ಕೊನೆಯ ವಿದಾಯ

ತುಸುತುಸುವೇ ಹತ್ತಿರವಾಗುವ
ಕ್ರೂರ ಸಾವಿನ ಸಂಬಂಧ
ಪಾಶವೀ ಆಕ್ರಮಣ,
ವಿರಹದ ಬಿಸಿ ಮೀರಿ
ಹೊರ ಬರುವ ಕರುಳ ಸಂಬಂಧ,
ಬದುಕು ಮುದುಡುವಂತೆ
ಬೀರುವ ಸುಡು ನೋಟ,
ಬದುಕಿನ ಆಳ – ಅಗಲ
ಏರುಪೇರಿನಲಿ ಏಕುತ್ತ
ಎಳೆದು ತಂದ ಬಾಳಬಂಡಿ
ಮನೆ ಮಂದಿಗೆಲ್ಲ ಬಡಿಸಿ,
ಬರಿಹೊಟ್ಟೆ ಖಾಲಿ ತಟ್ಟೆ
ಬರೀ ನೀರು ಗತಿಯಾಗಿ
ತೃಪ್ತಿ ಮರೀಚಿಕೆ
ಕ್ರೌರ್ಯ ಪುನರಾವರ್ತನೆ
ತಾಳದೇ ತತ್ತರಿಸಿ
ಕುಸಿದಾಗ ಭೂಮಿಗೆ,
ಸಾವು ನೋವಿನ ಸೆಣಸಾಟ,
ನಾಯಕಿಗೆ ದುರಂತದ
ಬಾಯ್ತೆರೆದ ಭೂಮಿಯಲಿ
ಹುಡಿಯಾಗಿ ಒಡಲು ಸೇರಿ
ಮೊರೆ ಹೋಗಿ ಚಿರನಿದ್ರೆ,
ಹೇಳಿದಳು ಕೊನೆ ವಿದಾಯ
ನೋವು ಕ್ರೌರ್ಯಗಳಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಃಸ್ಸಾಕ್ಷಿ
Next post ಟೀಚರ್ ಏನ್ ಹೇಳ್ತಾರೆ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…