Home / ಕವನ / ಕವಿತೆ / ಗುಲಾಬಿ

ಗುಲಾಬಿ

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು|
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು||
ಹಾದಿ ಬದಿಯಲಿ | ಹಾದು ಹೋಗುವರ | ಕಣ್ಮನ ಸೆಳೆದಿತ್ತು|
ಹೂವು | ಕಣ್ಮನ ಸೆಳೆದಿತ್ತು | ಹೂವೂ ಕಣ್ಮನ ಸೆಳೆದಿತ್ತು || ೧ ||

ಮುಂಜಾವಿನ ತಿರುಗಾಟಕೆ | ಹೊರಟ | ಹಿರಿಯರ ಸೆಳೆದಿತ್ತು |
ಹೂವು | ಹಿರಿಯರ ಸೆಳೆದಿತ್ತು | ದೇವರ ಪೂಜೆಗೆ ಹೂವು ಸಿಕ್ಕಿತೆಂದು ||
ಸಂತಸ ತಂದಿತ್ತು | ಹೂವು | ಸಂತಸ ತಂದಿತ್ತು || ಮನೆಯ ಕಾಯುತಿಹ |
ನಾಯಿಯ ಬೊಗಳಿಗೆ | ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೨ ||

ಹೋಂ ವರ್ಕ್ ಮಾಡದ | ಶಾಲೆಯ ಹುಡುಗಗೆ | ಚಿಂತೆಯು ಕಾಡಿತ್ತು |
ಮಿಸ್ಸಿಗೆ ಹೂವಿನ | ಕಾಣಿಕೆ ಕೊಡುವ | ಉಪಾಯ ಹೊಳೆದಿತ್ತು!
ಹುಡುಗಗೆ | ಉಪಾಯ ಹೊಳೆದಿತ್ತು || ಕೈಗೆ ಎಟುಕದ ಗಿಡದ ಎತ್ತರಕೆ |
ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೩ ||

ನಲ್ಲೆಯ ಕೋಪಕೆ | ನಲ್ಲನ ಮುಖವು | ಬಾಡಿ ಮುದುಡಿತ್ತು |
ಹುವನು ಕೊಟ್ಟು | ನಲ್ಲೆಯ ಒಲಿಸುವ | ಹುನ್ನಾರ ನಡೆಸಿತ್ತು ||
ಮನಸು | ಹುನ್ನಾರ ನಡೆಸಿತ್ತು || ಹೂವನು ಕೀಳುವ ಹೊತ್ತಿಗೆ ನಮ್ಮ |
ಬಾಗಿಲು ತೆಗೆದಿತ್ತು | ಮನೆಯ | ಬಾಗಿಲು ತೆಗೆದಿತ್ತು || ೪ ||

ಮಧುರಸ ಹೀರುವ | ದುಂಬಿಗೆ ಹೂವಿನ | ಸ್ವಾಗತ ಕಾದಿತ್ತು ||
ಕಟ್ಟುಕಟ್ಟಳೆ | ಆತಂಕವಿಲ್ಲದೆ | ದುಂಬಿಯು ನಲಿದಿತ್ತು ||
ಹೂವಿನ | ಮಡಿಲಲಿ ನಲಿದಿತ್ತು || ಕಾಲನ ಮಹಿಮೆಗೆ |
ಸೂರ್ಯನ ತಾಪಕೆ | ಹೂವದು ಬಾಡಿತ್ತು || ಒಣಗುತ ಉದುರಿತ್ತು || ೫ ||

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು |
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು || ಪ ||
*****
೨೪-೦೨-೧೯೯೪

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...