ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು.
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ

ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲಿ ಮನೆಮಾಡಿಕೊಂಡ ವಚನ, ಅರ್ಥ ಏನೇ ಇರಲಿ, ಸ್ಪಟಿಕ ಸ್ಪಷ್ಟವಾದ ಚಿತ್ರವೊಂದನ್ನು ಇದು ಕಟ್ಟಿಕೊಡುತ್ತದೆ.

ಒಂದು ಕೆಂಡದ ಬೆಟ್ಟ. ಕೆಂಡದ ಬೆಟ್ಟದ ಮೇಲೆ ಅರಗಿನ ಕಂಭ, ಅರಗಿನ ಕಂಭದ ಮೇಲೆ ಒಂದು ಹಂಸ. ಅರಗಿನ ಕಂಭ ಬೆಂದು ಹೋಯಿತು. ಅದರ ಮೇಲೆ ಕೂತಿದ್ದ ಹಂಸ ಹಾರಿಹೋಯಿತು.

ಈ ವಚನಕ್ಕೆ ಸಾಂಪ್ರದಾಯಿಕವಾಗಿ ಕೆಂಡದ ಗಿರಿ ಎಂದರೆ ಶಿವನೇ ನಾನು ಎಂಬ ಭಾವ, ಅರಗಿನ ಕಂಭ ಎಂದರೆ ಶರಣನ ಭಾವ, ಹಂಸೆ ಎಂದರೆ ಪರಮಹಂಸ ತತ್ವ ಇತ್ಯಾದಿಯಾಗಿ ವಿವರಿಸುವುದುಂಟು.

ಅದನ್ನೆಲ್ಲ ಬಿಟ್ಟರೂ ಈ ವಚನ ಸಾವನ್ನು ಕುರಿತು ಹೇಳುತ್ತಿದೆಯೋ ಅಥವಾ ಸಾವನ್ನು ವಿವರಿಸುವ ನೆಪದಲ್ಲಿ ಬದುಕಿನ ಚಿತ್ರಕೊಡುತ್ತಿದೆಯೋ ನೋಡಿ.

ಹಂಸವನ್ನು ಜೀವವೆಂದೋ ಆತ್ಮವೆಂದೋ ಒಪ್ಪಿಕೊಳ್ಳೋಣ, ದೇಹವೇ ಅರಗಿನ ಕಂಭ, ಇಡೀ ಬದುಕೇ ಕೆಂಡದ ಬೆಟ್ಟ, ಕೆಂಡದ ಬೆಟ್ಟವಾದ್ದರಿಂದ ಪಕ್ವವಾದರೂ, ಆಗದಿದ್ದರೂ; ಜ್ಞಾನಿಯಾದರೂ ಆಗದಿದ್ದರೂ, ಕಂಭ ಕರಗಿಹೋಗುವುದೇ ನಿಶ್ಚಯ. ಹಾಗೆ ದೇಹ ಕರಗಿದಮೇಲೆ ಜೀವ ಎಲ್ಲಿದ್ದೀತು, ಹಾರಿ ಹೋಯಿತು.

ಬದುಕಿನ ಸ್ಥಿತಿಯ, ದೇಹ ಇಲ್ಲವಾಗುವ ಅನಿವಾರ್ಯತೆಯ, ಸಾವಿನ ಅಪರಿಹಾರ್ಯ ಸ್ಥಿತಿಯ ಮಂಡನೆ ಇದು. ಮಾತಿನಲ್ಲಿ ನಾವು ಹೇಳುವಂತೆ `ಸಾವು ಬರುವುದು’ ಅಲ್ಲ, ಜೀವ `ಹೋಗುವುದು’ ಇಲ್ಲಿನ ಚಿತ್ರ. ಅದು ಉರಿದ ಕಂಬದ ಮೇಲಿನಿಂದ ಹಂಸೆ ಹಾರಿದಷ್ಟೇ ಸಹಜ, ಅನಿವಾರ್ಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದ್ರೌಪದಿ ಸ್ವಯಂವರ
Next post ಬದಲಾಗದವರು

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…