ಹಳ್ಳಿಯ ಚಿತ್ರ

ಇಹುದು ನಮ್ಮಯ ಹಳ್ಳಿ
ಹೋಗಬೇಕು ಬಸ್ಸಲಿ
ಚಿಕ್ಕದಾದರೇನು ಅಲ್ಲಿ
ಇರುವುದೆಮ್ಮ ಫ್ಯಾಮಿಲಿ

ಕಾಯಕವೇ ಕೈಲಾಸವು
ಅವರ ಜೀವ ಮಂತ್ರ
ಬಿಸಿಲು ಗಾಳಿ ಮಳೆಗೆ
ದುಡಿಯುವಾ ಯಂತ್ರ

ಮಾತು ಕತೆ ಎಲ್ಲ ಒರಟು
ಬಡತನ ಬಾಳ ಬಟ್ಟೆ
ಯಾರೇ ಬರಲಿ ಹೃದಯ ಅರಳಿ
ನಲಿವರು ಊಟಕಿಟ್ಟು

ದನಕರು ಅವರ ದೇವರು
ಹೈನ ಅಲ್ಲಿ ಹೇರಳ
ಮೈದಡವಿ ಪ್ರೀತಿಯನ್ನು
ತೋರದವರು ವಿರಳ

ಹಬ್ಬವಿರಲಿ ಜಾತ್ರೆ ಬರಲಿ
ಕೂಡಿ ಮಾಡುವರೊಟ್ಟಿಗೆ
ಗೀಗೀ ಪದ ನಾಟಕವಾಡಿ
ಹೆಸರುವಾಸಿ ಒಗ್ಗಟ್ಟಿಗೆ

ಊರ ಮುಂದೆ ಇರುವ ಹಳ್ಳ
ಬತ್ತಿ ಬರಿದಾಗಿಹುದು
ಹೇಳುತಿಹರು ಕಾಡು ನಾಶ
ಕಾರಣವಾಗಿರ ಬಹುದು

ಜಗ್ಗು ಬೋರು ನಲ್ಲಿ ನೀರು
ಪಂಚಾಯತಿಯ ಕೃಪೆ
ಊರಮುಂದೆ ದೇವರ ಗುಡಿಯು
ಅವರುಗಳ ಕಣ್ಣ ವಪೆ

ಮನೆಯ ಮುಂದೆ ಹಿತ್ತಲಲ್ಲಿ
ತೆಂಗು ಕರಿಬೇವು
ಖಾಲಿ ಜಾಗ ತುಂಬಿ ಕಂಟಿ
ಬೀರುವವು ಹೂವು

ಮೋಸ ಕಪಟದಾಟ ಅವರ
ಬಾಳಿನಿಂದ ದೂರ
ಸಹಬಾಳ್ವೆ ಸುಖದ ಬದುಕು
ಅವರ ಜೀವದುಸಿರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟ ಹಕ್ಕಿಯ ಪ್ರವಾಸ
Next post ಸಂತೋಷ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…