Home / ಕವನ / ಕವಿತೆ / ಕನಸು ಹೊಸೆಯುವಾಸೆ

ಕನಸು ಹೊಸೆಯುವಾಸೆ

ಚೂರಾದ ಕನ್ನಡಿ ಜೋಡಿಸಿ
ಪ್ರತಿಬಿಂಬ ಕಾಣುವ ತವಕ
ಹರಡಿದ ತುಂಡು ಕನಸುಗಳ
ಹರಿದ ಚಿಂದಿಗಳ ಹೊಂದಿಸಿ
ಎಲೆ ಚಂಚಿ ಹೊಲಿಯುವಾಸೆ

ಬಿರಿದ ಹಾಳು ಗೋಡೆಗಳಲ್ಲಿ
ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು
ಬೆಳದಿಂಗಳ ಆ ಬಯಲಿನಲಿ
ಲಾಂದ್ರದ ಮಂದ್ರ ಬೆಳಕು
ಚಂದ್ರನಿಗೆ ನಾಚಿಕೆ ಮೂಡಿಸುವಾಸೆ.

ಮೌನದ ಪರದೆಯಲಿ ಏಕಾಂಗಿ
ಕಮಲದ ಮೇಲಣ ಜಲಬಿಂದು
ಪಾರದರ್ಶಕ ಸ್ಪಟಿಕದ ಬೆಳದಿಂಗಳು
ಕನಸು ಚೆಲ್ಲಿದ ನದಿಯ ಹರವು
ಶಬ್ದ ಮಡುತ್ತ ಹರಿಯುವಾಸೆ.

ಹೊಸೆದ ಕನಸುಗಳ ಪೋಣಿಸಿ
ಸೋರಿ ಹೋಗುವ ವಾಸ್ತವಗಳ
ಕತ್ತಲೆಗೆ ಬೆವರುವ ಶಬ್ದಗಳ
ಉಸುಕಿನೊಳಗಿಂದ ಒಸರುವ ನೀರು
ಜೀವಪೋಷಕವಾಗಿ ಹರಿಸುವಾಸೆ.

ಬೇಡವೆಂದರೂ ಕೂಗುತ್ತಿದ್ದ ಸೈರನ್ನು
ಆಗಸದಿಂದ ಸುರಿದ ಆಲಿಕಲ್ಲಿನ
ಹೆಪ್ಪುಗಟ್ಟಿದ್ದ ಕೆಂಪು ರಕ್ತವಿತ್ತು
ವಿನಾಶದ ಸೂಚನೆಯಿತ್ತು
ಮುಚ್ಚಿಟ್ಟ ಗುಟ್ಟು ಬಿಚ್ಚಿ ತೋರಿಸುವಾಸೆ.

ಪರದೆಯ ಹಿಂದಿನ ಅವಳ ಕಣ್ಣು
ಅಮೂರ್ತದ ನೆರಳಿನ ಭಾರ
ಸ್ಮಶಾನದಲ್ಲಿ ಇಟ್ಟ ಹೆಜ್ಜೆಗಳು
ಸುಟ್ಟ ಬಾಗಿಲಿನ ಚೌಕಟ್ಟುಗಳಾಚೆ
ಕರಕಲಾದ ಅವಳ ಕರಳುಗಳ
ತೆರೆದು ಲೋಕಕೆ ತೋರಿಸುವಾಸೆ.

ಮಣ್ಣಿನ ಕಣಕಣದಲ್ಲಿ ಪ್ರತಿರೂಪ
ಅತಂತ್ರದ ಅಹವಾಲುಗಳ ಅಂಗಳದಲ್ಲಿ
ಮರುಜೀವ ಪಡೆದು ನಳನಳಿಸಿದ
ಆಗಸದ ಚುಕ್ಕಿ ತಾರೆಗಳ ಹುಡುಕುತ್ತ
ಸ್ಥಬ್ದ ವೃತ್ತದಲ್ಲಿ ಶಬ್ದ ಮಡುತ್ತ
ನಾಳಿನ ಕನಸುಗಳ ಹೊಸೆಯುವಾಸೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...