Home / ಕವನ / ಕವಿತೆ / ಕನಸು ಹೊಸೆಯುವಾಸೆ

ಕನಸು ಹೊಸೆಯುವಾಸೆ

ಚೂರಾದ ಕನ್ನಡಿ ಜೋಡಿಸಿ
ಪ್ರತಿಬಿಂಬ ಕಾಣುವ ತವಕ
ಹರಡಿದ ತುಂಡು ಕನಸುಗಳ
ಹರಿದ ಚಿಂದಿಗಳ ಹೊಂದಿಸಿ
ಎಲೆ ಚಂಚಿ ಹೊಲಿಯುವಾಸೆ

ಬಿರಿದ ಹಾಳು ಗೋಡೆಗಳಲ್ಲಿ
ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು
ಬೆಳದಿಂಗಳ ಆ ಬಯಲಿನಲಿ
ಲಾಂದ್ರದ ಮಂದ್ರ ಬೆಳಕು
ಚಂದ್ರನಿಗೆ ನಾಚಿಕೆ ಮೂಡಿಸುವಾಸೆ.

ಮೌನದ ಪರದೆಯಲಿ ಏಕಾಂಗಿ
ಕಮಲದ ಮೇಲಣ ಜಲಬಿಂದು
ಪಾರದರ್ಶಕ ಸ್ಪಟಿಕದ ಬೆಳದಿಂಗಳು
ಕನಸು ಚೆಲ್ಲಿದ ನದಿಯ ಹರವು
ಶಬ್ದ ಮಡುತ್ತ ಹರಿಯುವಾಸೆ.

ಹೊಸೆದ ಕನಸುಗಳ ಪೋಣಿಸಿ
ಸೋರಿ ಹೋಗುವ ವಾಸ್ತವಗಳ
ಕತ್ತಲೆಗೆ ಬೆವರುವ ಶಬ್ದಗಳ
ಉಸುಕಿನೊಳಗಿಂದ ಒಸರುವ ನೀರು
ಜೀವಪೋಷಕವಾಗಿ ಹರಿಸುವಾಸೆ.

ಬೇಡವೆಂದರೂ ಕೂಗುತ್ತಿದ್ದ ಸೈರನ್ನು
ಆಗಸದಿಂದ ಸುರಿದ ಆಲಿಕಲ್ಲಿನ
ಹೆಪ್ಪುಗಟ್ಟಿದ್ದ ಕೆಂಪು ರಕ್ತವಿತ್ತು
ವಿನಾಶದ ಸೂಚನೆಯಿತ್ತು
ಮುಚ್ಚಿಟ್ಟ ಗುಟ್ಟು ಬಿಚ್ಚಿ ತೋರಿಸುವಾಸೆ.

ಪರದೆಯ ಹಿಂದಿನ ಅವಳ ಕಣ್ಣು
ಅಮೂರ್ತದ ನೆರಳಿನ ಭಾರ
ಸ್ಮಶಾನದಲ್ಲಿ ಇಟ್ಟ ಹೆಜ್ಜೆಗಳು
ಸುಟ್ಟ ಬಾಗಿಲಿನ ಚೌಕಟ್ಟುಗಳಾಚೆ
ಕರಕಲಾದ ಅವಳ ಕರಳುಗಳ
ತೆರೆದು ಲೋಕಕೆ ತೋರಿಸುವಾಸೆ.

ಮಣ್ಣಿನ ಕಣಕಣದಲ್ಲಿ ಪ್ರತಿರೂಪ
ಅತಂತ್ರದ ಅಹವಾಲುಗಳ ಅಂಗಳದಲ್ಲಿ
ಮರುಜೀವ ಪಡೆದು ನಳನಳಿಸಿದ
ಆಗಸದ ಚುಕ್ಕಿ ತಾರೆಗಳ ಹುಡುಕುತ್ತ
ಸ್ಥಬ್ದ ವೃತ್ತದಲ್ಲಿ ಶಬ್ದ ಮಡುತ್ತ
ನಾಳಿನ ಕನಸುಗಳ ಹೊಸೆಯುವಾಸೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...