ಸಂಕ್ರಮಣ ಕಾಲ

ಬದಲಾಗಿದೆ ಕಾಲ
ಸೂಕ್ಷ್ಮಾತಿಸೂಕ್ಷ್ಮ
ಸಂಕ್ರಮಣ ಕಾಲ
ಅಡಿಯಿಡುವ ಮುನ್ನ
ನುಡಿ ಜಾರುವ ಮುನ್ನ
ಎಚ್ಚರವಿರಲಿ
ಹೂವೇ ಹಾವಾಗಿ
ಪ್ರಕೃತಿ ವಿಕೃತಿಯಾಗಿ
ಅಮೃತವೇ ವಿಷವಾಗಿ
ಜೀವ ತೆಗೆಯಬಹುದು
ಎಚ್ಚರವಿರಲಿ
ಮಾತು ಮುತ್ತಾಗದೇ
ಮೃತ್ಯುವಾಗಿ
ನಗುವ ಬೆಳದಿಂಗಳು
ಕ್ಷಣದಲ್ಲಿ ಕಪ್ಪಾಗಿ
ಮೇಲೆರಗಬಹುದು
ಎಚ್ಚರವಿರಲಿ
ಬೆಳ್ಳಗಿರುವುದು ಹಾಲಲ್ಲ
ಹೊಳೆಯುವುದು ಚಿನ್ನವಲ್ಲ
ಸಣ್ಣ ತೂತಲಿ ಹಿರಿದು ಹಿಂಜಿ
ತೇಪೆಯಾಗಬಹುದು
ಸಣ್ಣ ಗಾಯ ರಣರಂಪಾಗಿ
ಕಾಲು ಕತ್ತರಿಸಬಹುದು
ಎಚ್ಚರವಿರಲಿ.
ಬದಲಾಗಿದೆ ಕಾಲ
ಬದುಕಿನ ಜಾಲ
ಎಚ್ಚರವಿರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಆಸೆ ರೋಷ
Next post ಗಗನದಂಗಳ ಹಾರು ಹಕ್ಕಿಯೆ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

cheap jordans|wholesale air max|wholesale jordans|wholesale jewelry|wholesale jerseys