Home / ಬಾಲ ಚಿಲುಮೆ / ಕವಿತೆ / ಹಳ್ಳಿಯ ಚಿತ್ರ

ಹಳ್ಳಿಯ ಚಿತ್ರ

ಇಹುದು ನಮ್ಮಯ ಹಳ್ಳಿ
ಹೋಗಬೇಕು ಬಸ್ಸಲಿ
ಚಿಕ್ಕದಾದರೇನು ಅಲ್ಲಿ
ಇರುವುದೆಮ್ಮ ಫ್ಯಾಮಿಲಿ

ಕಾಯಕವೇ ಕೈಲಾಸವು
ಅವರ ಜೀವ ಮಂತ್ರ
ಬಿಸಿಲು ಗಾಳಿ ಮಳೆಗೆ
ದುಡಿಯುವಾ ಯಂತ್ರ

ಮಾತು ಕತೆ ಎಲ್ಲ ಒರಟು
ಬಡತನ ಬಾಳ ಬಟ್ಟೆ
ಯಾರೇ ಬರಲಿ ಹೃದಯ ಅರಳಿ
ನಲಿವರು ಊಟಕಿಟ್ಟು

ದನಕರು ಅವರ ದೇವರು
ಹೈನ ಅಲ್ಲಿ ಹೇರಳ
ಮೈದಡವಿ ಪ್ರೀತಿಯನ್ನು
ತೋರದವರು ವಿರಳ

ಹಬ್ಬವಿರಲಿ ಜಾತ್ರೆ ಬರಲಿ
ಕೂಡಿ ಮಾಡುವರೊಟ್ಟಿಗೆ
ಗೀಗೀ ಪದ ನಾಟಕವಾಡಿ
ಹೆಸರುವಾಸಿ ಒಗ್ಗಟ್ಟಿಗೆ

ಊರ ಮುಂದೆ ಇರುವ ಹಳ್ಳ
ಬತ್ತಿ ಬರಿದಾಗಿಹುದು
ಹೇಳುತಿಹರು ಕಾಡು ನಾಶ
ಕಾರಣವಾಗಿರ ಬಹುದು

ಜಗ್ಗು ಬೋರು ನಲ್ಲಿ ನೀರು
ಪಂಚಾಯತಿಯ ಕೃಪೆ
ಊರಮುಂದೆ ದೇವರ ಗುಡಿಯು
ಅವರುಗಳ ಕಣ್ಣ ವಪೆ

ಮನೆಯ ಮುಂದೆ ಹಿತ್ತಲಲ್ಲಿ
ತೆಂಗು ಕರಿಬೇವು
ಖಾಲಿ ಜಾಗ ತುಂಬಿ ಕಂಟಿ
ಬೀರುವವು ಹೂವು

ಮೋಸ ಕಪಟದಾಟ ಅವರ
ಬಾಳಿನಿಂದ ದೂರ
ಸಹಬಾಳ್ವೆ ಸುಖದ ಬದುಕು
ಅವರ ಜೀವದುಸಿರು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...