ವಚನ ವಿಚಾರ – ಯಾಕೆ ಇದನ್ನೆಲ್ಲ ಕಲಿಸಲಿಲ್ಲ?

ವಚನ ವಿಚಾರ – ಯಾಕೆ ಇದನ್ನೆಲ್ಲ ಕಲಿಸಲಿಲ್ಲ?

ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ
ಇದು ನಿನಗೆ ದಿಂಡೆಯತನವೊ
ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ

[ಗಾರುಡ-ಹಾವಿನ ವಿಷವನ್ನು ಇಲ್ಲವಾಗಿಸುವ ಗರುಡ ಮಂತ್ರ, ದಿಂಡೆ-ಬಂಡೆ, ಮರದ ಬೊಡ್ಡೆ, ರೂಕ್ಷತೆ, ತುಂಟತನ]

ಮೋಳಿಗೆ ಮಾರಯ್ಯನ ವಚನ. ಮನುಷ್ಯನನ್ನು ದೇವರೇ ಸೃಷ್ಟಿಮಾಡಿದ ಎಂದುಕೊಂಡರೆ ಅವನು ಏನೇನನ್ನೂ ಕಲಿಸದೆ ನಮ್ಮನ್ನೆಲ್ಲ ಸೃಷ್ಟಿಮಾಡಿ ಭೂಮಿಗೆ ಕಳುಹಿಸಿಬಿಟ್ಟಿದ್ದಾನೆ. ಕಚ್ಚಲು ಬರುವ ಹಾವನ್ನು ಪಳಗಿಸಲು ಗರುಡ ಮಂತ್ರ ಕಲಿಸಲಿಲ್ಲ, ತಿವಿಯಲು ಬರುವ ಹಸುವಿನ ಕೊಂಬು ಹಿಡಿದು ಬಗ್ಗಿಸಲು ಕಲಿಸಲಿಲ್ಲ. ಹೀಗೆ ಬದುಕಲು ಅಗತ್ಯವಾದ ವಿದ್ಯೆ ಕಲಿಸದೆ ಇದ್ದದ್ದು ದೇವರ ದಿಂಡಿಗತನವೋ? ದಿಣ್ಣೆ ಎಂಬ ಮಾತಿಗೆ ಬಂಡೆ, ಮರದ ಬೊಡ್ಡೆ ಅನ್ನುವ ಅರ್ಥಗಳಲ್ಲದೆ ರೂಕ್ಷತೆ, ತುಂಟತನ ಅನ್ನುವ ಅರ್ಥಗಳೂ ಇವೆ.

ಕೇಡಿನಿಂದ ಪಾರಾಗುವುದು, ಕೇಡನ್ನು ಪಳಗಿಸುವುದು ಇದೇ ನಾವು ಕಲಿಯಬೇಕಾದದ್ದು, ದೇವರು ನಮಗೆ ಕಲಿಸದೆ ಇರುವುದು! ದೇವರು ನಿರಂಗ, ಅಂಗವಿಲ್ಲದವನು. ಬಂಡೆಯಂತೆ ಇರುವವನು. ಅವನಿಗೆ ಒಳಿತು, ಕೆಡುಕು ಎರಡೂ ಇಲ್ಲ. ಕಲಿಸಬೇಕಾದುದನ್ನು ಕಲಿಸದೆ, ನೀವೇ ಕಲಿತುಕೊಳ್ಳಿ ಎಂದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ತುಂಟನಂತೆ ಸುಮ್ಮನೆ ಇದ್ದಾನೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸ್ತಿನಾಪುರಕ್ಕೆ ಬಂದ ಪಾಂಡವರು
Next post ಯೌವ್ವನ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys