ಅವಳುಂಟು ಅವಳ ರೆಕ್ಕೆಯುಂಟು

ಬಾನಂಗಳದಲಿ ಹಾರುವ ಹಕ್ಕಿಗೆ
ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು
ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ
ನಿರ್ಭಂಧಗಳಾಚೆ ತಂಬೆಲರ ತಾಣ.

ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ
ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ
ಹಗುರವಾಗುತ್ತಿದ್ದಾಳೆ ಅವಳು
ಇಷ್ಟಿಷ್ಟೇ ಗೋಡೆಗಳ ಲಂಘಿಸುತ್ತಿದ್ದಾಳೆ.

ಕಟ್ಟಿದ್ದ ಹುತ್ತದಲ್ಲಿ ಹಾವಿನ ಸಹವಾಸ,
ಸಾಕಿನ್ನು ಮನೆವಾಸ, ವನವಾಸ,
ಭೂಮಿಪುತ್ರರ ಸಹವಾಸವೂ ಸಾಕು.
ರಾಮ ರಾಜ್ಯದಲ್ಲಿ ಆಜ್ಞೆಪಾಲನೆ ಸಾಕು.

ದುಃಷ್ಯಂತನ ಪ್ರೇಮದುಂಗುರದಲಿ
ನಂಬಿಕೆಯಿಟ್ಟು ನಿರಾಶಳಾಗಿದ್ದು ಸಾಕು,
ಶಾಪಿತ ಅಹಲ್ಯೆ ಕಲ್ಲಾಗುವುದು ಸಾಕು,
ಸೀರೆ ಸೆಳೆಯುವ ಅಪಮಾನ ಸಾಕು ಸಾಕು.

ಬಿರುಮುಡಿಯ ಎತ್ತಿ ಕಟ್ಟಿದ ದೌಪದಿ
ಕಟ್ಟಳೆಗಳ ಮೆಟ್ಟಿ ನಿಂತಿದ್ದಾಳೆ ನೋಡು,
ಲಕ್ಷ್ಮಣ ರೇಖೆಗಳ ದಾಟಿ ಬಂದಿದ್ದಾಳೆ
ಆಕಾಶದಂಗಳಕೆ ಲಗ್ಗೆಯಿಟ್ಟಿದ್ದಾಳೆ.

ಎಲ್ಲ ನಿರ್ಭಂಧಗಳ ಕಿತ್ತೊಗೆದು
ಸೂರ್ಯ ಶಿಕಾರಿಗೆ ಹೊರಟ್ಟಿದ್ದಾಳೆ
ಸ್ವಚ್ಛಂಧ ಆಗಸದಲ್ಲಿ ಹಾರುತ್ತಿದ್ದಾಳೆ
ಮಾನವತೆಯ ಮೇರುಶಿಖರ ಏರುತ್ತಿದ್ದಾಳೆ,
ಏಕೆಂದರೆ ಅವಳುಂಟು ಅವಳ ರೆಕ್ಕೆಯುಂಟು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲ್ಲು ಕಡ್ಡಿ ಗೂಡು ಕಟ್ಟಿ
Next post ನಾಯಿ ಮರಿ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…