Home / ಲೇಖನ / ಇತರೆ / ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಾಮಾನ್ಯವಾಗಿ ಬಾಳೆಹಣ್ಣಿನ ಸಿಪ್ಪೆ, ಸೀತಾಫಲದ ಸಿಪ್ಪೆಗಳನ್ನು ತೆಗೆದು ಒಳಗಿನ ತಿರುಳನ್ನು ಮಾತ್ರ ನಾವು ಉಪಯೋಗಿಸುತ್ತೇವೆ. ಆದರೆ ಈ ಸಿಪ್ಪೆಗಳು ನಿರುಯುಕ್ತವೆಂದು ಬೀಸಾಡುತ್ತೇವೆ. ನಿಜಕ್ಕೂ ಈ ಸಿಪ್ಪೆಗಳಲ್ಲಿಯೇ ಜೀವಸತ್ವ ಅಧಿಕವಾಗಿರುತ್ತದೆಂದು ಆಹಾರ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿದ್ಯುತ್ ತಯಾರಿಸಿದಂತೆ ಲಿಂಬೆಹಣ್ಣಿನ ಸಿಪ್ಪೆಯಲ್ಲಿ ಸ್ವಾದಿಷ್ಟವಾದ ಪುಷ್ಟಿಕರವಾದ ತಂಬುಳಿಯನ್ನು ಮಾಡಬಹುದೆಂದು ಪೌರಶಾಸ್ತ್ರಜ್ಞರು ಪ್ರಯೋಗಮಾಡಿದ್ದಾರೆ. ಒಬ್ಬರಾದರೆ ಒಂದು ಲಿಂಬೆಹಣ್ಣಿನ ಸಿಪ್ಪೆ ೧/೨ ಚಮಚೆ ಜೀರಿಗೆ, ಅಡಿಕೆ ಗಾತ್ರದ ಬೆಲ್ಲ ಅಥವಾ ತುಪ್ಪ, ಒಂದು ಲೋಟ ಸಿಹಿಮಜ್ಜಿಗೆ ೧/೪ ತೆಂಗಿನ ಕಾಯಿ ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣಿ ಸಾಮಗ್ರಿಗಳು.

ತಯಾರಿಸುವ ವಿಧಾನ : ರಸ ತೆಗೆದ ಲಿಂಬೆಹಣ್ಣಿನ ಸಿಪ್ಪೆಯನ್ನು ಸಣ್ಣದಾಗಿ ಹೆಚ್ಚಿಕೊಂಡು ಬಾಣಲೆಯನ್ನು ಒಲೆಯ ಮೇಲಿಟ್ಟು ಲಿಂಬೆಸಿಪ್ಪೆಯನ್ನು ಹಾಕಿ ತುಪ್ಪುವನ್ನು ಹಾಕಬೇಕು. ಅದನ್ನು ಮಗಚುತ್ತ ಇದ್ದು ಕಂದು ಬಣ್ಣ ಬಂದಾಗ ಜೀರಿಗೆಯಲ್ಲಿ ಒಣಮೆಣಸನ್ನು ಹಾಕಿ ಹುರಿದುಕೊಳ್ಳಬೇಕು. ನಂತರ ತೆಂಗಿನ ತುರಿಯೊಂದಿಗೆ ನಯವಾಗಿ ರುಬ್ಬಿ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮಜ್ಜಿಗೆಯನ್ನು ಹಾಕಿ ಒಗ್ಗರಣಿ ಹಾಕಬೇಕು. ಮಜ್ಜಿಗೆಯ ಬದಲು ಹುಣಸೆಹುಳಿ ಹಾಕಿ ಗಟ್ಟಿಯಾಗಿ ತೆಗೆದರೆ ಚಟ್ನಿಯೂ ಆಗುತ್ತದೆ. ತಂಬುಳಿಯೂ ಆಗುತ್ತದೆ.

ಅಜೀರ್ಣವಾದರೆ ಕೊತ್ತಂಬರಿ ರಸ ಸಿದ್ಧಿ : ಜಾಸ್ತಿ ಊಟವಾದಾಗ ಅಥವಾ ಹೊಟ್ಟೆಯೊಳಗೆ ಗ್ಯಾಸ್ ತುಂಬಿಕೊಂಡು ಹೊಟ್ಟೆ ಉಬ್ಬರಿಸಿದಂತಾದಾಗ ಇಂಗ್ಲಿಷ್‌ ಔಷಧಿ ಪಡೆಯುವುದಕ್ಕಿಂತ ಪಾಕಶಾಸ್ತ್ರಜ್ಞರು ಇತೀಚಿಗೆ ಒಂದು ವಿಧಾನವನು ಕಂಡು ಹಿಡಿದಿದಾರೆ. ಸಿದ್ಧ ಮಾಡಿಟ್ಟುಕೊಂಡ ಕೊತ್ತಂಬರಿ ಎಲೆಗಳ ರಸವನ್ನು ಮಜ್ಜಿಗೆಯಲ್ಲಿ ಬೆರಸಿ ಕುಡಿದರೆ ಹೊಟ್ಟೆ ತಣ್ಣಗಾಗಿ ಸಾರಾಗಲಾಗುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...