Home / ಬಾಲ ಚಿಲುಮೆ / ಕವಿತೆ / ಗುಬ್ಬಚ್ಚಿ ಸಂಸಾರ

ಗುಬ್ಬಚ್ಚಿ ಸಂಸಾರ

ರಾಜು ಮನೆಯ ಗೋಡೆಯಲ್ಲಿ
ಗುಬ್ಬಿಯ ಗೂಡು ಇರುವುದು
ಹೆಣ್ಣು-ಗಂಡು ನೆಮ್ಮದಿಯಿಂದಲಿ
ಬದುಕುತಿದ್ದವು ಆ ಮನೆಯಲ್ಲಿ

ಅನ್ನವನ್ನು ಹುಡುಕಲು ಗುಬ್ಬಿಗಳು
ಗೂಡು ತೊರೆದು ಹೋಗುವವು
ಕಾಳು ಹುಳುಗಳ ಕಚ್ಚಿಕೊಳುತ
ಗೂಡಿಗೆ ಮತ್ತೆ ಮರಳುವವು

ದಿನಗಳು ಹೀಗೆ ಗತಿಸಿದವು
ಹೆಣ್ಣು ಮೊಟ್ಟೆಗಳ ಇಟ್ಟಿತ್ತು
ಮೇಲೆ ಕುಳಿತು ಕೊಡಲು ಕಾವು
ಎರಡು ಮರಿಗಳಿಗೆ ಜೀವ ಕೊಟ್ಟಿತು

ಎರಡು ವಾರ ಹಾಗೆ ಕಳೆದಿರಲು
ಮರಿಗಳು ಚಿಂವ್ ಚಿಂವ್‌ಗುಟ್ಟಲು
ತಾಯಿ ಗುಬ್ಬಿ ಕೊಡುತ್ತ ಗುಟುಕನು
ತುಂಬಿಸುತ್ತಿತ್ತು ತೆರೆದ ಬಾಯನು

ಜಾರಿ ಬಿದ್ದಿತು ಒಂದು ಮರಿ
ಗುಬ್ಬಿ ಅಳುತಲಿದ್ದ ಪರಿ ನೋಡಿ
ಎತ್ತಿಟ್ಟ ಸ್ವಸ್ಥಾನದಲಿ ರಾಜು
ಚಿಂವ್‌ಗುಟ್ಟಿ ತಿಳಿಸಿತು ನೀ ಮಹಾರಾಜ

ಪ್ರಾಣಿ-ಪಕ್ಷಿಗಳಲಿ ತೋರಬೇಕು ಪ್ರೀತಿ
ದಯವೇ ಧರ್ಮದ ಮೂಲ ಆಗಬೇಕು ನೀತಿ
ಮಕ್ಕಳೆ ನೀವೆಲ್ಲ ಮರುಕ ತೋರಿರಿ
ಬುದ್ಧ ಮಹಾವೀರ ಬಸವ ತತ್ವ ಉಸಿರಿರಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...