Home / ಕವನ / ಕವಿತೆ / ಗುಲಾಬಿ

ಗುಲಾಬಿ

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು|
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು||
ಹಾದಿ ಬದಿಯಲಿ | ಹಾದು ಹೋಗುವರ | ಕಣ್ಮನ ಸೆಳೆದಿತ್ತು|
ಹೂವು | ಕಣ್ಮನ ಸೆಳೆದಿತ್ತು | ಹೂವೂ ಕಣ್ಮನ ಸೆಳೆದಿತ್ತು || ೧ ||

ಮುಂಜಾವಿನ ತಿರುಗಾಟಕೆ | ಹೊರಟ | ಹಿರಿಯರ ಸೆಳೆದಿತ್ತು |
ಹೂವು | ಹಿರಿಯರ ಸೆಳೆದಿತ್ತು | ದೇವರ ಪೂಜೆಗೆ ಹೂವು ಸಿಕ್ಕಿತೆಂದು ||
ಸಂತಸ ತಂದಿತ್ತು | ಹೂವು | ಸಂತಸ ತಂದಿತ್ತು || ಮನೆಯ ಕಾಯುತಿಹ |
ನಾಯಿಯ ಬೊಗಳಿಗೆ | ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೨ ||

ಹೋಂ ವರ್ಕ್ ಮಾಡದ | ಶಾಲೆಯ ಹುಡುಗಗೆ | ಚಿಂತೆಯು ಕಾಡಿತ್ತು |
ಮಿಸ್ಸಿಗೆ ಹೂವಿನ | ಕಾಣಿಕೆ ಕೊಡುವ | ಉಪಾಯ ಹೊಳೆದಿತ್ತು!
ಹುಡುಗಗೆ | ಉಪಾಯ ಹೊಳೆದಿತ್ತು || ಕೈಗೆ ಎಟುಕದ ಗಿಡದ ಎತ್ತರಕೆ |
ಹೂವದು ಉಳಿದಿತ್ತು | ನಮ್ಮ ಹೂವದು ಉಳಿದಿತ್ತು || ೩ ||

ನಲ್ಲೆಯ ಕೋಪಕೆ | ನಲ್ಲನ ಮುಖವು | ಬಾಡಿ ಮುದುಡಿತ್ತು |
ಹುವನು ಕೊಟ್ಟು | ನಲ್ಲೆಯ ಒಲಿಸುವ | ಹುನ್ನಾರ ನಡೆಸಿತ್ತು ||
ಮನಸು | ಹುನ್ನಾರ ನಡೆಸಿತ್ತು || ಹೂವನು ಕೀಳುವ ಹೊತ್ತಿಗೆ ನಮ್ಮ |
ಬಾಗಿಲು ತೆಗೆದಿತ್ತು | ಮನೆಯ | ಬಾಗಿಲು ತೆಗೆದಿತ್ತು || ೪ ||

ಮಧುರಸ ಹೀರುವ | ದುಂಬಿಗೆ ಹೂವಿನ | ಸ್ವಾಗತ ಕಾದಿತ್ತು ||
ಕಟ್ಟುಕಟ್ಟಳೆ | ಆತಂಕವಿಲ್ಲದೆ | ದುಂಬಿಯು ನಲಿದಿತ್ತು ||
ಹೂವಿನ | ಮಡಿಲಲಿ ನಲಿದಿತ್ತು || ಕಾಲನ ಮಹಿಮೆಗೆ |
ಸೂರ್ಯನ ತಾಪಕೆ | ಹೂವದು ಬಾಡಿತ್ತು || ಒಣಗುತ ಉದುರಿತ್ತು || ೫ ||

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು |
ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು || ಪ ||
*****
೨೪-೦೨-೧೯೯೪

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...