ಹುಲ್ಲು ಕಡ್ಡಿ ಗೂಡು ಕಟ್ಟಿ

ಹುಲ್ಲು ಕಡ್ಡಿ ಗೂಡು ಕಟ್ಟಿ
ಹಕ್ಕಿ ಕಾಯುವುದು ನಾಳೆಗೆ
ಕಾಳುಗಳನು ಹೆಕ್ಕಿ ತಂದು
ಅಳಿಲು ಕಾಯುವುದು ನಾಳೆಗೆ

ಎಲೆಯುದುರಿಸಿ ಚಳಿಯಲ್ಲಿ
ಮರ ಕಾಯುವುದು ನಾಳೆಗೆ
ನೆಲ ಉತ್ತು ಬೀಜ ಬಿತ್ತಿ
ರೈತ ಕಾಯುವುದು ನಾಳೆಗೆ

ಬಾವಿ ಕಟ್ಟೆ ಸುತ್ತ ನಿಂತು
ಏನು ಗುಸು ಗುಸು ಹೆಂಗಸರದು
ಮರದ ನೆರಳ ಕೆಳಗೆ ಕುಳಿತು
ಏನು ಚರ್ಚೆ ಗಂಡಸರದು

ಹೊಂತಗಾರ ಹೊಂತಗಾತಿ
ನಗುನಗುತ್ತ ಹೋಗುತಾರೆ
ಕೋಲೂರುವ ಮುದುಕರೂ
ಈ ದಾರಿ ನಡೆಯುತ್ತಾರೆ

ಚಿನ್ನಿ ದಾಂಡು ಆಡುತಾವೆ
ಬೀದಿ ತುಂಬ ಮಕ್ಕಳು
ಜಗಳಾಡುವ ನಲಿದಾಡುವ
ಖಯಾಲಿರದ ಹೈಕಳು

ನೆನಪುಗಳಿವೆ ಕತೆಗಳಿವೆ
ಸಂತೋಷವಿದೆ ವ್ಯಥೆಯಿದೆ
ಮಾಗಿ ಕಳೆದು ವಸಂತ ಬಂದು
ಮತ್ತೆ ಸುರುವಾಗುವ ಕಥೆಯಿದೆ

ಯಾರೊ ಸಮೆದ ಆಟದಂತೆ
ನೇಮ ನಿಯಮ ತಿಳಿಯದೆ
ಕಣ್ಕಟ್ಟು ಕಣ್ಬಿಟ್ಟು
ಆಟವಂತು ಸಾಗಿದೆ

ಸೋತುದೆಷ್ಟು ಗಳಿಸಿದೆಷ್ಟು
ಲೆಕ್ಕಾಚಾರ ನಂತರ
ಈಗಂತೂ ಎತ್ತಿಕೊಳ್ಳಿ
ನಿಮಗೆ ಬಂದ ಚಿತ್ತರ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾನಿಯಾ ಮಿರ್‍ಜಾ
Next post ಅವಳುಂಟು ಅವಳ ರೆಕ್ಕೆಯುಂಟು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys