ಮೂಡಲ ಗಿರಿಯಪ್ಪ ಮೂಡಿ ಬಂದಾಗ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬೆಟ್ಟದ ಬಣ್ಣವೆ ಬಂಗಾರ
ಬೆಟ್ಟದ ಬಣ್ಣ ಬಂಗಾರ ಎಂದಾನ
ತಾನ ತಂದನಾ ತಂದನಾನ

ಕೋಲೂ ಕೋಲೆನ್ನ ಕೋಲೇ
ರನ್ನದಾ ಚಿನ್ನದಾ ಕೋಲೂ ಕೋಲೆನ್ನ ಕೋಲೇ
ಆ ಬಣ್ಣದಾ ಕೋಲೂಕೋಲೆನ್ನ ಕೋಲೇ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಮೋಡದ ಬಣ್ಣವೆ ಬಂಗಾರ
ಮೋಡದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಕೆರೆ ನೀರ ಬಣ್ಣವೆ ಬಂಗಾರ
ಕೆರೆ ನೀರ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹಸುಗಳ ಬಣ್ಣವೆ ಬಂಗಾರ
ಹಸುಗಳ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹಟ್ಟಿಯ ಬಣ್ಣವೆ ಬಂಗಾರ
ಹಟ್ಟಿಯ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬಾವಿಯ ಬಣ್ಣವೆ ಬಂಗಾರ
ಬಾವಿಯ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಬಿಂದಿಗೆ ಬಣ್ಣವೆ ಬಂಗಾರ
ಬಿಂದಿಗೆ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಹರಿವಾಣದ ಬಣ್ಣವೆ ಬಂಗಾರ
ಹರಿವಾಣದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ಕುಂಕುಮದ ಬಣ್ಣವೆ ಬಂಗಾರ
ಕುಂಕುಮದ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ

ಮೂಡಲ ಗಿರಿಯಪ್ಪ ಮೂಡಿ ಬಂದಾಗ
ರಂಗೋಲಿ ಬಣ್ಣವೆ ಬಂಗಾರ
ರಂಗೋಲಿ ಬಣ್ಣ ಬಂಗಾರ ಎಂದಾನ
ತಾನೆ ತಂದನಾ ತಂದನಾನ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ
Next post ಕನಸು ಹೊಸೆಯುವಾಸೆ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys