ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ಆಹಾರ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿದ್ಯುತ್ ತಯಾರಿಸಿದಂತೆ ಲಿಂಬೆಹಣ್ಣಿನ ಸಿಪ್ಪೆಯಲ್ಲಿ ಸ್ವಾದಿಷ್ಟವಾದ ಪುಷ್ಟಿಕರವಾದ ತಂಬುಳಿಯನ್ನು ಮಾಡಬಹುದೆಂದು ಪೌರಶಾಸ್ತ್ರಜ್ಞರು ಪ್ರಯೋಗಮಾಡಿದ್ದಾರೆ. ಒಬ್ಬರಾದರೆ ಒಂದು ಲಿಂಬೆಹಣ್ಣಿನ ಸಿಪ್ಪೆ ೧/೨ ಚಮಚೆ ಜೀರಿಗೆ, ಅಡಿಕೆ ಗಾತ್ರದ ಬೆಲ್ಲ ಅಥವಾ ತುಪ್ಪ, ಒಂದು ಲೋಟ ಸಿಹಿಮಜ್ಜಿಗೆ ೧/೪ ತೆಂಗಿನ ಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣಿ ಸಾಮಗ್ರಿಗಳು.

ತಯಾರಿಸುವ ವಿಧಾನ : ರಸ ತೆಗೆದ ಲಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಣಲೆಯನ್ನು ಒಲೆಯ ಮೇಲಿಟ್ಟು ಲಿಂಬೆಸಿಪ್ಪೆಯನ್ನು ಹಾಕಿ ತುಪ್ಪುವನ್ನು ಹಾಕಬೇಕು. ಅದನ್ನು ಮಗಚುತ್ತ ಇದ್ದು ಕಂದು ಬಣ್ಣ ಬಂದಾಗ ಜೀರಿಗೆಯಲ್ಲಿ ಒಣಮೆಣಸನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ತೆಂಗಿನ ತುರಿಯೊಂದಿಗೆ ನಯವಾಗಿ ರುಬ್ಬಿ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಜ್ಜಿಗೆಯನ್ನು ಹಾಕಿ ಒಗ್ಗರಣಿ ಹಾಕಬೇಕು. ಮಜ್ಜಿಗೆಯ ಬದಲು ಹುಣಸೆಹುಳಿ ಹಾಕಿ ಗಟ್ಟಿಯಾಗಿ ತೆಗೆದರೆ ಚಟ್ನಿಯೂ ಆಗುತ್ತದೆ. ತಂಬುಳಿಯೂ ಆಗುತ್ತದೆ.

ಅಜೀರ್ಣವಾದರೆ ಕೊತ್ತಂಬರಿ ರಸ ಸಿದ್ಧಿ : ಜಾಸ್ತಿ ಊಟವಾದಾಗ ಅಥವಾ ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತಾದಾಗ ಇಂಗ್ಲಿಷ್‌ ಔಷಧಿ ಪಡೆಯುವುದಕ್ಕಿಂತ ಪಾಕಶಾಸ್ತ್ರಜ್ಞರು ಇತೀಚಿಗೆ ಒಂದು ವಿಧಾನವನು ಕಂಡು ಹಿಡಿದಿದಾರೆ. ಸಿದ್ಧ ಮಾಡಿಟ್ಟುಕೊಂಡ ಕೊತ್ತಂಬರಿ ಎಲೆಗಳ ರಸವನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿದರೆ ಹೊಟ್ಟೆ ತಣ್ಣಗಾಗಿ ಸಾರಾಗಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಳೀ ಹಾಡು
Next post ಮೂಡಲ ಗಿರಿಯಪ್ಪ ಮೂಡಿ ಬಂದಾಗ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…