ವಚನ ವಿಚಾರ – ಯಾರೂ ಇಲ್ಲವೆಂದು

ವಚನ ವಿಚಾರ – ಯಾರೂ ಇಲ್ಲವೆಂದು

ಆರೂ ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು

[ಆರೂ-ಯಾರೂ, ಆಳಿಗೊಳಲುಬೇಡ-ದುಃಖಗೊಳ್ಳಬೇಡ, ಆನಂಜುವಳಲ್ಲ-ನಾನು ಹೆದರುವವಳಲ್ಲ, ಆನಿಹೆನು-ನಾನಿರುವೆನು, ಸರಿ-ಕತ್ತಿಯ ಅಲಗು, ಕರ ಕೇಡು-ಅತಿಯಾದ ಕಷ್ಟ]

ಅಕ್ಕ ಮಹಾದೇವಿಯ ವಚನ. ಈ ವಚನವನ್ನು ಯಾರಿಗೆ ಹೇಳುತ್ತಿರಬಹುದು? ತನಗೆ ತಾನೇ, ಅಥವಾ ತನ್ನನ್ನು ಪರೀಕ್ಷಿಸಲು ಬಯಸಿದ ಮತ್ತೊಬ್ಬರಿಗೆ, ಅಥವ ಚನ್ನಮಲ್ಲಿಕಾರ್ಜುನನಿಗೇ ಹೇಳುತ್ತಿದ್ದಾಳೆಯೋ ಏನೋ. ಮೂರನೆಯ ಸಾಧ್ಯತೆ ಸೂಕ್ತವೆನಿಸುತ್ತದೆ.

ನನಗೆ ಯಾರೂ ಇಲ್ಲ, ಅನಾಥಳು ಎಂದು ನಿರ್ಲಕ್ಷ್ಯ ಮಾಡಬೇಡ, ನಾನು ತರಗೆಲೆಗಳನ್ನು ತಿಂದುಕೊಂಡಿದ್ದೇನೆ. (ಮರದ ಎಲೆಗಳನ್ನೇ ತಿಂದುಕೊಂಡು ತಪಸ್ಸು ಮಾಡುವ ಕ್ರಮವೂ ಇತ್ತೆಂದು ತೋರುತ್ತದೆ. ಗಿರಿಜೆಯು ಶಿವನ ಕುರಿತು ತಪಸ್ಸು ಮಾಡಿದಾಗ ಕೆಲವು ಕಾಲ ಎಲೆಗಳನ್ನೇ ತಿಂದು ಇದ್ದಳೆಂಬ ಕಥೆ ಇದೆ). ಚೂಪಾದ ಕತ್ತಿಯ ಮೇಲೆ ಒರಗಿದ್ದೇನೆ. ಚನ್ನಮಲ್ಲಿಕಾರ್ಜುನನನ್ನು ಬಯಸಿ ನನಗೆ ನಾನೇ ಹೀಗೆ ದಂಡನೆ ಕೊಟ್ಟುಕೊಳ್ಳುತ್ತಿರುವಾಗ ಇನ್ನೇನು ಆಗಲು ಸಾಧ್ಯ. ಚನ್ನಮಲ್ಲಿಕಾರ್ಜುನ ಇನ್ನೂ ಅತಿ ಕೆಡುಕನ್ನೇನಾದರೂ ಒಡ್ಡಿದರೆ ದೇಹ, ಪ್ರಾಣ ಎರಡನ್ನೂ ಅವನಿಗೇ ಅರ್ಪಿಸಿಬಿಡುತ್ತೇನೆ.

ನನಗೆ ಇರುವುದು ಚೆನ್ನಮಲ್ಲಿಕಾರ್ಜುನ ಮಾತ್ರ ಅವನೇ ನನನ್ನು ಯಾರೂ ಇಲ್ಲವೆಂದು ನಿರ್ಲಕ್ಷ್ಯ ಮಾಡಿದರೆ ಅದೇ ಪರಮ ಕೇಡು. ಹಾಗೆ ಮಾಡಿಯಾನೇ ಎಂಬ ಆತಂಕದ ದನಿಯೂ ಇಲ್ಲಿ ಕೇಳುವುದೇ? ಹಾಗಾಗುವುದಾದರೆ ಪ್ರಾಣ, ದೇಹ ಎರಡೂ ಅವನಿಗೇ ಅರ್ಪಣೆಯಾಗಲಿ ಅನ್ನುವಾಗ ಹತಾಶೆ ಇದೆಯೋ, ಗಟ್ಟಿ ಮನಸ್ಸು ಇದೆಯೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀಳ್ದ ಕುಸುಮ
Next post ನಿಗೂಢ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…