ಯೌವ್ವನದ ಹಾಡು

ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ
ಚೈತನ್ಯಧಾರೆಯಾಗಿ ಮರಳಿ ಬಾ
ಮುಪ್ಪಾದ ಈ ಜೀವ
ಉರುಳಿ ಹೋಗುವ ಮುನ್ನ
ಜೀವನದಿಯಾಗಿ ಹರಿದು ಬಾ.
ಕಾಲಚಕ್ರದ ಗಾಲಿ
ಹಿಂದಕ್ಕೆ ತಿರುಗಲಿ
ಗತಜೀವನದ ಕಥೆಯ
ಪುಟಗಳು ತೆರೆಯಲಿ
ಹಿಂದೆ ಕೇಳಿದ ಹಾಡು
ಮತ್ತೊಮ್ಮೆ ಧ್ವನಿಸಲಿ
ಅಳಿದು ಹೋದವರೆಲ್ಲಾ
ಜೀವ ತಳೆದು ನಿಲ್ಲಲಿ||
ಒಂದೊಂದು ಕ್ಷಣವನ್ನು
ಆನಂದದೆ ಕಳೆಯುವೆನು
ಪ್ರೀತಿ ಸ್ನೇಹದ ಸುಧೆಯ
ಸಮನಾಗಿ ಉಣಿಸುವೆನು
ಮೋಹ ಸ್ವಾರ್ಥವ ಬಿಟ್ಟು
ಸಂತನಂತೆ ದುಡಿಯುವೆನು
ವಿಶ್ವಮಾನವ ಜ್ಯೋತಿ
ಎಲ್ಲರೆದೆಗೆ ಹಚ್ಚುವೆನು.
ತಪ್ಪುಗಳ ಅರ್ಥೈಸಿ
ಒಪ್ಪಾಗಿ ನಡೆಯುವೆನು
ಅರಿಷಡ್ವರ್ಗಗಳ ಮೆಟ್ಟಿ
ನಾ ನಿಲ್ಲುವೆನು.
ಹರಿಹರರು ಮೆಚ್ಚುವಂತೆ
ಹಸನಾಗಿ ಬಾಳುವೆನು
ಸಾರ್ಥಕ ಜೀವನ ನಡೆಸಿ
ಧನ್ಯ ಧನ್ಯನಾಗುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಒಲಿದವರನ್ನು ಕೊಲ್ಲುವುದಕ್ಕೆ
Next post ವಿಧವೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys