Home / ಬಾಲ ಚಿಲುಮೆ / ಕವಿತೆ / ಮರಿ ಇಲಿ ಸಾಹಸ

ಮರಿ ಇಲಿ ಸಾಹಸ

ಒಂದೂರಲ್ಲಿ ಇದ್ದರು ರಾಯರು
ಅವರ ಮನೆಯಲಿ ಇಲಿಗಳು ನೂರು
ಎಲ್ಲೆಂದರಲ್ಲಿ ಅವುಗಳ ವಾಸ
ಬೇಡ ರಾಯರಿಗಿದು ತರಲೆ ಸಹವಾಸ

ಮಗಳ ಬೂಟು ರಾಯರ ಹ್ಯಾಟು
ಹೆಂಡತಿ ಸೀರೆ ಮಗನ ಸೂಟು
ಸೋಪು ಬ್ರೆಷ್ ಕಿಟಕಿಯ ಕರ್ಟನ್
ಎಲ್ಲವು ಆದವು ರೂಪದಿ ಮಾಡ್ರನ್

ಇಲಿಗಳ ಓಡಿಸೆ ಅವರ ಪ್ರಯತ್ನ
ಆದವು ಎಲ್ಲಾ ವಿಫಲಯತ್ನ
ರೋಸಿದ ರಾಯರು ತಂದರು ಬೆಕ್ಕು
ಅಡಗಿಸಲೋಸುಗ ಇಲಿಗಳ ಸೊಕ್ಕು

ಬೆಕ್ಕನು ಕಂಡು ಇಲಿಗಳು ನೊಂದು
ಕರೆದವು ಕೂಡಲೆ ಸಭೆಯನ್ನೊಂದು
ಬೆಕ್ಕಿನ ಕಾಟವು ಸಾಕೇಸಾಕು
ತಪ್ಪಿಸಿಕೊಳ್ಳಲು ಪರಿಹಾರವು ಬೇಕು

ಕೂಡಲೆ ಒಂದು ಹಿರಿ ಇಲಿಬಂದು
ಗಣಗಣ ಗಂಟೆಯ ತಂದಿತು ಒಂದು
ಕಟ್ಟಿರಿ ಶತ್ರುಗೆ ಕೊರಳಿಗೆ ಎಂದು
ಆಡಲೆ ಇಲ್ಲ ಮಾತನು ಒಂದೂ

ಶತಶತಮಾನದ ಈ ಸಮಸ್ಯೆ
ಪರಿಹಾರಕ್ಕೆ ಮಾಡಿದ್ದವು ತಪಸ್ಸೇ
ಆದರು ಸಾಧ್ಯವು ಆಗದು ಎಂದು
ಗೋಣನು ಕೆಳಗೆ ಹಾಕಿದವಂದು

ಕೈಚೆಲ್ಲಿ ಕುಳಿತ ಇಲಿಗಳ ಗುಂಪು
ಬೆಕ್ಕಿಗೆ ಸಿಕ್ಕವು ಭೋಜನ ಸೊಂಪು
ಮರಿ ಇಲಿಯೊಂದು ಹಾಕಿತು ಲೆಕ್ಕ
ಹುಡುಕಲೆ ಬೇಕು ಉಪಾಯವು ಪಕ್ಕ

ಮರಿಇಲಿ ರಾಯರ ಕೋಣೆಯಲಿ
ಶತಪಥ ಹೆಜ್ಜೆಯ ಹಾಕುತಲಿ
ನೆನೆಯಿತು ಗಣಪನ ಮನದಲ್ಲಿ
ಹೊಳೆಯಿತು ಸಂಚು ತಲೆಯಲ್ಲಿ

ರಾಯರು ನಿತ್ಯ ಗುಳಿಗೆಯ ನುಂಗಿ
ನಿದ್ರಿಸುವರು ನೆಮ್ಮದಿಯಲಿ ಮಲಗಿ
ಮರಿಇಲಿ ತಂದು ನಿದ್ರೆಯ ಗುಳಿಗೆ
ಹಾಕಿತು ಬೆಕ್ಕಿನ ತಟ್ಟೆಯ ಒಳಗೆ

ಒಡತಿಯು ತಂದಳು ಹಾಲನ್ನು
ಮುದದಲಿ ಕರೆದಳು ಬೆಕ್ಕನ್ನು
ಕಣ್ಮುಚ್ಚಿ ಕುಡಿಯಿತು ಹಾಲನ್ನು
ನಿದ್ರೆಗೆ ಅಪ್ಪಿತು ಧರೆಯನ್ನು

ಮರಿಇಲಿ ಆಗಲೆ ಗಂಟೆಯನು
ಬಿಗಿಯಿತು ಬೆಕ್ಕಿನ ಕೊರಳನ್ನು
ಮರಿಇಲಿ ಸಾಹಸ ಕೊಂಡಾಡಿದವು
ಸಂತಸದೀ ಕುಣಿಕುಣಿದಾಡಿದವು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ