Home / ಕವನ / ಕವಿತೆ / ಗುಲಾಬಿ

ಗುಲಾಬಿ

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು|
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು||
ಹಾದಿ ಬದಿಯಲಿ | ಹಾದು ಹೋಗುವರ | ಕಣ್ಮನ ಸೆಳೆದಿತ್ತು|
ಹೂವು | ಕಣ್ಮನ ಸೆಳೆದಿತ್ತು | ಹೂವೂ ಕಣ್ಮನ ಸೆಳೆದಿತ್ತು || ೧ ||

ಮುಂಜಾವಿನ ತಿರುಗಾಟಕೆ | ಹೊರಟ | ಹಿರಿಯರ ಸೆಳೆದಿತ್ತು |
ಹೂವು | ಹಿರಿಯರ ಸೆಳೆದಿತ್ತು | ದೇವರ ಪೂಜೆಗೆ ಹೂವು ಸಿಕ್ಕಿತೆಂದು ||
ಸಂತಸ ತಂದಿತ್ತು | ಹೂವು | ಸಂತಸ ತಂದಿತ್ತು || ಮನೆಯ ಕಾಯುತಿಹ |
ನಾಯಿಯ ಬೊಗಳಿಗೆ | ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೨ ||

ಹೋಂ ವರ್ಕ್ ಮಾಡದ | ಶಾಲೆಯ ಹುಡುಗಗೆ | ಚಿಂತೆಯು ಕಾಡಿತ್ತು |
ಮಿಸ್ಸಿಗೆ ಹೂವಿನ | ಕಾಣಿಕೆ ಕೊಡುವ | ಉಪಾಯ ಹೊಳೆದಿತ್ತು!
ಹುಡುಗಗೆ | ಉಪಾಯ ಹೊಳೆದಿತ್ತು || ಕೈಗೆ ಎಟುಕದ ಗಿಡದ ಎತ್ತರಕೆ |
ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೩ ||

ನಲ್ಲೆಯ ಕೋಪಕೆ | ನಲ್ಲನ ಮುಖವು | ಬಾಡಿ ಮುದುಡಿತ್ತು |
ಹುವನು ಕೊಟ್ಟು | ನಲ್ಲೆಯ ಒಲಿಸುವ | ಹುನ್ನಾರ ನಡೆಸಿತ್ತು ||
ಮನಸು | ಹುನ್ನಾರ ನಡೆಸಿತ್ತು || ಹೂವನು ಕೀಳುವ ಹೊತ್ತಿಗೆ ನಮ್ಮ |
ಬಾಗಿಲು ತೆಗೆದಿತ್ತು | ಮನೆಯ | ಬಾಗಿಲು ತೆಗೆದಿತ್ತು || ೪ ||

ಮಧುರಸ ಹೀರುವ | ದುಂಬಿಗೆ ಹೂವಿನ | ಸ್ವಾಗತ ಕಾದಿತ್ತು ||
ಕಟ್ಟುಕಟ್ಟಳೆ | ಆತಂಕವಿಲ್ಲದೆ | ದುಂಬಿಯು ನಲಿದಿತ್ತು ||
ಹೂವಿನ | ಮಡಿಲಲಿ ನಲಿದಿತ್ತು || ಕಾಲನ ಮಹಿಮೆಗೆ |
ಸೂರ್ಯನ ತಾಪಕೆ | ಹೂವದು ಬಾಡಿತ್ತು || ಒಣಗುತ ಉದುರಿತ್ತು || ೫ ||

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು |
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು || ಪ ||
*****
೨೪-೦೨-೧೯೯೪

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...