Home / ಬಾಲ ಚಿಲುಮೆ / ಕವಿತೆ / ಮರಿ ಇಲಿ ಸಾಹಸ

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು
ಅವರ ಮನೆಯಲಿ ಇಲಿಗಳು ನೂರು
ಎಲ್ಲೆಂದರಲ್ಲಿ ಅವುಗಳ ವಾಸ
ಬೇಡ ರಾಯರಿಗಿದು ತರಲೆ ಸಹವಾಸ

ಮಗಳ ಬೂಟು ರಾಯರ ಹ್ಯಾಟು
ಹೆಂಡತಿ ಸೀರೆ ಮಗನ ಸೂಟು
ಸೋಪು ಬ್ರೆಷ್ ಕಿಟಕಿಯ ಕರ್ಟನ್
ಎಲ್ಲವು ಆದವು ರೂಪದಿ ಮಾಡ್ರನ್

ಇಲಿಗಳ ಓಡಿಸೆ ಅವರ ಪ್ರಯತ್ನ
ಆದವು ಎಲ್ಲಾ ವಿಫಲಯತ್ನ
ರೋಸಿದ ರಾಯರು ತಂದರು ಬೆಕ್ಕು
ಅಡಗಿಸಲೋಸುಗ ಇಲಿಗಳ ಸೊಕ್ಕು

ಬೆಕ್ಕನು ಕಂಡು ಇಲಿಗಳು ನೊಂದು
ಕರೆದವು ಕೂಡಲೆ ಸಭೆಯನ್ನೊಂದು
ಬೆಕ್ಕಿನ ಕಾಟವು ಸಾಕೇಸಾಕು
ತಪ್ಪಿಸಿಕೊಳ್ಳಲು ಪರಿಹಾರವು ಬೇಕು

ಕೂಡಲೆ ಒಂದು ಹಿರಿ ಇಲಿಬಂದು
ಗಣಗಣ ಗಂಟೆಯ ತಂದಿತು ಒಂದು
ಕಟ್ಟಿರಿ ಶತ್ರುಗೆ ಕೊರಳಿಗೆ ಎಂದು
ಆಡಲೆ ಇಲ್ಲ ಮಾತನು ಒಂದೂ

ಶತಶತಮಾನದ ಈ ಸಮಸ್ಯೆ
ಪರಿಹಾರಕ್ಕೆ ಮಾಡಿದ್ದವು ತಪಸ್ಸೇ
ಆದರು ಸಾಧ್ಯವು ಆಗದು ಎಂದು
ಗೋಣನು ಕೆಳಗೆ ಹಾಕಿದವಂದು

ಕೈಚೆಲ್ಲಿ ಕುಳಿತ ಇಲಿಗಳ ಗುಂಪು
ಬೆಕ್ಕಿಗೆ ಸಿಕ್ಕವು ಭೋಜನ ಸೊಂಪು
ಮರಿ ಇಲಿಯೊಂದು ಹಾಕಿತು ಲೆಕ್ಕ
ಹುಡುಕಲೆ ಬೇಕು ಉಪಾಯವು ಪಕ್ಕ

ಮರಿಇಲಿ ರಾಯರ ಕೋಣೆಯಲಿ
ಶತಪಥ ಹೆಜ್ಜೆಯ ಹಾಕುತಲಿ
ನೆನೆಯಿತು ಗಣಪನ ಮನದಲ್ಲಿ
ಹೊಳೆಯಿತು ಸಂಚು ತಲೆಯಲ್ಲಿ

ರಾಯರು ನಿತ್ಯ ಗುಳಿಗೆಯ ನುಂಗಿ
ನಿದ್ರಿಸುವರು ನೆಮ್ಮದಿಯಲಿ ಮಲಗಿ
ಮರಿಇಲಿ ತಂದು ನಿದ್ರೆಯ ಗುಳಿಗೆ
ಹಾಕಿತು ಬೆಕ್ಕಿನ ತಟ್ಟೆಯ ಒಳಗೆ

ಒಡತಿಯು ತಂದಳು ಹಾಲನ್ನು
ಮುದದಲಿ ಕರೆದಳು ಬೆಕ್ಕನ್ನು
ಕಣ್ಮುಚ್ಚಿ ಕುಡಿಯಿತು ಹಾಲನ್ನು
ನಿದ್ರೆಗೆ ಅಪ್ಪಿತು ಧರೆಯನ್ನು

ಮರಿಇಲಿ ಆಗಲೆ ಗಂಟೆಯನು
ಬಿಗಿಯಿತು ಬೆಕ್ಕಿನ ಕೊರಳನ್ನು
ಮರಿಇಲಿ ಸಾಹಸ ಕೊಂಡಾಡಿದವು
ಸಂತಸದೀ ಕುಣಿಕುಣಿದಾಡಿದವು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...