ನಾಳೆಗಾಗಿ

ನನ್ನ ನಗುವಿನ ಹಿಂದೆ
ಅಡಗಿದ ಸಾವಿರ ಸತ್ಯಗಳಿವೆ.
ಹರಿದ ಬಟ್ಟೆಗೆ ಹಚ್ಚಿದ
ಹಲವಾರು ತೇಪೆಗಳಿವೆ.
ಒತ್ತಾಯದ ನಗೆಯನ್ನು
ಮತ್ತೇ ಮತ್ತೇ
ಬರಿಸಬೇಕಿದೆ ಮುಖದಲಿ
ನೋವನ್ನು ಹಲ್ಲು ಕಚ್ಚಿ
ಕಣ್ಣು ಮುಚ್ಚಿ ಸಹಿಸಬೇಕಿದೆ.
ಮನದ ಆಳದ ನೋವಿನ
ವಿಷ ತುಂಬಿದ ಗುಟುಕುಗಳ
ತುಟಿ ಎರಡು ಮಾಡದೇ
ನುಂಗಿ ನಗಬೇಕಿದೆ.
ಸನ್ನೆಯಿಂದ ಕಣ್ಣು ಮಿಟುಕಿಸಿ
ಕಪ್ಪು ಕತ್ತಲೆಗೆ ಕರೆವ
ಬುಸುಗುಡುವ ಗೂಳಿಗಳಿಗೆ
ನಗೆಯ ಮುಖವಾಡ
ಧರಿಸಿ ಭೂಮಿಯಾಗಬೇಕಾಗಿದೆ.
ಹಸಿದ ಕಂದಮ್ಮಗಳ
ರೋದನ ಆಕ್ರಂದನ
ಕಿವಿಗೆ ಬೀಳುವಾಗ
ತುಟಿಕಚ್ಚಿ ಹೃದಯ
ಕಲ್ಲು ಮಾಡಿಕೊಂಡು ಸಹಿಸಬೇಕಿದೆ,
ಲೋಕದಲಿ ದಿನದಿನವೂ
ಸಾಯುತ್ತ ನೋವನ್ನು
ಸಹಿಸುತ್ತ ಬದುಕಬೇಕಿದೆ
ಸುಂದರ ನಾಳೆಯ ಕನಸುಗಳ ಕಾಣುತ್ತ
ಜೋಗುಳ ಹಾಡುತ್ತ ಕರುಳ ಕುಡಿಗಳ
ತಟ್ಟಿ ಮಲಗಿಸಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಲ್ಲಿ ನಿಂತು
Next post ಆಗಸದ ಕಾಣಿಕೆ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys