Home / ಲೇಖನ / ಇತರೆ / ವಚನ ವಿಚಾರ – ಸಾವು?

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು.
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ

ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲಿ ಮನೆಮಾಡಿಕೊಂಡ ವಚನ, ಅರ್ಥ ಏನೇ ಇರಲಿ, ಸ್ಪಟಿಕ ಸ್ಪಷ್ಟವಾದ ಚಿತ್ರವೊಂದನ್ನು ಇದು ಕಟ್ಟಿಕೊಡುತ್ತದೆ.

ಒಂದು ಕೆಂಡದ ಬೆಟ್ಟ. ಕೆಂಡದ ಬೆಟ್ಟದ ಮೇಲೆ ಅರಗಿನ ಕಂಭ, ಅರಗಿನ ಕಂಭದ ಮೇಲೆ ಒಂದು ಹಂಸ. ಅರಗಿನ ಕಂಭ ಬೆಂದು ಹೋಯಿತು. ಅದರ ಮೇಲೆ ಕೂತಿದ್ದ ಹಂಸ ಹಾರಿಹೋಯಿತು.

ಈ ವಚನಕ್ಕೆ ಸಾಂಪ್ರದಾಯಿಕವಾಗಿ ಕೆಂಡದ ಗಿರಿ ಎಂದರೆ ಶಿವನೇ ನಾನು ಎಂಬ ಭಾವ, ಅರಗಿನ ಕಂಭ ಎಂದರೆ ಶರಣನ ಭಾವ, ಹಂಸೆ ಎಂದರೆ ಪರಮಹಂಸ ತತ್ವ ಇತ್ಯಾದಿಯಾಗಿ ವಿವರಿಸುವುದುಂಟು.

ಅದನ್ನೆಲ್ಲ ಬಿಟ್ಟರೂ ಈ ವಚನ ಸಾವನ್ನು ಕುರಿತು ಹೇಳುತ್ತಿದೆಯೋ ಅಥವಾ ಸಾವನ್ನು ವಿವರಿಸುವ ನೆಪದಲ್ಲಿ ಬದುಕಿನ ಚಿತ್ರಕೊಡುತ್ತಿದೆಯೋ ನೋಡಿ.

ಹಂಸವನ್ನು ಜೀವವೆಂದೋ ಆತ್ಮವೆಂದೋ ಒಪ್ಪಿಕೊಳ್ಳೋಣ, ದೇಹವೇ ಅರಗಿನ ಕಂಭ, ಇಡೀ ಬದುಕೇ ಕೆಂಡದ ಬೆಟ್ಟ, ಕೆಂಡದ ಬೆಟ್ಟವಾದ್ದರಿಂದ ಪಕ್ವವಾದರೂ, ಆಗದಿದ್ದರೂ; ಜ್ಞಾನಿಯಾದರೂ ಆಗದಿದ್ದರೂ, ಕಂಭ ಕರಗಿಹೋಗುವುದೇ ನಿಶ್ಚಯ. ಹಾಗೆ ದೇಹ ಕರಗಿದಮೇಲೆ ಜೀವ ಎಲ್ಲಿದ್ದೀತು, ಹಾರಿ ಹೋಯಿತು.

ಬದುಕಿನ ಸ್ಥಿತಿಯ, ದೇಹ ಇಲ್ಲವಾಗುವ ಅನಿವಾರ್ಯತೆಯ, ಸಾವಿನ ಅಪರಿಹಾರ್ಯ ಸ್ಥಿತಿಯ ಮಂಡನೆ ಇದು. ಮಾತಿನಲ್ಲಿ ನಾವು ಹೇಳುವಂತೆ `ಸಾವು ಬರುವುದು’ ಅಲ್ಲ, ಜೀವ `ಹೋಗುವುದು’ ಇಲ್ಲಿನ ಚಿತ್ರ. ಅದು ಉರಿದ ಕಂಬದ ಮೇಲಿನಿಂದ ಹಂಸೆ ಹಾರಿದಷ್ಟೇ ಸಹಜ, ಅನಿವಾರ್ಯ!
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ