ಮನಸ್ಸು-ಕಡಲು

ಹುಟ್ಟು ಎಲ್ಲೊ ಹರಿವುದೆಲ್ಲೂ
ಸೇರುವುದೊಂದೆ ಕಡಲಿಗೆ
ನೀರು ಯಾವ ನದಿಯದಾದರೇನು
ಕಡಲ ಒಡಲಿಗಿಲ್ಲ ಭೇದಭಾವ
ಹರಿದು ಬಂದುದೆಲ್ಲ ಸ್ವಾಹಾ!

ಹುಟ್ಟುವಾಗ ಎಲ್ಲರೊಂದೆ
ಬೆಳೆಯುವಾಗ ಹಲವು ಜಾತಿ ಹಲವು ಮತ
ಸತ್ತ ಮೇಲೆ ಒಂದೇ ಕಾಟ
ನಡುವೆ ಏಕೆ ಅಂತಃಕಲಹ?

ದೇವರಿಗಿಲ್ಲ ಮೇಲು ಕೀಳು
ಯಮನಿಗಿಲ್ಲ ಭೇದಭಾವ
ಕಾಮನಿಗಿಲ್ಲ ಜಾತಿ ಮತ
ಮನುಜಗೇಕೆ ಕುಲದ ಹಲುಬು
ಸಣ್ಣ ದೃಷ್ಟಿ ಭೇದಭಾವ ಸೃಷ್ಟಿ?

ಮನಸ್ಸು ಕಡಲು ಆದರೆ
ಎಲ್ಲ ಅಲೆಯು ಬೆರೆಯುವಂತೆ
ಮನುಜರೆಲ್ಲ ಬೆರೆತರೆ
ನಾವು ನೀವು ಅವರು ಇವರು ಎಲ್ಲರೊಂದೆ
ಎಲ್ಲರದ್ದೂ ಮನುಜ ಕುಲವು
ಮಾನವೀಯ ಧರ್ಮವು.
ಉಳಿವುದೊಂದೆ ವಿಶ್ವಪಥವು
ಕಡಲು ಮೆರೆವ ತಾದಾತ್ಮ್ಯ ಭಾವವು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
Next post ನೆರೆ ಹೊರೆ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…