Home / ಕವನ / ಕವಿತೆ / ಆಗಸದ ಕಾಣಿಕೆ

ಆಗಸದ ಕಾಣಿಕೆ

ಆಗಸದ ಕಡಲೊಡೆದು ಉಕ್ಕಿ ಹರಿಯುತಲಿಹುದು
ಲೋಕದೀ ಬೊಕ್ಕಸವ ತುಂಬುತಿಹುದು.
ಬೆಟ್ಟ ಗಿರಿ ತೂರೆ ತೋಡು ಕೆರೆ ಕುಂಟೆ ನದಿ ನದವು
ಬರುವ ಗಂಗೆಯ ಕರೆದು ಮನ್ನಿಸುವುವು.
ಆಗಸಕು ಭೂಮಿಗೂ ಬಾಂಧವ್ಯವನ್ನು ಬೆಳೆಸಿ
ಮಣ್ಣೊಳಿಹ ಸತ್ವಗಳ ತೆಗೆದು ಸೂಸಿ;
ಧನ್ಯರಾವ್ ಅಹಯೆಂದು ಕೆರೆನದಿಗಳುಕ್ಕೇರಿ
ಪಚ್ಚೆ ಪೈರುಗಳನ್ನು ತಗೆದು ತೋರಿ.

ಎಂಥೆಂಥ ರಸಮಿಹುದು ಈ ಭೂಮಿಯೊಳಗೆಂದು
ಎಳೆನೀರು ಸವಿಜೇನು ಕೊಳ್ಳಿ ಬಂದು
ಮಾಗಾಯಿ ನಾರಂಗ ರಸವಾಳೆ ದಾಳಿಂಬ
ನಗುನಗುತ ಬಳೆದಿಹವು ಮರದ ತುಂಬ
ಸ್ವರ್ಗಲೋಕದ ಸುರರೆ ಸವಿಯಿರಿದ ನೀವೆನುತ
ನೀಡಿಹಳು ನೆಲವೆಣ್ಣು ಲೋಕವಿದಿತ.
ಅಮರಲೋಕದ ವರ್ಷ ಮಣ್ಣಿನೊಳು ತಾನಿಳಿದು
ಒಳಗಿನೊಳಗಿನ ಸವಿಯ ಸೆಳೆಯುತಿಹುದು.

ಹನಿಹನಿಯು ಹರಳಾಗಿ ಸುರಿವನಿಯು ರಸವಾಗಿ
ನೆಲದೊಳಗೆ ಹೊನ್ನಾಗಿ ಹೊಳೆಯುತಿಹುದು
ಭಾರತಿಯು ನೀಡಿರುವ ವಜ್ರವಿಂದ್ರಂಗಾಯ್ತು
ವೃತ್ರನಂ ಕೊಲ್ಲುವೊಡೆ ಚಾಪಮಾಯ್ತು
ಎಮ್ಮ ಸಾಗರದೆರವು ಶಕ್ರನಾ ಮುಗಿಲೊಡ್ಡು
ಮತ್ತಲ್ಲಿ ಬೇರಿಹುದೆ ಸೌಖ್ಯದೊಡ್ಡು

ಇಲ್ಲಿಗಿಳಿವರು ಸರುವ ದೇವತೆಗಳಾದರದಿ
ಇಲ್ಲಿನೀ ಸವಿಯುಣಲು ಬಯಸಿ ಭರದಿ.

ನೆಲದ ವೀರರು ಹೋಗಿ ಸುರರ ಕಾಪಿಡಲಾಯ್ತು
ಇಂದಿನಾ ಇಂದ್ರಂಗೆ ರಾಜ್ಯಮಾಯ್ತು.
ಅಮರಲೋಕದ ಸುರರು ನರಲೋಕಕೆರವಿಗರು
ಅವರ ಹಂಗೆಮಗಿಲ್ಲ ನೋಡಿ ಸುರರು.
ಈ ರಸವು ಈ ನೀರು ಈ ಸುಖದ ಸವಿಯೂಟ
ನಮ್ಮ ಬಾಳಿಗೆ ಭೂಮಿಯಿತ್ತ ಮಾಟ.
ತುಂಬಲೀ ಧರೆಯೆಂದು ಗಗನ ವಿಶ್ವಾಸದಲಿ
ಇತ್ತ ಕಾಣಿಕ ಮಳೆಯು ನಿತ್ಯದಲ್ಲಿ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...