Home / ಲೇಖನ / ಇತರೆ / ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ

ವಚನ ವಿಚಾರ – ಹಸಿವು, ಸುಳ್ಳು, ಅನಿವಾರ್ಯ

ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ
ರಾಮನಾಥ

ಜೇಡರ ದಾಸಿಮಯ್ಯನ ವಚನ. ಕಳಬೇಡ, ಕೊಲಬೇಡ ಎಂದಿತ್ಯಾದಿಯಾಗಿ ಬಸವಣ್ಣ ಹೇಳಿದ್ದಕ್ಕೆ ಪ್ರತಿಯಾದ ಸವಾಲಿನಂತಿದೆ ಈ ಮಾತು. ದೇಹ ಇರುವವರೆಗೆ ಹಸಿವು ಇರುತ್ತದೆ, ಹಸಿವು ಇರುವವರೆಗೆ ಸುಳ್ಳೂ ಇರುತ್ತದೆ. ದೇಹ ಇರುವ ಮನುಷ್ಯ ಹಸಿಯದೆ, ಸುಳ್ಳು ಹೇಳದೆ ಇರಲಾರ. ಸುಮ್ಮನೆ ಒಣ ನೀತಿಯನ್ನು ದೇವರೇ ಹೇಳಿದರೂ ಅದನ್ನು ಒಪ್ಪಲಾರೆ.

ದೇವರೇ, ನೀನು ನನ್ನ ಹಾಗೆ ಒಮ್ಮೆ ದೇಹಧಾರಿಯಾಗಿ ನೋಡು, ಸುಳ್ಳು ಹೇಳದೆ, ಹಸಿವು ಅನುಭವಿಸದೆ ಇರುವುದಕ್ಕೆ ಸಾಧ್ಯವೇ ಎಂದು-ಇದು ಭಕ್ತನ ಸವಾಲು. ಇದು ಸವಾಲೋ, ಸಮರ್ಥನೆಯೋ? ನಾವು ಹೇಳುವ ಸುಳ್ಳುಗಳಿಗೆ ಸಮರ್ಥನೆ ಎಂದು ಈ ವಚನವನ್ನು ನೋಡಬೇಕಾಗಿಲ್ಲ. ಹಸಿವು, ಸುಳ್ಳುಗಳು ಮನುಷ್ಯನಿಗೆ ಅನಿವಾರ್ಯವಾಗುವ ಸ್ಥಿತಿ ಬಂದಿದೆಯಲ್ಲಾ ಅನ್ನುವ ನೋವು ಕಾಣಿಸುತ್ತದೆ. ಹಸಿವನ್ನು, ಸುಳ್ಳನ್ನು ಟೀಕಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮುಖ್ಯ. ಅರ್ಥಮಾಡಿಕೊಂಡರೆ ನಿಜವಾದ ದೇವರಾಗಬಹುದು ಅನ್ನುವ ದೃಷ್ಟಿ ಕಾಣುತ್ತದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...