ತಾಳಬೇಕು ಬಾಳಬೇಕು ದೇವಚಿತ್ತ ಎಲ್ಲವು
ದುಃಖವೇಕೆ ಬದುಕಿನಲ್ಲಿ ದೇವಲೀಲೆ ಎಲ್ಲವು
ನಿಂದೆ ಏಕೆ?; ನಿಂದ್ಯವೆಲ್ಲಿ? ಮಾತೃ ಸೃಷ್ಟಿ ಎಲ್ಲವು
ಈ ವಿಶಾಲ ವಿಶ್ವವೆಲ್ಲ ಅವನೆ ಬೇರೆ ಇಲ್ಲವು
“ಭಕ್ತಿ ಬೇಕು” “ಒಳಿತು ಆಗು, ಸಾಕು ನುಡಿ, ಕುಡಿ
ದಿವ್ಯನಾಮದಮೃತ” “ದ್ವೈತ ಸತ್ಯ” “ನೀದುಡಿ
ದೇವದಾಸನಾಗಿ; ಜಗಳ ಬೇಡ!” “ನಾನೇ ದೇವನು”
“ಸಾಧನೆಯನುಮಾಡು ನಿತ್ಯ ಪಡೆವೆ ಮೆಟ್ಟಿ ಸಾವನು
ಹಸುಳೆ ಹಾಲು ಎದೆಯ ಹಾಗೆ ಇರಲಿ ಅಂತರಂಗವು
ಬಾಳ ಹಗರಣಂಗಳಲ್ಲಿ ಇರಲಿ ದೇವಸಂಗವು
ಸಾಗು ನಿತ್ಯ ಸತ್ಯದೆಡೆಗೆ ಹಿಂದೆ ಅಡಿಯ ಕಿತ್ತದೆ
ದೃಢತೆಧೈರ್ಯ ಸಾಕು ಸಾಧಕನಿಗೆ ಧನವುಮತ್ತದೆ”
ನಿನ್ನವಾಣಿ ನೊಂದ ಜೀವಿಗಳಲಿ ಬಲವ ತುಂಬಿದೆ
ಪರಮಹಂಸ ದಿಕ್ಕುಗೆಟ್ಟು ನಿನ್ನ ಮಾತ ನಂಬಿದೆ
*****
Related Post
ಸಣ್ಣ ಕತೆ
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ಕಳಕೊಂಡವನು
ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…