ದ್ವಾ ಸುಸರ್ಣಾ ಯುಯುಜಾ…..
ಉಪನಿಷತ್ತಿನ ಶ್ಲೋಕದ ಅವಿನಾಭಾವದ
ಹಕ್ಕಿಗಳೇ ಈ ಸಾಹಿತ್ಯ ಮತ್ತು ಧರ್ಮ
ಅದನ್ನು ಬಿಟ್ಟು ಇದಿಲ್ಲ ಇದನ್ನು ಬಿಟ್ಟು ಅದಿಲ್ಲ
ಬೀಜ ವೃಕ್ಷ ನ್ಯಾಯದಂತೆ ಗುದ್ದಾಡಲಿಲ್ಲ ಇವು
ಒಂದನ್ನೊಂದು ಒರಗಿ ನಿಂತವು ಗುದಮುರಿಗೆ
ಮುಗಿಯದ ಸೆಣಸಾಟ ಆಹ್ಲಾದ ಕೂಟ
ಒಂದಕ್ಕೊಂದು ನೀರೆರೆದು ಒಮ್ಮೊಮ್ಮೆ
ಬೇರು ಕೊಯ್ದು ಬೆಳೆದಿವೆ ಬೆಳೆಯುತ್ತಿವೆ.
ಈಗಲೂ ಚೀಸಿ ರೆಕ್ಕೆ ಹಾರುತ್ತದೆ ಸಾಹಿತ್ಯ
ದಿಕ್ಕುದಿಕ್ಕಿಗೂ ಚಲಿಸಿ ಬದಲಾಗಿ ನಿಯಮ ರಾಹಿತ್ಯ
ಕುಳಿತಿದೆ ಮಂಕಾಗಿ ಮೂಲೆ ಹಿಡಿದು ಧರ್ಮ
ತಿಕ್ಕಿ ತೊಳೆಯಬೇಕು ಅದು ನಮ್ಮ ಕರ್ಮ
ಅದಿಲ್ಲದ್ದರೆ ಇದು ಸಾಯುತ್ತದೆ. ಇದು ಅದನ್ನು ಕಾಯುತ್ತದೆ.
ಇರಲಿ ಹೀಗೇ ಒಂದಕ್ಕೊಂದು
ಉರುಳಾಗದೇ ತಿರುವಿ ಹಾಕುವ
ಒರಳಾಗದೇ ನಿಯತಿ ಕೃತ
ನಿಯಮ ರಹಿತ ಧರ್ಮಾವಲಂಬಿತ.
*****
‘ಕಾಲಾತೀತ’ ಅಭಿನಂದನಾ ಗ್ರಂಥ (ಆದಿ ಚುಂಚನಗಿರಿ ಶ್ರೀಗಳ)ಕ್ಕಾಗಿ ಬರೆದ ಕವಿತೆ.
Related Post
ಸಣ್ಣ ಕತೆ
-
ಅಪರೂಪದ ಬಾಂಧವ್ಯ
ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
-
ಅಜ್ಜಿಯ ಪ್ರೇಮ
ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…