ಗುಬ್ಬಚ್ಚಿ ಸಂಸಾರ

ರಾಜು ಮನೆಯ ಗೋಡೆಯಲ್ಲಿ
ಗುಬ್ಬಿಯ ಗೂಡು ಇರುವುದು
ಹೆಣ್ಣು-ಗಂಡು ನೆಮ್ಮದಿಯಿಂದಲಿ
ಬದುಕುತಿದ್ದವು ಆ ಮನೆಯಲ್ಲಿ

ಅನ್ನವನ್ನು ಹುಡುಕಲು ಗುಬ್ಬಿಗಳು
ಗೂಡು ತೊರೆದು ಹೋಗುವವು
ಕಾಳು ಹುಳುಗಳ ಕಚ್ಚಿಕೊಳುತ
ಗೂಡಿಗೆ ಮತ್ತೆ ಮರಳುವವು

ದಿನಗಳು ಹೀಗೆ ಗತಿಸಿದವು
ಹೆಣ್ಣು ಮೊಟ್ಟೆಗಳ ಇಟ್ಟಿತ್ತು
ಮೇಲೆ ಕುಳಿತು ಕೊಡಲು ಕಾವು
ಎರಡು ಮರಿಗಳಿಗೆ ಜೀವ ಕೊಟ್ಟಿತು

ಎರಡು ವಾರ ಹಾಗೆ ಕಳೆದಿರಲು
ಮರಿಗಳು ಚಿಂವ್ ಚಿಂವ್‌ಗುಟ್ಟಲು
ತಾಯಿ ಗುಬ್ಬಿ ಕೊಡುತ್ತ ಗುಟುಕನು
ತುಂಬಿಸುತ್ತಿತ್ತು ತೆರೆದ ಬಾಯನು

ಜಾರಿ ಬಿದ್ದಿತು ಒಂದು ಮರಿ
ಗುಬ್ಬಿ ಅಳುತಲಿದ್ದ ಪರಿ ನೋಡಿ
ಎತ್ತಿಟ್ಟ ಸ್ವಸ್ಥಾನದಲಿ ರಾಜು
ಚಿಂವ್‌ಗುಟ್ಟಿ ತಿಳಿಸಿತು ನೀ ಮಹಾರಾಜ

ಪ್ರಾಣಿ-ಪಕ್ಷಿಗಳಲಿ ತೋರಬೇಕು ಪ್ರೀತಿ
ದಯವೇ ಧರ್ಮದ ಮೂಲ ಆಗಬೇಕು ನೀತಿ
ಮಕ್ಕಳೆ ನೀವೆಲ್ಲ ಮರುಕ ತೋರಿರಿ
ಬುದ್ಧ ಮಹಾವೀರ ಬಸವ ತತ್ವ ಉಸಿರಿರಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಟೀಚರ್ ಏನ್ ಹೇಳ್ತಾರೆ
Next post ಮುಂಬಯಿ ಮತ್ತು ವ್ಯಾಸರಾಯ ಬಲ್ಲಾಳ – ‘ಉತ್ತರಾಯಣ’ದ ಮೂಲಕ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…