ಧರ್ಮದ ಮುಸುಕಿನೊಳಗಿಂದ

ಅಮ್ಮಿಯ ಗುಳಿಬಿದ್ದ ಕಣ್ಣುಗಳಲ್ಲಿ
ಮಿಂಚಿನ ವಿದ್ಯುತ್‌ ಹರಿದಾಟ
ಅವಳ ಸತ್ತ ಕೈಗಳಲ್ಲಿ ಜೀವ ಸಂಚಾರ
ಬಯಲು ಸೀಮೆಯ ರೊಟ್ಟಿಚಟ್ನಿ
ರುಚಿಕಂಡ ಶೇಖನೊಬ್ಬ ಬಂದ
ಕತ್ತಲೆ ರಾತ್ರಿಯಲ್ಲಿ
ಧರ್ಮ ದಲ್ಲಾಲರ ಎದುರಾಗಿಟ್ಟುಕೊಂಡು
ಮುಗಿಸಿಯೇ ಬಿಟ್ಟ ಒಪ್ಪಂದ
ಪುಟ್ಟ ಬಾಲೆಯೊಂದಿಗೆ ನಿಕಾಹ್!
ಮೂರು ತಿಂಗಳ ಬಳಿಕ
ಬಿರಬಿರನೆ ಹೊರನಡೆದ ಬರೆದಿಟ್ಟು
ತಲ್ಲಾಕಿನ ಮೂರು ಶಬ್ದಗಳ ಮೇಲೆ
ಹಸಿರು ಕಟ್ಟುಗಳ ಭಾರ ಹೇರಿ
ಅಮ್ಮಿಗೇನು ಗೊತ್ತು ಹೇಳು?
ನಾ ಹೊತ್ತಿರುವ ಅವನ ಬಸಿರು?
ಕನಸ ಕಟ್ಟೆಯ ಗೋರಿಯ ಮೇಲೆ
ಧರ್ಮದ ಚಾದರ ಹೊದ್ದು
ಬದುಕೆಲ್ಲ ತೊಳೆಯಬೇಕಿದೆ
ಅವನ ಹಾದರದ ಹೊಲಸು
ಮೇಲೆ ಧರ್ಮದ ಮುಸುಕು
ಅದು ಅಮ್ಮಿಗೇನು ಗೊತ್ತು?
ಹಸಿದ ಹೊಟ್ಟೆ ಚುರುಗುಟ್ಟಿದಾಗ
ಮಂಡೆ ಊರಿದಳಲ್ಲ ಅಮ್ಮಿ
ಅಸಹಾಯಕತೆಯ ಅಳಲಿನಲಿ
ಕರುಳ ಕುಡಿಯನ್ನೂ ಮರೆತವಳಲ್ಲ
ಬದುಕೆಲ್ಲ ನಾನು ಸಹಿಸಬೇಕಿದೆ
ಅಸಹಾಯಕತೆಯ ಈ ನೋವು
ಧರ್ಮದ ಮುಸುಕಿನೊಳಗೆಯೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಂತೂ ನಾನಿರಬೇಕಿದ್ದರೆ
Next post ಮರಿ ಇಲಿ ಸಾಹಸ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…