Home / ಬಾಲ ಚಿಲುಮೆ / ಕವಿತೆ / ಮರಿ ಇಲಿ ಸಾಹಸ

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು
ಅವರ ಮನೆಯಲಿ ಇಲಿಗಳು ನೂರು
ಎಲ್ಲೆಂದರಲ್ಲಿ ಅವುಗಳ ವಾಸ
ಬೇಡ ರಾಯರಿಗಿದು ತರಲೆ ಸಹವಾಸ

ಮಗಳ ಬೂಟು ರಾಯರ ಹ್ಯಾಟು
ಹೆಂಡತಿ ಸೀರೆ ಮಗನ ಸೂಟು
ಸೋಪು ಬ್ರೆಷ್ ಕಿಟಕಿಯ ಕರ್ಟನ್
ಎಲ್ಲವು ಆದವು ರೂಪದಿ ಮಾಡ್ರನ್

ಇಲಿಗಳ ಓಡಿಸೆ ಅವರ ಪ್ರಯತ್ನ
ಆದವು ಎಲ್ಲಾ ವಿಫಲಯತ್ನ
ರೋಸಿದ ರಾಯರು ತಂದರು ಬೆಕ್ಕು
ಅಡಗಿಸಲೋಸುಗ ಇಲಿಗಳ ಸೊಕ್ಕು

ಬೆಕ್ಕನು ಕಂಡು ಇಲಿಗಳು ನೊಂದು
ಕರೆದವು ಕೂಡಲೆ ಸಭೆಯನ್ನೊಂದು
ಬೆಕ್ಕಿನ ಕಾಟವು ಸಾಕೇಸಾಕು
ತಪ್ಪಿಸಿಕೊಳ್ಳಲು ಪರಿಹಾರವು ಬೇಕು

ಕೂಡಲೆ ಒಂದು ಹಿರಿ ಇಲಿಬಂದು
ಗಣಗಣ ಗಂಟೆಯ ತಂದಿತು ಒಂದು
ಕಟ್ಟಿರಿ ಶತ್ರುಗೆ ಕೊರಳಿಗೆ ಎಂದು
ಆಡಲೆ ಇಲ್ಲ ಮಾತನು ಒಂದೂ

ಶತಶತಮಾನದ ಈ ಸಮಸ್ಯೆ
ಪರಿಹಾರಕ್ಕೆ ಮಾಡಿದ್ದವು ತಪಸ್ಸೇ
ಆದರು ಸಾಧ್ಯವು ಆಗದು ಎಂದು
ಗೋಣನು ಕೆಳಗೆ ಹಾಕಿದವಂದು

ಕೈಚೆಲ್ಲಿ ಕುಳಿತ ಇಲಿಗಳ ಗುಂಪು
ಬೆಕ್ಕಿಗೆ ಸಿಕ್ಕವು ಭೋಜನ ಸೊಂಪು
ಮರಿ ಇಲಿಯೊಂದು ಹಾಕಿತು ಲೆಕ್ಕ
ಹುಡುಕಲೆ ಬೇಕು ಉಪಾಯವು ಪಕ್ಕ

ಮರಿಇಲಿ ರಾಯರ ಕೋಣೆಯಲಿ
ಶತಪಥ ಹೆಜ್ಜೆಯ ಹಾಕುತಲಿ
ನೆನೆಯಿತು ಗಣಪನ ಮನದಲ್ಲಿ
ಹೊಳೆಯಿತು ಸಂಚು ತಲೆಯಲ್ಲಿ

ರಾಯರು ನಿತ್ಯ ಗುಳಿಗೆಯ ನುಂಗಿ
ನಿದ್ರಿಸುವರು ನೆಮ್ಮದಿಯಲಿ ಮಲಗಿ
ಮರಿಇಲಿ ತಂದು ನಿದ್ರೆಯ ಗುಳಿಗೆ
ಹಾಕಿತು ಬೆಕ್ಕಿನ ತಟ್ಟೆಯ ಒಳಗೆ

ಒಡತಿಯು ತಂದಳು ಹಾಲನ್ನು
ಮುದದಲಿ ಕರೆದಳು ಬೆಕ್ಕನ್ನು
ಕಣ್ಮುಚ್ಚಿ ಕುಡಿಯಿತು ಹಾಲನ್ನು
ನಿದ್ರೆಗೆ ಅಪ್ಪಿತು ಧರೆಯನ್ನು

ಮರಿಇಲಿ ಆಗಲೆ ಗಂಟೆಯನು
ಬಿಗಿಯಿತು ಬೆಕ್ಕಿನ ಕೊರಳನ್ನು
ಮರಿಇಲಿ ಸಾಹಸ ಕೊಂಡಾಡಿದವು
ಸಂತಸದೀ ಕುಣಿಕುಣಿದಾಡಿದವು.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...