ದ್ವಾ ಸುಸರ್ಣಾ ಯುಯುಜಾ…..
ಉಪನಿಷತ್ತಿನ ಶ್ಲೋಕದ ಅವಿನಾಭಾವದ
ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ
ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ
ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು
ಒಂದನ್ನೊಂದು ಒರಗಿ ನಿಂತವು ಗುದಮುರಿಗೆ
ಮುಗಿಯದ ಸೆಣಸಾಟ ಆಹ್ಲಾದ ಕೂಟ
ಒಂದಕ್ಕೊಂದು ನೀರೆರೆದು ಒಮ್ಮೊಮ್ಮೆ
ಬೇರು ಕೊಯ್ದು ಬೆಳೆದಿವೆ ಬೆಳೆಯುತ್ತಿವೆ.
ಈಗಲೂ ಚೀಸಿ ರೆಕ್ಕೆ ಹಾರುತ್ತದೆ ಸಾಹಿತ್ಯ
ದಿಕ್ಕುದಿಕ್ಕಿಗೂ ಚಲಿಸಿ ಬದಲಾಗಿ ನಿಯಮ ರಾಹಿತ್ಯ
ಕುಳಿತಿದೆ ಮಂಕಾಗಿ ಮೂಲೆ ಹಿಡಿದು ಧರ್ಮ
ತಿಕ್ಕಿ ತೊಳೆಯಬೇಕು ಅದು ನಮ್ಮ ಕರ್ಮ
ಅದಿಲ್ಲದ್ದರೆ ಇದು ಸಾಯುತ್ತದೆ. ಇದು ಅದನ್ನು ಕಾಯುತ್ತದೆ.
ಇರಲಿ ಹೀಗೇ ಒಂದಕ್ಕೊಂದು
ಉರುಳಾಗದೇ ತಿರುವಿ ಹಾಕುವ
ಒರಳಾಗದೇ ನಿಯತಿ ಕೃತ
ನಿಯಮ ರಹಿತ ಧರ್ಮಾವಲಂಬಿತ.
*****
‘ಕಾಲಾತೀತ’ ಅಭಿನಂದನಾ ಗ್ರಂಥ (ಆದಿ ಚುಂಚನಗಿರಿ ಶ್ರೀಗಳ)ಕ್ಕಾಗಿ ಬರೆದ ಕವಿತೆ.
Related Post
ಸಣ್ಣ ಕತೆ
-
ಹುಟ್ಟು
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಇರುವುದೆಲ್ಲವ ಬಿಟ್ಟು
ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…