ಮನಃಸ್ಸಾಕ್ಷಿ

ಸದಾ ನನ್ನ ಮನದೊಳಗೆ
ಮಿಡಿಯುತಿರು ಸಾಕ್ಷಿಯೇ
ಸದಾ ನನ್ನ ಕಿವಿಯೊಳಗೆ
ನುಡಿಯೇ ಮನಃಸಾಕ್ಷಿಯೇ

ನನ್ನ ನಾಲಿಗೆಯಲಿ ಇರು ನೀನು
ನನ್ನ ನಗೆಯಲ್ಲಿ ಇರು ನೀನು
ಸದಾ ನನ್ನ ಬಗೆಯಲ್ಲಿರು
ಸದಾ ನನ್ನ ಬೆಳಕಾಗಿರು

ಕಣ್ಗುರುಡ ನಾ ಕಾಣದೆಯೇ
ತಪ್ಪು ಹೆಜ್ಜೆಯಿಡುವಾಗ
ನ್ಯಾಯ ಯಾವುದನ್ಯಾಯ ಯಾವುದು
ಸತ್ಯ ಯಾವುದಸತ್ಯ ಯಾವುದು
ಹಿತ ಯಾವುದಹಿತ ಯಾವುದು
ಪುಣ್ಯ ಯಾವುದು ಪಾಪ ಯಾವುದು
ಎಂದು ನಾ ತಿಳಿಯದಾಗ

ಅನ್ಯತ ನಾನು ನುಡಿಯದಂತೆ
ಇರು ನನ್ನ ಮಾತಿನಲಿ
ಯಾರ ಮೇಲೂ ಎರಗದಂತೆ
ಇರು ನನ್ನ ಕೈಗಳಲಿ
ಭಾವವೆಂದೂ ತಪ್ಪದಂತೆ
ಇರು ನನ್ನ ಭಾವನೆಯಲಿ

ಅಂತರ್‍ಯಾಮಿ ನೀನೇ ನನ್ನ
ಸರ್‍ವಸಾಕ್ಷಿ ನೀನೇ ನನ್ನ
ಬೇರೆ ನನಗೆ ದೈವವಿಲ್ಲ
ಬೇರೆ ನನಗೆ ಧರ್ಮವಿಲ್ಲ

ಮೃದುವಾಗಿಸು ನನ್ನ ಮಾತ
ಕರುಣೆಯಾಗಿಸು ನನ್ನ ಕಣ್ಣ
ಪ್ರೀತಿಯಾಗಿಸು ನನ್ನ ತುಟಿಯ
ಶಾಂತಿಯಾಗಿಸು ನನ್ನ ಮುಖವ

ಓ ನನ್ನ ಸಾಕ್ಷಿ
ಮನಃಸ್ಸಾಕ್ಷಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾಲ್ಯ ವಿವಾಹಗಳ ಕಥೆ
Next post ಕೊನೆಯ ವಿದಾಯ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys