ಹಳ್ಳಿಯ ಚಿತ್ರ

ಇಹುದು ನಮ್ಮಯ ಹಳ್ಳಿ
ಹೋಗಬೇಕು ಬಸ್ಸಲಿ
ಚಿಕ್ಕದಾದರೇನು ಅಲ್ಲಿ
ಇರುವುದೆಮ್ಮ ಫ್ಯಾಮಿಲಿ

ಕಾಯಕವೇ ಕೈಲಾಸವು
ಅವರ ಜೀವ ಮಂತ್ರ
ಬಿಸಿಲು ಗಾಳಿ ಮಳೆಗೆ
ದುಡಿಯುವಾ ಯಂತ್ರ

ಮಾತು ಕತೆ ಎಲ್ಲ ಒರಟು
ಬಡತನ ಬಾಳ ಬಟ್ಟೆ
ಯಾರೇ ಬರಲಿ ಹೃದಯ ಅರಳಿ
ನಲಿವರು ಊಟಕಿಟ್ಟು

ದನಕರು ಅವರ ದೇವರು
ಹೈನ ಅಲ್ಲಿ ಹೇರಳ
ಮೈದಡವಿ ಪ್ರೀತಿಯನ್ನು
ತೋರದವರು ವಿರಳ

ಹಬ್ಬವಿರಲಿ ಜಾತ್ರೆ ಬರಲಿ
ಕೂಡಿ ಮಾಡುವರೊಟ್ಟಿಗೆ
ಗೀಗೀ ಪದ ನಾಟಕವಾಡಿ
ಹೆಸರುವಾಸಿ ಒಗ್ಗಟ್ಟಿಗೆ

ಊರ ಮುಂದೆ ಇರುವ ಹಳ್ಳ
ಬತ್ತಿ ಬರಿದಾಗಿಹುದು
ಹೇಳುತಿಹರು ಕಾಡು ನಾಶ
ಕಾರಣವಾಗಿರ ಬಹುದು

ಜಗ್ಗು ಬೋರು ನಲ್ಲಿ ನೀರು
ಪಂಚಾಯತಿಯ ಕೃಪೆ
ಊರಮುಂದೆ ದೇವರ ಗುಡಿಯು
ಅವರುಗಳ ಕಣ್ಣ ವಪೆ

ಮನೆಯ ಮುಂದೆ ಹಿತ್ತಲಲ್ಲಿ
ತೆಂಗು ಕರಿಬೇವು
ಖಾಲಿ ಜಾಗ ತುಂಬಿ ಕಂಟಿ
ಬೀರುವವು ಹೂವು

ಮೋಸ ಕಪಟದಾಟ ಅವರ
ಬಾಳಿನಿಂದ ದೂರ
ಸಹಬಾಳ್ವೆ ಸುಖದ ಬದುಕು
ಅವರ ಜೀವದುಸಿರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟ ಹಕ್ಕಿಯ ಪ್ರವಾಸ
Next post ಸಂತೋಷ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…