ಗುಬ್ಬಚ್ಚಿ ಸಂಸಾರ

ರಾಜು ಮನೆಯ ಗೋಡೆಯಲ್ಲಿ
ಗುಬ್ಬಿಯ ಗೂಡು ಇರುವುದು
ಹೆಣ್ಣು-ಗಂಡು ನೆಮ್ಮದಿಯಿಂದಲಿ
ಬದುಕುತಿದ್ದವು ಆ ಮನೆಯಲ್ಲಿ

ಅನ್ನವನ್ನು ಹುಡುಕಲು ಗುಬ್ಬಿಗಳು
ಗೂಡು ತೊರೆದು ಹೋಗುವವು
ಕಾಳು ಹುಳುಗಳ ಕಚ್ಚಿಕೊಳುತ
ಗೂಡಿಗೆ ಮತ್ತೆ ಮರಳುವವು

ದಿನಗಳು ಹೀಗೆ ಗತಿಸಿದವು
ಹೆಣ್ಣು ಮೊಟ್ಟೆಗಳ ಇಟ್ಟಿತ್ತು
ಮೇಲೆ ಕುಳಿತು ಕೊಡಲು ಕಾವು
ಎರಡು ಮರಿಗಳಿಗೆ ಜೀವ ಕೊಟ್ಟಿತು

ಎರಡು ವಾರ ಹಾಗೆ ಕಳೆದಿರಲು
ಮರಿಗಳು ಚಿಂವ್ ಚಿಂವ್‌ಗುಟ್ಟಲು
ತಾಯಿ ಗುಬ್ಬಿ ಕೊಡುತ್ತ ಗುಟುಕನು
ತುಂಬಿಸುತ್ತಿತ್ತು ತೆರೆದ ಬಾಯನು

ಜಾರಿ ಬಿದ್ದಿತು ಒಂದು ಮರಿ
ಗುಬ್ಬಿ ಅಳುತಲಿದ್ದ ಪರಿ ನೋಡಿ
ಎತ್ತಿಟ್ಟ ಸ್ವಸ್ಥಾನದಲಿ ರಾಜು
ಚಿಂವ್‌ಗುಟ್ಟಿ ತಿಳಿಸಿತು ನೀ ಮಹಾರಾಜ

ಪ್ರಾಣಿ-ಪಕ್ಷಿಗಳಲಿ ತೋರಬೇಕು ಪ್ರೀತಿ
ದಯವೇ ಧರ್ಮದ ಮೂಲ ಆಗಬೇಕು ನೀತಿ
ಮಕ್ಕಳೆ ನೀವೆಲ್ಲ ಮರುಕ ತೋರಿರಿ
ಬುದ್ಧ ಮಹಾವೀರ ಬಸವ ತತ್ವ ಉಸಿರಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೀಚರ್ ಏನ್ ಹೇಳ್ತಾರೆ
Next post ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…