Home / ಕವನ / ಕವಿತೆ / ಕನಸು ಹೊಸೆಯುವಾಸೆ

ಕನಸು ಹೊಸೆಯುವಾಸೆ

ಚೂರಾದ ಕನ್ನಡಿ ಜೋಡಿಸಿ
ಪ್ರತಿಬಿಂಬ ಕಾಣುವ ತವಕ
ಹರಡಿದ ತುಂಡು ಕನಸುಗಳ
ಹರಿದ ಚಿಂದಿಗಳ ಹೊಂದಿಸಿ
ಎಲೆ ಚಂಚಿ ಹೊಲಿಯುವಾಸೆ

ಬಿರಿದ ಹಾಳು ಗೋಡೆಗಳಲ್ಲಿ
ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು
ಬೆಳದಿಂಗಳ ಆ ಬಯಲಿನಲಿ
ಲಾಂದ್ರದ ಮಂದ್ರ ಬೆಳಕು
ಚಂದ್ರನಿಗೆ ನಾಚಿಕೆ ಮೂಡಿಸುವಾಸೆ.

ಮೌನದ ಪರದೆಯಲಿ ಏಕಾಂಗಿ
ಕಮಲದ ಮೇಲಣ ಜಲಬಿಂದು
ಪಾರದರ್ಶಕ ಸ್ಪಟಿಕದ ಬೆಳದಿಂಗಳು
ಕನಸು ಚೆಲ್ಲಿದ ನದಿಯ ಹರವು
ಶಬ್ದ ಮಡುತ್ತ ಹರಿಯುವಾಸೆ.

ಹೊಸೆದ ಕನಸುಗಳ ಪೋಣಿಸಿ
ಸೋರಿ ಹೋಗುವ ವಾಸ್ತವಗಳ
ಕತ್ತಲೆಗೆ ಬೆವರುವ ಶಬ್ದಗಳ
ಉಸುಕಿನೊಳಗಿಂದ ಒಸರುವ ನೀರು
ಜೀವಪೋಷಕವಾಗಿ ಹರಿಸುವಾಸೆ.

ಬೇಡವೆಂದರೂ ಕೂಗುತ್ತಿದ್ದ ಸೈರನ್ನು
ಆಗಸದಿಂದ ಸುರಿದ ಆಲಿಕಲ್ಲಿನ
ಹೆಪ್ಪುಗಟ್ಟಿದ್ದ ಕೆಂಪು ರಕ್ತವಿತ್ತು
ವಿನಾಶದ ಸೂಚನೆಯಿತ್ತು
ಮುಚ್ಚಿಟ್ಟ ಗುಟ್ಟು ಬಿಚ್ಚಿ ತೋರಿಸುವಾಸೆ.

ಪರದೆಯ ಹಿಂದಿನ ಅವಳ ಕಣ್ಣು
ಅಮೂರ್ತದ ನೆರಳಿನ ಭಾರ
ಸ್ಮಶಾನದಲ್ಲಿ ಇಟ್ಟ ಹೆಜ್ಜೆಗಳು
ಸುಟ್ಟ ಬಾಗಿಲಿನ ಚೌಕಟ್ಟುಗಳಾಚೆ
ಕರಕಲಾದ ಅವಳ ಕರಳುಗಳ
ತೆರೆದು ಲೋಕಕೆ ತೋರಿಸುವಾಸೆ.

ಮಣ್ಣಿನ ಕಣಕಣದಲ್ಲಿ ಪ್ರತಿರೂಪ
ಅತಂತ್ರದ ಅಹವಾಲುಗಳ ಅಂಗಳದಲ್ಲಿ
ಮರುಜೀವ ಪಡೆದು ನಳನಳಿಸಿದ
ಆಗಸದ ಚುಕ್ಕಿ ತಾರೆಗಳ ಹುಡುಕುತ್ತ
ಸ್ಥಬ್ದ ವೃತ್ತದಲ್ಲಿ ಶಬ್ದ ಮಡುತ್ತ
ನಾಳಿನ ಕನಸುಗಳ ಹೊಸೆಯುವಾಸೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...