ತಾಳಬೇಕು ಬಾಳಬೇಕು ದೇವಚಿತ್ತ ಎಲ್ಲವು
ದುಃಖವೇಕೆ ಬದುಕಿನಲ್ಲಿ ದೇವಲೀಲೆ ಎಲ್ಲವು
ನಿಂದೆ ಏಕೆ?; ನಿಂದ್ಯವೆಲ್ಲಿ? ಮಾತೃ ಸೃಷ್ಟಿ ಎಲ್ಲವು
ಈ ವಿಶಾಲ ವಿಶ್ವವೆಲ್ಲ ಅವನೆ ಬೇರೆ ಇಲ್ಲವು
“ಭಕ್ತಿ ಬೇಕು” “ಒಳಿತು ಆಗು, ಸಾಕು ನುಡಿ, ಕುಡಿ
ದಿವ್ಯನಾಮದಮೃತ” “ದ್ವೈತ ಸತ್ಯ” “ನೀದುಡಿ
ದೇವದಾಸನಾಗಿ; ಜಗಳ ಬೇಡ!” “ನಾನೇ ದೇವನು”
“ಸಾಧನೆಯನುಮಾಡು ನಿತ್ಯ ಪಡೆವೆ ಮೆಟ್ಟಿ ಸಾವನು
ಹಸುಳೆ ಹಾಲು ಎದೆಯ ಹಾಗೆ ಇರಲಿ ಅಂತರಂಗವು
ಬಾಳ ಹಗರಣಂಗಳಲ್ಲಿ ಇರಲಿ ದೇವಸಂಗವು
ಸಾಗು ನಿತ್ಯ ಸತ್ಯದೆಡೆಗೆ ಹಿಂದೆ ಅಡಿಯ ಕಿತ್ತದೆ
ದೃಢತೆಧೈರ್ಯ ಸಾಕು ಸಾಧಕನಿಗೆ ಧನವುಮತ್ತದೆ”
ನಿನ್ನವಾಣಿ ನೊಂದ ಜೀವಿಗಳಲಿ ಬಲವ ತುಂಬಿದೆ
ಪರಮಹಂಸ ದಿಕ್ಕುಗೆಟ್ಟು ನಿನ್ನ ಮಾತ ನಂಬಿದೆ
*****
Related Post
ಸಣ್ಣ ಕತೆ
-
ಗಂಗೆ ಅಳೆದ ಗಂಗಮ್ಮ
ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…