ಯೌವ್ವನದ ಹಾಡು

ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ
ಚೈತನ್ಯಧಾರೆಯಾಗಿ ಮರಳಿ ಬಾ
ಮುಪ್ಪಾದ ಈ ಜೀವ
ಉರುಳಿ ಹೋಗುವ ಮುನ್ನ
ಜೀವನದಿಯಾಗಿ ಹರಿದು ಬಾ.
ಕಾಲಚಕ್ರದ ಗಾಲಿ
ಹಿಂದಕ್ಕೆ ತಿರುಗಲಿ
ಗತಜೀವನದ ಕಥೆಯ
ಪುಟಗಳು ತೆರೆಯಲಿ
ಹಿಂದೆ ಕೇಳಿದ ಹಾಡು
ಮತ್ತೊಮ್ಮೆ ಧ್ವನಿಸಲಿ
ಅಳಿದು ಹೋದವರೆಲ್ಲಾ
ಜೀವ ತಳೆದು ನಿಲ್ಲಲಿ||
ಒಂದೊಂದು ಕ್ಷಣವನ್ನು
ಆನಂದದೆ ಕಳೆಯುವೆನು
ಪ್ರೀತಿ ಸ್ನೇಹದ ಸುಧೆಯ
ಸಮನಾಗಿ ಉಣಿಸುವೆನು
ಮೋಹ ಸ್ವಾರ್ಥವ ಬಿಟ್ಟು
ಸಂತನಂತೆ ದುಡಿಯುವೆನು
ವಿಶ್ವಮಾನವ ಜ್ಯೋತಿ
ಎಲ್ಲರೆದೆಗೆ ಹಚ್ಚುವೆನು.
ತಪ್ಪುಗಳ ಅರ್ಥೈಸಿ
ಒಪ್ಪಾಗಿ ನಡೆಯುವೆನು
ಅರಿಷಡ್ವರ್ಗಗಳ ಮೆಟ್ಟಿ
ನಾ ನಿಲ್ಲುವೆನು.
ಹರಿಹರರು ಮೆಚ್ಚುವಂತೆ
ಹಸನಾಗಿ ಬಾಳುವೆನು
ಸಾರ್ಥಕ ಜೀವನ ನಡೆಸಿ
ಧನ್ಯ ಧನ್ಯನಾಗುವೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಒಲಿದವರನ್ನು ಕೊಲ್ಲುವುದಕ್ಕೆ
Next post ವಿಧವೆ

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…