‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಕಡಿಮೆಯಾದರೆ ಆತ್ಮಹತ್ಯೆ ಪ್ರಯತ್ನಿಸಬಹುದು

‘ಕೊಲೆಸ್ಟ್ರಾಲ್’ ಹೆಚ್ಚಾದರೆ ಬೊಜ್ಜು ಬೆಳೆದು ಅಪಾಯಗಳಾಗಬಹುದೆಂದು ವೈದ್ಯಕೀಯವಾಗಿ ದೃಡಪಟ್ಟಿದೆ. ಕೈಕಾಲು ಹಿಡಿತ, ಹೃದಯಾಘಾತ, ಸೊಂಟನೋವು, ಚಟುವಟಿಕೆ ಗಳಿಲ್ಲದಿರುವುದು, ಮುಂತಾದ ಕಾಯಿಲೆಗಳು ಈ ಕೊರೆಸ್ಟ್ರಾಲ್ ಹೆಚ್ಚಾದಾಗ ಕಂಡು ಬರುತ್ತದೆ. ಆದ್ದರಿಂದ ವೈದ್ಯರೆ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿಕೊಳ್ಳದಿದ್ದರೆ ಜೀವಕ್ಕೆ ಆಪತ್ತು ಎಂದು ಸಲಹೆ ಮಾಡುತ್ತಾರೆ. ಹೀಗಾಗಿ ಸ್ವಿಮೀಂಗು, ಜಿಮ್ಮು, ವ್ಯಾಯಾಮ ಮಾಡುವುದು, ಉಪವಾಸ ಇರುವುದನ್ನು ಮಾಡುತ್ತಾರೆ. ಆದರೆ ಕೊಲೆಸ್ಟ್ರಾಲ್ ರಕ್ತದಲ್ಲಿ ಕಡಿಮೆಯಾದರೆ ಆತ್ಮಹತ್ಯೆಯಂತಹ ಪ್ರಕರಣಗಳು ಜರುಗತ್ತವೆ ಎಂದು ೩ ವರ್ಷಗಳ ಅಧ್ಯಯನದಿಂದ (೧೯೫೫) ಅಮೇರಿಕೆಯ ವಿಜ್ಞಾನಿ ‘ಗಾಲಿಯರ್’ ಎಂಬುವವರು ಹೇಳುತ್ತಾರೆ. ಕೊಲೆಸ್ಟ್ರಾರಾಲ್ ಕುರಿತು ಇವರು ಸಾಕಷ್ಟು ಅಧ್ಯಯನ ಮಾಡಿದ ಫಲಶೃತಿ ಇದು. ಇದಕ್ಕೆ ಕಾರಣಗಳೂ ಕುತೂಲಹಕಾರಿಯಾಗಿವೆ.

ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾದಾಗ ಮಿದುಳಿನ ಸೆರೆಟೋನಿನ್ ಪ್ರಮಾಣದಲ್ಲಿ ಇಳಿತ ಕಂಡುಬರುತ್ತದೆ. ಈ ಪ್ರಮಾಣ ಕಡಿಮೆಯಾದರೆ ಮಿದುಳು ವಕ್ರೀಭವಗೊಂಡು ಆತ್ಮಹತ್ಯೆಯ ಮನೋಭಾವ ಹೆಚ್ಚಾಗುತ್ತದೆಂದು ಹೇಳುತ್ತಾರೆ. ಆಕ್ರಮಣ ಶೀಲ ಭಾವನೆಗಳನ್ನು ತೊಡೆದು ಹಾಕುವ ಸಾಮರ್ಥ್ಯ ಕುಂದಿ ಹೋಗುತ್ತದೆ. ಮಿದುಳಿನಲ್ಲಿ ಸೆರೆಟೋನಿನ್ ಪ್ರಮಾಣ ಕಡಿಮೆಯಾದಾಗ ಚಿತ್ತವಿಕಾರಗಳಾವುದು ಸಹಜ. ಇಂಥವರು ಯಾವುದೇ ಸಣ್ಣಪುಟ್ಟ ಕಾರಣಗಳು ಸಿಕ್ಕರೂ ಆತ್ಮಹತ್ಯೆ ಭಾವನೆ ತಾಳುತ್ತಾರೆ ಅಥವಾ ಅಪಘಾತಕ್ಕೆ ಕಾರಣರಾಗುತ್ತಾರೆ. ರಕ್ತದಲ್ಲಿ ಕೊಲಸ್ಟ್ರಾಲ್ ಪ್ಪಮಾಣವನ್ನು ಇಳಿಸುವ ಉದ್ದೇಶದಿಂದ ಔಷಧಿಗಳನ್ನು ಉಪಯೋಗಿಸುವ ರೋಗಿಗಳಲ್ಲಿ ಆತ್ಮಹತ್ಯೆಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಯಾರ ದೇಹದಲ್ಲಿ ಕೊಲೆಸಸ್ಟ್ರಾಲ್ ಪ್ರಮಾಣ ತೀರ ಕಡಿಮೆಯಾಗಿದೆಯೋ ಅವರಲ್ಲೂ ಸಹ ಆತ್ಮಹತ್ಯೆಯ ಪ್ರವೃತ್ತಿ ಹೆಚ್ಚಾಗಬಹುದೆಂದು ವಿಜ್ಞಾನಿಗಳು ತಿಳಿಸುತ್ತಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದಲಾವಣೆ
Next post ಅಲ್ಲಲ್ಲಿ ನಿಂತು

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys