ಬಾಲ್ಯ ವಿವಾಹಗಳ ಕಥೆ

ಬಾಲ್ಯ ವಿವಾಹಗಳ ಕಥೆ

‘ಭವ್ಯ ಭಾರತದಲ್ಲಿ ಬಾಲ್ಯ ವಿವಾಹಗಳು ಜಾಸ್ತಿ ಜರುಗುತ್ತಿವೆ. ಇದಕ್ಕೆ ಮುಖ್ಯ ಕಾರಣಗಳನ್ನು ಕೇಂದ್ರ ಸಾಂಖ್ಯಿಕ ಇಲಾಖೆ ಇತ್ತೀಚೆಗೆ ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆ (ಡಿ‌ಎಲ್‌ಎಚ್‌ಎಸ್) ಅಧ್ಯಯನ ನಡೆಸಿರುವುದು.

ಮನೆಯಲ್ಲಿ ಅನಕ್ಷರತೆ, ಬಡತನ, ಮೂಢನಂಬಿಕೆ, ಕಾಯ್ದೆ, ಕಾನೂನು, ಗೊತ್ತಿಲ್ಲದೆ ಇರುವುದರಿಂದ, ಅಜ್ಜ ಅಜ್ಜಿಯರ ಒತ್ತಾಯದ ಮೇರೆಗೆ ಹೆಣ್ಣುಮಕ್ಕಳು ಮದುವೆಯಾದರೆ ಸುರಕ್ಷಿತವೆಂದು ಭಾವಿಸಿರುವುದು; ಬೇಗ ಮದುವೆಯಾದರೆ ಬೇಗ ಮಕ್ಕಳಾದರೆ ಭವಿಷ್ಯ ಉತ್ತಮವಿರುವುದೆಂದು, ಮದುವೆ ಖರ್ಚು ಉಳಿಸಲು ಐದಾರು ಜನರನ್ನು ಒಟ್ಟಿಗೆ ಸೇರಿಸಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಉದ್ದೇಶದಿಂದ ಬಾಲ್ಯ ವಿವಾಹಗಳು ಹಳ್ಳಿಗಳಲ್ಲಿ ಹಿಂದುಳಿದ ಬಡ ಕುಟುಂಬಗಳಲ್ಲಿ ಜಾಸ್ತಿ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ೧೦ ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.

ಕಲಬುರ್‍ಗಿಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ದಾಖಲಾಗಿವೆ. ಪ್ರಪ್ರಥಮ ಸ್ಥಾನದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಬೀದರ್, ಬಳ್ಳಾರಿ ಜಿಲ್ಲೆಗಳಲ್ಲಿ ಗುಟ್ಟಾಗಿ ಬಾಲ್ಯ ವಿವಾಹಗಳು ಜರುಗುತ್ತಿವೆ.

ಕಲಬುರ್‍ಗಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೪೧% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೨೮.೫%

ಉಡುಪಿಯಲ್ಲಿ ೨೦೦೭-೨೦೦೮ನೆಯ ಸಾಲಿನಲ್ಲಿ ಶೇಕಡಾ ೨.೪% ೨೦೧೨-೧೩ನೆಯ ಸಾಲಿನಲ್ಲಿ ಶೇಕಡಾ ೧.೩%ಕ್ಕೆ ಕುಸಿದಿವೆ.

ಬಾಲ್ಯ ವಿವಾಹದ ಪ್ರಮಾಣವು ೨೦೦೭-೨೦೦೮ನೆಯ ಸಾಲಿಗಿಂತ ೨೦೧೨-೨೦೧೩ನೆಯ ಸಾಲಿನಲ್ಲಿ ಒಟ್ಟು ಶೇಕಡಾ ೮.೩% ರಷ್ಟು ಕುಸಿದಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಾಲ್ಯವಿವಾಹದ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆಯೆಂದು (ಡಿ‌ಎಲ್‌ಎಚ್‌ಎಸ್) ಕೇ.ಸಾ.ಇ. ನಡೆಸಿರುವ ಜಿಲ್ಲಾ ಮಟ್ಟದ ಆರೋಗ್ಯ ಸಮೀಕ್ಷೆಯು ಗಮನಾರ್‍ಹವಾದ ಅಂಶಗಳನ್ನು ಬಯಲಿಗೆಳೆದಿದೆ.

ಆದ್ದರಿಂದ ಮುದ್ದಾದ ಮಕ್ಕಳೆ… ತಂದೆ-ತಾಯಿ, ಅಜ್ಜ-ಅಜ್ಜಿ, ಅಕ್ಕ-ಅಣ್ಣಂದಿರಿಗೆ ಕಾನೂನು ಅರಿವು ಮಾಡಿಸಬೇಕು. ಬಾಲ್ಯವಿವಾಹ ಅಪರಾಧ ತಪ್ಪು, ಅಪಾಯ ಅವಮಾನವೆಂದು ತಿಳಿಸಿ ಹೇಳಿ ಅವರ ಮನ ಗೆಲ್ಲ ಬೇಕು. ಬಾಲ್ಯ ವಿವಾಹಗಳು ಎಲ್ಲೇ ಜರುಗಲಿ ಎಲ್ಲರೂ ಒಟ್ಟಾಗಿ ಸೇರಿ ತಡೆಯಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಭವಸ್ಥರು
Next post ಮನಃಸ್ಸಾಕ್ಷಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys