ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ
ಮಿಂಚಿನ ವಿದ್ಯುತ್ ಹರಿದಾಟ
ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ
ಬಯಲು ಸೀಮೆಯ ರೊಟ್ಟಿಚಟ್ನಿ
ರುಚಿಕಂಡ ಶೇಖನೊಬ್ಬ ಬಂದ
ಕತ್ತಲೆ ರಾತ್ರಿಯಲ್ಲಿ
ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು
ಮುಗಿಸಿಯೇ ಬಿಟ್ಟ ಒಪ್ಪಂದ
ಪುಟ್ಟ ಬಾಲೆಯೊಂದಿಗೆ ನಿಕಾಹ್!
ಮೂರು ತಿಂಗಳ ಬಳಿಕ
ಬಿರಬಿರನೆ ಹೊರನಡೆದ ಬರೆದಿಟ್ಟು
ತಲ್ಲಾಕಿನ ಮೂರು ಶಬ್ದಗಳ ಮೇಲೆ
ಹಸಿರು ಕಟ್ಟುಗಳ ಭಾರ ಹೇರಿ
ಅಮ್ಮಿಗೇನು ಗೊತ್ತು ಹೇಳು?
ನಾ ಹೊತ್ತಿರುವ ಅವನ ಬಸಿರು?
ಕನಸ ಕಟ್ಟೆಯ ಗೋರಿಯ ಮೇಲೆ
ಧರ್ಮದ ಚಾದರ ಹೊದ್ದು
ಬದುಕೆಲ್ಲ ತೊಳೆಯಬೇಕಿದೆ
ಅವನ ಹಾದರದ ಹೊಲಸು
ಮೇಲೆ ಧರ್ಮದ ಮುಸುಕು
ಅದು ಅಮ್ಮಿಗೇನು ಗೊತ್ತು?
ಹಸಿದ ಹೊಟ್ಟೆ ಚುರುಗುಟ್ಟಿದಾಗ
ಮಂಡೆ ಊರಿದಳಲ್ಲ ಅಮ್ಮಿ
ಅಸಹಾಯಕತೆಯ ಅಳಲಿನಲಿ
ಕರುಳ ಕುಡಿಯನ್ನೂ ಮರೆತವಳಲ್ಲ
ಬದುಕೆಲ್ಲ ನಾನು ಸಹಿಸಬೇಕಿದೆ
ಅಸಹಾಯಕತೆಯ ಈ ನೋವು
ಧರ್ಮದ ಮುಸುಕಿನೊಳಗೆಯೇ!
*****
Related Post
ಸಣ್ಣ ಕತೆ
-
ಪತ್ರ ಪ್ರೇಮ
ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಪಾಠ
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಮಿಂಚು
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…