ಮಳೀ ಹಾಡು

ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು |
ಮಣ್ಣಾಗಿ ಹೋದರು ಮಳಿರಾಜಾ ||
ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೧||

ಒಕ್ಕಲಗೇರ್ಯಾಗ ಮಕಿರಾಜಾ | ಅವರು |
ಮಕ್ಕಳು ಮಾರ್ಯಾರ ಮಳಿರಾಜಾ ||
ಮಕ್ಕಳ ಮಾರೀಽ ರೊಕ್ಕಾ ಹಿಡಕೊಂಡು
ಭತ್ತಂಡಽ ತಿರಗ್ಯಾರ ಮಳಿರಾಜಾ ||೨||

ಸೊಲಗಿ ಹಿಟ್ಟಿನಾಗ ಮಳಿರಾಜಾ | ಅವರು |
ಸುಣ್ಣನ್ನು ಕೂಡಿಸ್ಯಾರ ಮಳಿರಾಜಾ ||
ಹಸ್ತು ಬಂದಕೇರಿ ಗಪಗಪ ತಿಂದು
ಒದ್ದಾಡಿ ಸತ್ತಾರ ಮಳಿರಾಜಾ ||೩||

ಗಿದ್ದನ ಆಕ್ಕ್ಯಾಗ ಮಳಿರಾಜಾ | ಅವರು |
ಅಪುವನ್ನು ಕೂಡ್ಯಾರ ಮಳಿರಾಜಾ ||
ಸಣ್ಣ ಕೂಸಿಗಿ ಮನ್ನಿಸಿ ಉಣಿಸ್ಯಾರ
ಕಣ್ಣನ್ನೆ ಮುಚ್ಚ್ಯಾವ ಮಳಿರಾಜಾ ||೪||

ಗಂಡುಳ್ಳ ಬಾಲ್ಯಾರು ಮಳಿರಾಜಾ | ಅವರು |
ಭಿಕ್ಷಾಕ ಹೊರಟಾರ ಮಳಿರಾಜಾ ||
ಗಂಡುಳ್ಳ ಬಾಲ್ಯಾರು ಭಿಕ್ಷಾಕ ಹೋದರು
ಅನ್ಯದ ದಿನ ಬಂದು ಮಳಿರಾಜಾ ||೫||

ಸ್ವಾತಿಽಯ ಮಳೆ ಬಂದು ಮಳಿರಾಜಾ | ಸುತ್ತ |
ದೇಶಾಕ ಆಗ್ಯಾದ ಮಳೆರಾಜಾ ||
ಹಳ್ಳ ಕೊಳ್ಳ ಹೆಣ ಹರಿದಾಡಿ ಹೋದವು
ಯಾವಾಗ ಬಂದೆಪ್ಪಾ ಮಳಿರಾಜಾ ||೬||
*****

ಬಿತ್ತಿಗೆಯ ಕಾಲದಲ್ಲಿ ಮಳೆಯು ಬರುವುದಕ್ಕೆ ಬಹೆಳ ತಡವಾಗಹತ್ತಿದರೆ ಒಕ್ಕಲಿಗರಲ್ಲಿ ಹಾಹಾಕಾರವೇ ಎದ್ದು ಹೋಗುತ್ತಿದೆ. ಪೂರ್ವಾ ಉತ್ತರಾ ಮಳೆಗಳು ಆಗಲೇಬೇಕು. ಅವು ತಪ್ಪಿದರೆ ರಂಬಾಟಕ್ಕೆ ಆರಂಭವೇ. ಹೀಗಿದ್ದು ಯಾವುದೊ ಒಂದು ವರುಷ ಸ್ವಾತಿಯ ಮಳೆಯ ವರೆಗೆ ಒಂದು ಹನಿ ಕೂಡ ಬೀಳೆಲಿಲ್ಲವಂತೆ. ಹೀಗೆ ಆದಾಗಲೆಲ್ಲ ಎಲ್ಲೆಲ್ಲಿಯೂ ಬರದ ಲಕ್ಷಣಗಳೇ ತೋರುತ್ತವೆ. ಇಂತಹೆ ಪ್ರಸಂಗದ ಒಂದು ಕರುಣಾಜನಕ ಚಿತ್ರವು ಈ ಹಾಡಿನಲ್ಲಿದೆ.

ಛಂದಸ್ಸು:- ತ್ರಿಪದಿಯ ಪೂರ್ವಾರ್ಧ.

ಶಬ್ದ ಪ್ರಯೋಗಗಳು:- ಗುಬ್ಬ್ಯಾರು=ಘೋಷಾ ಪದ್ದತಿಯ ಹೆಣ್ಣು ಮಕ್ಕಳು (ಗುಬ್ಬಿಯಂತೆ ಯಾವಾಗಲೂ ಮನೆಯಲ್ಲಿಯೆ ಇರುವವರು.) ಅನ್ಯಾದ=ಅನ್ಯಾಯದ. ಬಂದಕೇರಿ=ಬಂದುಬಿಟ್ಟು. ಉಣಿಸ್ಯಾರ=ಉಣಿಸಿದರು. ಮುಚ್ಚ್ಯಾವ=ಮುಚ್ಚಿದವು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೇ ಇರುವೆ ನನ್ನ ಪರವಾಗಿ
Next post ಲಿಂಬೆ ಹಣ್ಣಿನ ಸಿಪ್ಪಿಯಲ್ಲಿ ಪೌಷ್ಠಿಕವಾದ ತಂಬುಳಿ ತಯಾರಿಕೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys