Home / ಬಾಲ ಚಿಲುಮೆ / ಕವಿತೆ / ಟೀಚರ್ ಏನ್ ಹೇಳ್ತಾರೆ

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬೇಕಂತೆ ಹಾಡು
ಹಾಡ್ತಾ ಹಾಡ್ತಾ ನಾವು
ಕಟ್ಬೇಕಂತೆ ನಾಡು

ಟೀಚರ್ ಹೇಳ್ತಾರೆ ನಮ್ಗೆ
ಉತ್ಬೇಕಂತೆ ನೆಲ
ಎಷ್ಟೆ ಕಷ್ಟ ಬಂದ್ರೂ
ಬಿಡಬಾರದಂತೆ ಛಲ

ಟೀಚರ್ ಹೇಳ್ತಾರೆ ನಮ್ಗೆ
ರೈತ ದೊಡ್ಡೋನಂತೆ
ಎಲ್ಲಾ ಕಷ್ಟ ಸಹಿಸಿಕೊಂಡು
ಅನ್ನ ನೀಡ್ತಾನಂತೆ

ಟೀಚರ್ ಹೇಳ್ತಾರೆ ನಮ್ಗೆ
ಓದ್ಬೇಕಂತೆ ಪೇಪರ್
ಓದ್ತಾ ಓದ್ತಾ ನಾವು
ಆಗ್ತಿವಂತೆ ಸೂಪರ್

ಟೀಚರ ಹೇಳ್ತಾರೆ ನಮ್ಗೆ
ಮಾಡ್ಬೇಕಂತೆ ಪ್ರೀತಿ
ನೆಲ, ಜಲ, ದೇಶ, ಭಾಷೆ
ನಮ್ಗೆ ತಾಯಿ ರೀತಿ

ಟೀಚರ್ ಹೇಳ್ತಾರೆ ನಮ್ಗೆ
ಕಡಿಬಾರದಂತೆ ಮರ
ಗಾಳಿ, ನೆರಳು ಕೊಡೋ ಅವು
ದೇವರು ಕೊಟ್ಟ ವರ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬಾರ್ದಂತೆ ಚಟ
ಕಲಿತೋರೆಲ್ಲ ಹಾಳಾಗ್ತಾರೆ
ಅನ್ನೋದಂತೂ ದಿಟ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಕಾಪಿ
ಓದ್ದೇ ಪಾಸು ಮಾಡ್ದೋರೆಲ್ಲ
ಆಗ್ತಾರಂತೆ ಪಾಪಿ

ಟೀಚರ್ ಹೇಳ್ತಾರೆ ನಮ್ಗೆ
ಬಿಡಬಾರದಂತೆ ನೀತಿ
ಹಂಚಿ ತಿನ್ನೋ ಮನಸ್ಸಿಗಿಂತ
ದೊಡ್ಡದೇನಲ್ಲ ಜಾತಿ

ಟೀಚರ್ ಹೇಳ್ತಾರೆ ನಮ್ಗೆ
ಇರಬೇಕಂತೆ ಶುಚಿ
ಹಲ್ಲು ನಾಲಗೆ ಉಜ್ಜದೇ ಇದ್ರೆ
ಸಿಗುತ್ತೇನು ರುಚಿ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಸ್ಟ್ರೈಕು
ಬಸ್ಸು, ಕಾರು ಸುಟ್ಟಿದ್ದು
ಇನ್ನಾದ್ರು ಸಾಕೋ, ಸಾಕು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...