Home / ಕವನ / ಕವಿತೆ / ಅವಳುಂಟು ಅವಳ ರೆಕ್ಕೆಯುಂಟು

ಅವಳುಂಟು ಅವಳ ರೆಕ್ಕೆಯುಂಟು

ಬಾನಂಗಳದಲಿ ಹಾರುವ ಹಕ್ಕಿಗೆ
ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು
ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ
ನಿರ್ಭಂಧಗಳಾಚೆ ತಂಬೆಲರ ತಾಣ.

ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ
ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ
ಹಗುರವಾಗುತ್ತಿದ್ದಾಳೆ ಅವಳು
ಇಷ್ಟಿಷ್ಟೇ ಗೋಡೆಗಳ ಲಂಘಿಸುತ್ತಿದ್ದಾಳೆ.

ಕಟ್ಟಿದ್ದ ಹುತ್ತದಲ್ಲಿ ಹಾವಿನ ಸಹವಾಸ,
ಸಾಕಿನ್ನು ಮನೆವಾಸ, ವನವಾಸ,
ಭೂಮಿಪುತ್ರರ ಸಹವಾಸವೂ ಸಾಕು.
ರಾಮ ರಾಜ್ಯದಲ್ಲಿ ಆಜ್ಞೆಪಾಲನೆ ಸಾಕು.

ದುಃಷ್ಯಂತನ ಪ್ರೇಮದುಂಗುರದಲಿ
ನಂಬಿಕೆಯಿಟ್ಟು ನಿರಾಶಳಾಗಿದ್ದು ಸಾಕು,
ಶಾಪಿತ ಅಹಲ್ಯೆ ಕಲ್ಲಾಗುವುದು ಸಾಕು,
ಸೀರೆ ಸೆಳೆಯುವ ಅಪಮಾನ ಸಾಕು ಸಾಕು.

ಬಿರುಮುಡಿಯ ಎತ್ತಿ ಕಟ್ಟಿದ ದೌಪದಿ
ಕಟ್ಟಳೆಗಳ ಮೆಟ್ಟಿ ನಿಂತಿದ್ದಾಳೆ ನೋಡು,
ಲಕ್ಷ್ಮಣ ರೇಖೆಗಳ ದಾಟಿ ಬಂದಿದ್ದಾಳೆ
ಆಕಾಶದಂಗಳಕೆ ಲಗ್ಗೆಯಿಟ್ಟಿದ್ದಾಳೆ.

ಎಲ್ಲ ನಿರ್ಭಂಧಗಳ ಕಿತ್ತೊಗೆದು
ಸೂರ್ಯ ಶಿಕಾರಿಗೆ ಹೊರಟ್ಟಿದ್ದಾಳೆ
ಸ್ವಚ್ಛಂಧ ಆಗಸದಲ್ಲಿ ಹಾರುತ್ತಿದ್ದಾಳೆ
ಮಾನವತೆಯ ಮೇರುಶಿಖರ ಏರುತ್ತಿದ್ದಾಳೆ,
ಏಕೆಂದರೆ ಅವಳುಂಟು ಅವಳ ರೆಕ್ಕೆಯುಂಟು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...