Home / ಕವನ / ಕವಿತೆ / ಅವಳುಂಟು ಅವಳ ರೆಕ್ಕೆಯುಂಟು

ಅವಳುಂಟು ಅವಳ ರೆಕ್ಕೆಯುಂಟು

ಬಾನಂಗಳದಲಿ ಹಾರುವ ಹಕ್ಕಿಗೆ
ಇದೆ ಅದರದೇ ರೆಕ್ಕೆ, ಪುಕ್ಕ, ಕೊಕ್ಕು
ಸ್ವಚ್ಛಂದ ಆಗಸದಲಿ ಗಡಿಗಳಿಲ್ಲದೆ ಲೋಕ
ನಿರ್ಭಂಧಗಳಾಚೆ ತಂಬೆಲರ ತಾಣ.

ಕಟ್ಟು ಕಟ್ಟಳೆ ಲಕ್ಷ್ಮಣರೇಖೆಗಳಾಚೆ
ಬಚ್ಚಿಟ್ಟ ಬೇಗುದಿಗಳ ಗಾಳಿಗೆ ತೂರಿ
ಹಗುರವಾಗುತ್ತಿದ್ದಾಳೆ ಅವಳು
ಇಷ್ಟಿಷ್ಟೇ ಗೋಡೆಗಳ ಲಂಘಿಸುತ್ತಿದ್ದಾಳೆ.

ಕಟ್ಟಿದ್ದ ಹುತ್ತದಲ್ಲಿ ಹಾವಿನ ಸಹವಾಸ,
ಸಾಕಿನ್ನು ಮನೆವಾಸ, ವನವಾಸ,
ಭೂಮಿಪುತ್ರರ ಸಹವಾಸವೂ ಸಾಕು.
ರಾಮ ರಾಜ್ಯದಲ್ಲಿ ಆಜ್ಞೆಪಾಲನೆ ಸಾಕು.

ದುಃಷ್ಯಂತನ ಪ್ರೇಮದುಂಗುರದಲಿ
ನಂಬಿಕೆಯಿಟ್ಟು ನಿರಾಶಳಾಗಿದ್ದು ಸಾಕು,
ಶಾಪಿತ ಅಹಲ್ಯೆ ಕಲ್ಲಾಗುವುದು ಸಾಕು,
ಸೀರೆ ಸೆಳೆಯುವ ಅಪಮಾನ ಸಾಕು ಸಾಕು.

ಬಿರುಮುಡಿಯ ಎತ್ತಿ ಕಟ್ಟಿದ ದೌಪದಿ
ಕಟ್ಟಳೆಗಳ ಮೆಟ್ಟಿ ನಿಂತಿದ್ದಾಳೆ ನೋಡು,
ಲಕ್ಷ್ಮಣ ರೇಖೆಗಳ ದಾಟಿ ಬಂದಿದ್ದಾಳೆ
ಆಕಾಶದಂಗಳಕೆ ಲಗ್ಗೆಯಿಟ್ಟಿದ್ದಾಳೆ.

ಎಲ್ಲ ನಿರ್ಭಂಧಗಳ ಕಿತ್ತೊಗೆದು
ಸೂರ್ಯ ಶಿಕಾರಿಗೆ ಹೊರಟ್ಟಿದ್ದಾಳೆ
ಸ್ವಚ್ಛಂಧ ಆಗಸದಲ್ಲಿ ಹಾರುತ್ತಿದ್ದಾಳೆ
ಮಾನವತೆಯ ಮೇರುಶಿಖರ ಏರುತ್ತಿದ್ದಾಳೆ,
ಏಕೆಂದರೆ ಅವಳುಂಟು ಅವಳ ರೆಕ್ಕೆಯುಂಟು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...