ಮನಸ್ಸು-ಕಡಲು

ಹುಟ್ಟು ಎಲ್ಲೊ ಹರಿವುದೆಲ್ಲೂ
ಸೇರುವುದೊಂದೆ ಕಡಲಿಗೆ
ನೀರು ಯಾವ ನದಿಯದಾದರೇನು
ಕಡಲ ಒಡಲಿಗಿಲ್ಲ ಭೇದಭಾವ
ಹರಿದು ಬಂದುದೆಲ್ಲ ಸ್ವಾಹಾ!

ಹುಟ್ಟುವಾಗ ಎಲ್ಲರೊಂದೆ
ಬೆಳೆಯುವಾಗ ಹಲವು ಜಾತಿ ಹಲವು ಮತ
ಸತ್ತ ಮೇಲೆ ಒಂದೇ ಕಾಟ
ನಡುವೆ ಏಕೆ ಅಂತಃಕಲಹ?

ದೇವರಿಗಿಲ್ಲ ಮೇಲು ಕೀಳು
ಯಮನಿಗಿಲ್ಲ ಭೇದಭಾವ
ಕಾಮನಿಗಿಲ್ಲ ಜಾತಿ ಮತ
ಮನುಜಗೇಕೆ ಕುಲದ ಹಲುಬು
ಸಣ್ಣ ದೃಷ್ಟಿ ಭೇದಭಾವ ಸೃಷ್ಟಿ?

ಮನಸ್ಸು ಕಡಲು ಆದರೆ
ಎಲ್ಲ ಅಲೆಯು ಬೆರೆಯುವಂತೆ
ಮನುಜರೆಲ್ಲ ಬೆರೆತರೆ
ನಾವು ನೀವು ಅವರು ಇವರು ಎಲ್ಲರೊಂದೆ
ಎಲ್ಲರದ್ದೂ ಮನುಜ ಕುಲವು
ಮಾನವೀಯ ಧರ್ಮವು.
ಉಳಿವುದೊಂದೆ ವಿಶ್ವಪಥವು
ಕಡಲು ಮೆರೆವ ತಾದಾತ್ಮ್ಯ ಭಾವವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
Next post ನೆರೆ ಹೊರೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys