Home / ಕವನ / ಭಾವಗೀತೆ / ಮಳೀ ಹಾಡು

ಮಳೀ ಹಾಡು

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು |
ಮಣ್ಣಾಗಿ ಹೋದರು ಮಳಿರಾಜಾ ||
ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೧||

ಒಕ್ಕಲಗೇರ್ಯಾಗ ಮಕಿರಾಜಾ | ಅವರು |
ಮಕ್ಕಳು ಮಾರ್ಯಾರ ಮಳಿರಾಜಾ ||
ಮಕ್ಕಳ ಮಾರೀಽ ರೊಕ್ಕಾ ಹಿಡಕೊಂಡು
ಭತ್ತಂಡಽ ತಿರಗ್ಯಾರ ಮಳಿರಾಜಾ ||೨||

ಸೊಲಗಿ ಹಿಟ್ಟಿನಾಗ ಮಳಿರಾಜಾ | ಅವರು |
ಸುಣ್ಣನ್ನು ಕೂಡಿಸ್ಯಾರ ಮಳಿರಾಜಾ ||
ಹಸ್ತು ಬಂದಕೇರಿ ಗಪಗಪ ತಿಂದು
ಒದ್ದಾಡಿ ಸತ್ತಾರ ಮಳಿರಾಜಾ ||೩||

ಗಿದ್ದನ ಆಕ್ಕ್ಯಾಗ ಮಳಿರಾಜಾ | ಅವರು |
ಅಪುವನ್ನು ಕೂಡ್ಯಾರ ಮಳಿರಾಜಾ ||
ಸಣ್ಣ ಕೂಸಿಗಿ ಮನ್ನಿಸಿ ಉಣಿಸ್ಯಾರ
ಕಣ್ಣನ್ನೆ ಮುಚ್ಚ್ಯಾವ ಮಳಿರಾಜಾ ||೪||

ಗಂಡುಳ್ಳ ಬಾಲ್ಯಾರು ಮಳಿರಾಜಾ | ಅವರು |
ಭಿಕ್ಷಾಕ ಹೊರಟಾರ ಮಳಿರಾಜಾ ||
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೫||

ಸ್ವಾತಿಽಯ ಮಳೆ ಬಂದು ಮಳಿರಾಜಾ | ಸುತ್ತ |
ದೇಶಾಕ ಆಗ್ಯಾದ ಮಳೆರಾಜಾ ||
ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು
ಯಾವಾಗ ಬಂದೆಪ್ಪಾ ಮಳಿರಾಜಾ ||೬||
*****

ಬಿತ್ತಿಗೆಯ ಕಾಲದಲ್ಲಿ ಮಳೆಯು ಬರುವುದಕ್ಕೆ ಬಹೆಳ ತಡವಾಗಹತ್ತಿದರೆ ಒಕ್ಕಲಿಗರಲ್ಲಿ ಹಾಹಾಕಾರವೇ ಎದ್ದು ಹೋಗುತ್ತಿದೆ. ಪೂರ್ವಾ ಉತ್ತರಾ ಮಳೆಗಳು ಆಗಲೇಬೇಕು. ಅವು ತಪ್ಪಿದರೆ ರಂಬಾಟಕ್ಕೆ ಆರಂಭವೇ. ಹೀಗಿದ್ದು ಯಾವುದೊ ಒಂದು ವರುಷ ಸ್ವಾತಿಯ ಮಳೆಯ ವರೆಗೆ ಒಂದು ಹನಿ ಕೂಡ ಬೀಳೆಲಿಲ್ಲವಂತೆ. ಹೀಗೆ ಆದಾಗಲೆಲ್ಲ ಎಲ್ಲೆಲ್ಲಿಯೂ ಬರದ ಲಕ್ಷಣಗಳೇ ತೋರುತ್ತವೆ. ಇಂತಹೆ ಪ್ರಸಂಗದ ಒಂದು ಕರುಣಾಜನಕ ಚಿತ್ರವು ಈ ಹಾಡಿನಲ್ಲಿದೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದ ಪ್ರಯೋಗಗಳು:- ಗುಬ್ಬ್ಯಾರು=ಘೋಷಾ ಪದ್ದತಿಯ ಹೆಣ್ಣು ಮಕ್ಕಳು (ಗುಬ್ಬಿಯಂತೆ ಯಾವಾಗಲೂ ಮನೆಯಲ್ಲಿಯೆ ಇರುವವರು.) ಅನ್ಯಾದ=ಅನ್ಯಾಯದ. ಬಂದಕೇರಿ=ಬಂದುಬಿಟ್ಟು. ಉಣಿಸ್ಯಾರ=ಉಣಿಸಿದರು. ಮುಚ್ಚ್ಯಾವ=ಮುಚ್ಚಿದವು.

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...