೋಭಾವ ಹೆಚ್ಚಾಗುತ್ತದೆಂದು ಹೇಳುತ್ತಾರೆ. ಆಕ್ರಮಣ ಶೀಲ ಭಾವನೆಗಳನ್ನು ತೊಡೆದು ಹಾಕುವ ಸಾಮರ್ಥ್ಯ ಕುಂದಿ ಹೋಗುತ್ತದೆ. ಮಿದುಳಿನಲ್ಲಿ ಸೆರೆಟೋನಿನ್ ಪ್ರಮಾಣ ಕಡಿಮೆಯಾದಾಗ ಚಿತ್ತವಿಕಾರಗಳಾವುದು ಸಹಜ. ಇಂಥವರು ಯಾವುದೇ ಸಣ್ಣಪುಟ್ಟ ಕಾರಣಗಳು ಸಿಕ್ಕರೂ ಆತ್ಮಹತ್ಯೆ ಭಾವನೆ ತಾಳುತ್ತಾರೆ ಅಥವಾ ಅಪಘಾತಕ್ಕೆ ಕಾರಣರಾಗುತ್ತಾರೆ. ರಕ್ತದಲ್ಲಿ ಕೊಲಸ್ಟ್ರಾಲ್ ಪ್ಪಮಾಣವನ್ನು ಇಳಿಸುವ ಉದ್ದೇಶದಿಂದ ಔಷಧಿಗಳನ್ನು ಉಪಯೋಗಿಸುವ ರೋಗಿಗಳಲ್ಲಿ ಆತ್ಮಹತ್ಯೆಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಯಾರ ದೇಹದಲ್ಲಿ ಕೊಲೆಸಸ್ಟ್ರಾಲ್ ಪ್ರಮಾಣ ತೀರ ಕಡಿಮೆಯಾಗಿದೆಯೋ ಅವರಲ್ಲೂ ಸಹ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗಬಹುದೆಂದು ವಿಜ್ಞಾನಿಗಳು ತಿಳಿಸುತ್ತಾರೆ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...