Home / ಕವನ / ಕವಿತೆ / ನಂದಾದೀಪ

ನಂದಾದೀಪ

ಹರಿದ ಸೀರೆಯಲಿ ನೂರೆಂಟು
ತೇಪೆಯ ಚಿತ್ತಾರ
ಅರಿಶಿನದ ಓಕುಳಿ ಕೆನ್ನೆಗೆ
ಹಣೆಯಲಿ ಕಾಸಿನಗಲದ
ಕುಂಕುಮದ ಸಿಂಗಾರ
ಮುಡಿಯಲ್ಲಿ ಮಾಸದ ಹೂವಿನ ದಂಡೆ
ಮುಗ್ಧ ಮಗುವಿನ ಮೊಗ
ಅಲ್ಲಿ ನಗುವೆಂಬ ನಗ
ಕಂಗಳಲ್ಲಿ ಬತ್ತದ ವಾತ್ಸಲ್ಯದ ಒರತೆ
ಆಧುನಿಕ ಗಂಧಗಾಳಿಯ ಕೊರತೆ
ಕಡಲಿಗೂ ಸಮನಾಗದ
ಮಮತೆಯ ಬಿಂದು
ಆಗಸದ ಪಾತ್ರಕ್ಕೂ ಹಿರಿದು
ಕಾರುಣ್ಯಸಿಂಧು
ಮಾತಿನಲಿ ಕುಗ್ಗದ ಅಗಾಧ ಪ್ರೀತಿ
ಮರುಳಾಗಿಸಿ ಮಣಿಸುವ ಮಾಂತ್ರಿಕ ಶಕ್ತಿ
ಮುಚ್ಚುಮರೆಯಿಲ್ಲದ ಬಿಚ್ಚುನುಡಿ
ಕಪಟ ಮೋಸವರಿಯದ ಶುದ್ಧ ಕನ್ನಡಿ
ಗಂಧದ ಮರ ಬೇಕಿಲ್ಲ ಉಪಮೆಗೆ
ಕರ್ಪೂರದಾರತಿ ಕಾಂತಿ ಕಂಗಳೊಳಗೆ
ನಿನ್ನೆ ನಾಳೆಗಳ ಚಿಂತೆ ತೊರೆದು
ಬೇಕು ಬೇಡಗಳ ಪಟ್ಟಿ ಕಿತ್ತೆಸೆದು
ಉರಿವ ಒಲೆಯೊಳಗೆ ಕನಸು,
ಕಲ್ಪನೆಗಳ ಸುಟ್ಟ ಬೂದಿ.
ವಾಸ್ತವತೆಯ ಪರಿಧಿಯಲ್ಲಿ
ಗರಗರ ತಿರುಗುವ ಗಾಣದೆತ್ತು
ಅಪ್ಪ ಹಾಕಿದ ಲಕ್ಷ್ಮಣ ರೇಖೆ
ಮೀರಿ ದಾಟಿದ ಭಯಭಕ್ತಿ
ತುತ್ತು ಅನ್ನ ಹಿಡಿಯಷ್ಟು ಪ್ರೀತಿ
ಪಂಚಾಮೃತವೆನ್ನುವ ಪರಮ ತೃಪ್ತಿ
ನೂರು ದೇವರ ನಿವಾಳಿಸಿ
ಒಗೆಯಬೇಕಿವಳ ಮುಂದೆ
ಕರುಳು ಬತ್ತಿಯ ನೇದು
ನೆತ್ತರ ತೈಲವನೆರೆದು
ಒಡಲ ಕುಡಿಗಳ ಬೆಳಗುವ
ನಿತ್ಯ ಉರಿಯುವ ನಂದಾದೀಪ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...