ಹುಲ್ಲು ಕಡ್ಡಿ ಗೂಡು ಕಟ್ಟಿ

ಹುಲ್ಲು ಕಡ್ಡಿ ಗೂಡು ಕಟ್ಟಿ
ಹಕ್ಕಿ ಕಾಯುವುದು ನಾಳೆಗೆ
ಕಾಳುಗಳನು ಹೆಕ್ಕಿ ತಂದು
ಅಳಿಲು ಕಾಯುವುದು ನಾಳೆಗೆ

ಎಲೆಯುದುರಿಸಿ ಚಳಿಯಲ್ಲಿ
ಮರ ಕಾಯುವುದು ನಾಳೆಗೆ
ನೆಲ ಉತ್ತು ಬೀಜ ಬಿತ್ತಿ
ರೈತ ಕಾಯುವುದು ನಾಳೆಗೆ

ಬಾವಿ ಕಟ್ಟೆ ಸುತ್ತ ನಿಂತು
ಏನು ಗುಸು ಗುಸು ಹೆಂಗಸರದು
ಮರದ ನೆರಳ ಕೆಳಗೆ ಕುಳಿತು
ಏನು ಚರ್ಚೆ ಗಂಡಸರದು

ಹೊಂತಗಾರ ಹೊಂತಗಾತಿ
ನಗುನಗುತ್ತ ಹೋಗುತಾರೆ
ಕೋಲೂರುವ ಮುದುಕರೂ
ಈ ದಾರಿ ನಡೆಯುತ್ತಾರೆ

ಚಿನ್ನಿ ದಾಂಡು ಆಡುತಾವೆ
ಬೀದಿ ತುಂಬ ಮಕ್ಕಳು
ಜಗಳಾಡುವ ನಲಿದಾಡುವ
ಖಯಾಲಿರದ ಹೈಕಳು

ನೆನಪುಗಳಿವೆ ಕತೆಗಳಿವೆ
ಸಂತೋಷವಿದೆ ವ್ಯಥೆಯಿದೆ
ಮಾಗಿ ಕಳೆದು ವಸಂತ ಬಂದು
ಮತ್ತೆ ಸುರುವಾಗುವ ಕಥೆಯಿದೆ

ಯಾರೊ ಸಮೆದ ಆಟದಂತೆ
ನೇಮ ನಿಯಮ ತಿಳಿಯದೆ
ಕಣ್ಕಟ್ಟು ಕಣ್ಬಿಟ್ಟು
ಆಟವಂತು ಸಾಗಿದೆ

ಸೋತುದೆಷ್ಟು ಗಳಿಸಿದೆಷ್ಟು
ಲೆಕ್ಕಾಚಾರ ನಂತರ
ಈಗಂತೂ ಎತ್ತಿಕೊಳ್ಳಿ
ನಿಮಗೆ ಬಂದ ಚಿತ್ತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾನಿಯಾ ಮಿರ್‍ಜಾ
Next post ಅವಳುಂಟು ಅವಳ ರೆಕ್ಕೆಯುಂಟು

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…