Home / ಬಾಲ ಚಿಲುಮೆ / ಕವಿತೆ / ಟೀಚರ್ ಏನ್ ಹೇಳ್ತಾರೆ

ಟೀಚರ್ ಏನ್ ಹೇಳ್ತಾರೆ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬೇಕಂತೆ ಹಾಡು
ಹಾಡ್ತಾ ಹಾಡ್ತಾ ನಾವು
ಕಟ್ಬೇಕಂತೆ ನಾಡು

ಟೀಚರ್ ಹೇಳ್ತಾರೆ ನಮ್ಗೆ
ಉತ್ಬೇಕಂತೆ ನೆಲ
ಎಷ್ಟೆ ಕಷ್ಟ ಬಂದ್ರೂ
ಬಿಡಬಾರದಂತೆ ಛಲ

ಟೀಚರ್ ಹೇಳ್ತಾರೆ ನಮ್ಗೆ
ರೈತ ದೊಡ್ಡೋನಂತೆ
ಎಲ್ಲಾ ಕಷ್ಟ ಸಹಿಸಿಕೊಂಡು
ಅನ್ನ ನೀಡ್ತಾನಂತೆ

ಟೀಚರ್ ಹೇಳ್ತಾರೆ ನಮ್ಗೆ
ಓದ್ಬೇಕಂತೆ ಪೇಪರ್
ಓದ್ತಾ ಓದ್ತಾ ನಾವು
ಆಗ್ತಿವಂತೆ ಸೂಪರ್

ಟೀಚರ ಹೇಳ್ತಾರೆ ನಮ್ಗೆ
ಮಾಡ್ಬೇಕಂತೆ ಪ್ರೀತಿ
ನೆಲ, ಜಲ, ದೇಶ, ಭಾಷೆ
ನಮ್ಗೆ ತಾಯಿ ರೀತಿ

ಟೀಚರ್ ಹೇಳ್ತಾರೆ ನಮ್ಗೆ
ಕಡಿಬಾರದಂತೆ ಮರ
ಗಾಳಿ, ನೆರಳು ಕೊಡೋ ಅವು
ದೇವರು ಕೊಟ್ಟ ವರ

ಟೀಚರ್ ಹೇಳ್ತಾರೆ ನಮ್ಗೆ
ಕಲಿಬಾರ್ದಂತೆ ಚಟ
ಕಲಿತೋರೆಲ್ಲ ಹಾಳಾಗ್ತಾರೆ
ಅನ್ನೋದಂತೂ ದಿಟ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಕಾಪಿ
ಓದ್ದೇ ಪಾಸು ಮಾಡ್ದೋರೆಲ್ಲ
ಆಗ್ತಾರಂತೆ ಪಾಪಿ

ಟೀಚರ್ ಹೇಳ್ತಾರೆ ನಮ್ಗೆ
ಬಿಡಬಾರದಂತೆ ನೀತಿ
ಹಂಚಿ ತಿನ್ನೋ ಮನಸ್ಸಿಗಿಂತ
ದೊಡ್ಡದೇನಲ್ಲ ಜಾತಿ

ಟೀಚರ್ ಹೇಳ್ತಾರೆ ನಮ್ಗೆ
ಇರಬೇಕಂತೆ ಶುಚಿ
ಹಲ್ಲು ನಾಲಗೆ ಉಜ್ಜದೇ ಇದ್ರೆ
ಸಿಗುತ್ತೇನು ರುಚಿ

ಟೀಚರ್ ಹೇಳ್ತಾರೆ ನಮ್ಗೆ
ಮಾಡ್ಬಾರ್ದಂತೆ ಸ್ಟ್ರೈಕು
ಬಸ್ಸು, ಕಾರು ಸುಟ್ಟಿದ್ದು
ಇನ್ನಾದ್ರು ಸಾಕೋ, ಸಾಕು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...