ಆಗಸದ ಕಾಣಿಕೆ

ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು
ಲೋಕದೀ ಬೊಕ್ಕಸವ ತುಂಬುತಿಹುದು.
ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು
ಬರುವ ಗಂಗೆಯ ಕರೆದು ಮನ್ನಿಸುವುವು.
ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ
ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ;
ಧನ್ಯರಾವ್ ಅಹಯೆಂದು ಕೆರೆನದಿಗಳುಕ್ಕೇರಿ
ಪಚ್ಚೆ ಪೈರುಗಳನ್ನು ತಗೆದು ತೋರಿ.

ಎಂಥೆಂಥ ರಸಮಿಹುದು ಈ ಭೂಮಿಯೊಳಗೆಂದು
ಎಳೆನೀರು ಸವಿಜೇನು ಕೊಳ್ಳಿ ಬಂದು
ಮಾಗಾಯಿ ನಾರಂಗ ರಸವಾಳೆ ದಾಳಿಂಬ
ನಗುನಗುತ ಬಳೆದಿಹವು ಮರದ ತುಂಬ
ಸ್ವರ್ಗಲೋಕದ ಸುರರೆ ಸವಿಯಿರಿದ ನೀವೆನುತ
ನೀಡಿಹಳು ನೆಲವೆಣ್ಣು ಲೋಕವಿದಿತ.
ಅಮರಲೋಕದ ವರ್ಷ ಮಣ್ಣಿನೊಳು ತಾನಿಳಿದು
ಒಳಗಿನೊಳಗಿನ ಸವಿಯ ಸೆಳೆಯುತಿಹುದು.

ಹನಿಹನಿಯು ಹರಳಾಗಿ ಸುರಿವನಿಯು ರಸವಾಗಿ
ನೆಲದೊಳಗೆ ಹೊನ್ನಾಗಿ ಹೊಳೆಯುತಿಹುದು
ಭಾರತಿಯು ನೀಡಿರುವ ವಜ್ರವಿಂದ್ರಂಗಾಯ್ತು
ವೃತ್ರನಂ ಕೊಲ್ಲುವೊಡೆ ಚಾಪಮಾಯ್ತು
ಎಮ್ಮ ಸಾಗರದೆರವು ಶಕ್ರನಾ ಮುಗಿಲೊಡ್ಡು
ಮತ್ತಲ್ಲಿ ಬೇರಿಹುದೆ ಸೌಖ್ಯದೊಡ್ಡು

ಇಲ್ಲಿಗಿಳಿವರು ಸರುವ ದೇವತೆಗಳಾದರದಿ
ಇಲ್ಲಿನೀ ಸವಿಯುಣಲು ಬಯಸಿ ಭರದಿ.

ನೆಲದ ವೀರರು ಹೋಗಿ ಸುರರ ಕಾಪಿಡಲಾಯ್ತು
ಇಂದಿನಾ ಇಂದ್ರಂಗೆ ರಾಜ್ಯಮಾಯ್ತು.
ಅಮರಲೋಕದ ಸುರರು ನರಲೋಕಕೆರವಿಗರು
ಅವರ ಹಂಗೆಮಗಿಲ್ಲ ನೋಡಿ ಸುರರು.
ಈ ರಸವು ಈ ನೀರು ಈ ಸುಖದ ಸವಿಯೂಟ
ನಮ್ಮ ಬಾಳಿಗೆ ಭೂಮಿಯಿತ್ತ ಮಾಟ.
ತುಂಬಲೀ ಧರೆಯೆಂದು ಗಗನ ವಿಶ್ವಾಸದಲಿ
ಇತ್ತ ಕಾಣಿಕ ಮಳೆಯು ನಿತ್ಯದಲ್ಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಳೆಗಾಗಿ
Next post ಮುದ್ದಿನ ಗಿಳಿ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…