ಮನಃಸ್ಸಾಕ್ಷಿ

ಸದಾ ನನ್ನ ಮನದೊಳಗೆ
ಮಿಡಿಯುತಿರು ಸಾಕ್ಷಿಯೇ
ಸದಾ ನನ್ನ ಕಿವಿಯೊಳಗೆ
ನುಡಿಯೇ ಮನಃಸಾಕ್ಷಿಯೇ

ನನ್ನ ನಾಲಿಗೆಯಲಿ ಇರು ನೀನು
ನನ್ನ ನಗೆಯಲ್ಲಿ ಇರು ನೀನು
ಸದಾ ನನ್ನ ಬಗೆಯಲ್ಲಿರು
ಸದಾ ನನ್ನ ಬೆಳಕಾಗಿರು

ಕಣ್ಗುರುಡ ನಾ ಕಾಣದೆಯೇ
ತಪ್ಪು ಹೆಜ್ಜೆಯಿಡುವಾಗ
ನ್ಯಾಯ ಯಾವುದನ್ಯಾಯ ಯಾವುದು
ಸತ್ಯ ಯಾವುದಸತ್ಯ ಯಾವುದು
ಹಿತ ಯಾವುದಹಿತ ಯಾವುದು
ಪುಣ್ಯ ಯಾವುದು ಪಾಪ ಯಾವುದು
ಎಂದು ನಾ ತಿಳಿಯದಾಗ

ಅನ್ಯತ ನಾನು ನುಡಿಯದಂತೆ
ಇರು ನನ್ನ ಮಾತಿನಲಿ
ಯಾರ ಮೇಲೂ ಎರಗದಂತೆ
ಇರು ನನ್ನ ಕೈಗಳಲಿ
ಭಾವವೆಂದೂ ತಪ್ಪದಂತೆ
ಇರು ನನ್ನ ಭಾವನೆಯಲಿ

ಅಂತರ್‍ಯಾಮಿ ನೀನೇ ನನ್ನ
ಸರ್‍ವಸಾಕ್ಷಿ ನೀನೇ ನನ್ನ
ಬೇರೆ ನನಗೆ ದೈವವಿಲ್ಲ
ಬೇರೆ ನನಗೆ ಧರ್ಮವಿಲ್ಲ

ಮೃದುವಾಗಿಸು ನನ್ನ ಮಾತ
ಕರುಣೆಯಾಗಿಸು ನನ್ನ ಕಣ್ಣ
ಪ್ರೀತಿಯಾಗಿಸು ನನ್ನ ತುಟಿಯ
ಶಾಂತಿಯಾಗಿಸು ನನ್ನ ಮುಖವ

ಓ ನನ್ನ ಸಾಕ್ಷಿ
ಮನಃಸ್ಸಾಕ್ಷಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ಯ ವಿವಾಹಗಳ ಕಥೆ
Next post ಕೊನೆಯ ವಿದಾಯ

ಸಣ್ಣ ಕತೆ

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…