Home / ಬಾಲ ಚಿಲುಮೆ / ಕವಿತೆ / ಟೀಚರ್ ಏನ್ ಹೇಳ್ತಾರೆ

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬೇಕಂತೆ ಹಾಡು
ಹಾಡ್ತಾ ಹಾಡ್ತಾ ನಾವು
ಕಟ್ಬೇಕಂತೆ ನಾಡು

ಟೀಚರ್ ಹೇಳ್ತಾರೆ ನಮ್ಗೆ
ಉತ್ಬೇಕಂತೆ ನೆಲ
ಎಷ್ಟೆ ಕಷ್ಟ ಬಂದ್ರೂ
ಬಿಡಬಾರದಂತೆ ಛಲ

ಟೀಚರ್ ಹೇಳ್ತಾರೆ ನಮ್ಗೆ
ರೈತ ದೊಡ್ಡೋನಂತೆ
ಎಲ್ಲಾ ಕಷ್ಟ ಸಹಿಸಿಕೊಂಡು
ಅನ್ನ ನೀಡ್ತಾನಂತೆ

ಟೀಚರ್ ಹೇಳ್ತಾರೆ ನಮ್ಗೆ
ಓದ್ಬೇಕಂತೆ ಪೇಪರ್
ಓದ್ತಾ ಓದ್ತಾ ನಾವು
ಆಗ್ತಿವಂತೆ ಸೂಪರ್

ಟೀಚರ ಹೇಳ್ತಾರೆ ನಮ್ಗೆ
ಮಾಡ್ಬೇಕಂತೆ ಪ್ರೀತಿ
ನೆಲ, ಜಲ, ದೇಶ, ಭಾಷೆ
ನಮ್ಗೆ ತಾಯಿ ರೀತಿ

ಟೀಚರ್ ಹೇಳ್ತಾರೆ ನಮ್ಗೆ
ಕಡಿಬಾರದಂತೆ ಮರ
ಗಾಳಿ, ನೆರಳು ಕೊಡೋ ಅವು
ದೇವರು ಕೊಟ್ಟ ವರ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬಾರ್ದಂತೆ ಚಟ
ಕಲಿತೋರೆಲ್ಲ ಹಾಳಾಗ್ತಾರೆ
ಅನ್ನೋದಂತೂ ದಿಟ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಕಾಪಿ
ಓದ್ದೇ ಪಾಸು ಮಾಡ್ದೋರೆಲ್ಲ
ಆಗ್ತಾರಂತೆ ಪಾಪಿ

ಟೀಚರ್ ಹೇಳ್ತಾರೆ ನಮ್ಗೆ
ಬಿಡಬಾರದಂತೆ ನೀತಿ
ಹಂಚಿ ತಿನ್ನೋ ಮನಸ್ಸಿಗಿಂತ
ದೊಡ್ಡದೇನಲ್ಲ ಜಾತಿ

ಟೀಚರ್ ಹೇಳ್ತಾರೆ ನಮ್ಗೆ
ಇರಬೇಕಂತೆ ಶುಚಿ
ಹಲ್ಲು ನಾಲಗೆ ಉಜ್ಜದೇ ಇದ್ರೆ
ಸಿಗುತ್ತೇನು ರುಚಿ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಸ್ಟ್ರೈಕು
ಬಸ್ಸು, ಕಾರು ಸುಟ್ಟಿದ್ದು
ಇನ್ನಾದ್ರು ಸಾಕೋ, ಸಾಕು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...