ಸಂಕ್ರಮಣ ಕಾಲ

ಬದಲಾಗಿದೆ ಕಾಲ
ಸೂಕ್ಷ್ಮಾತಿಸೂಕ್ಷ್ಮ
ಸಂಕ್ರಮಣ ಕಾಲ
ಅಡಿಯಿಡುವ ಮುನ್ನ
ನುಡಿ ಜಾರುವ ಮುನ್ನ
ಎಚ್ಚರವಿರಲಿ
ಹೂವೇ ಹಾವಾಗಿ
ಪ್ರಕೃತಿ ವಿಕೃತಿಯಾಗಿ
ಅಮೃತವೇ ವಿಷವಾಗಿ
ಜೀವ ತೆಗೆಯಬಹುದು
ಎಚ್ಚರವಿರಲಿ
ಮಾತು ಮುತ್ತಾಗದೇ
ಮೃತ್ಯುವಾಗಿ
ನಗುವ ಬೆಳದಿಂಗಳು
ಕ್ಷಣದಲ್ಲಿ ಕಪ್ಪಾಗಿ
ಮೇಲೆರಗಬಹುದು
ಎಚ್ಚರವಿರಲಿ
ಬೆಳ್ಳಗಿರುವುದು ಹಾಲಲ್ಲ
ಹೊಳೆಯುವುದು ಚಿನ್ನವಲ್ಲ
ಸಣ್ಣ ತೂತಲಿ ಹಿರಿದು ಹಿಂಜಿ
ತೇಪೆಯಾಗಬಹುದು
ಸಣ್ಣ ಗಾಯ ರಣರಂಪಾಗಿ
ಕಾಲು ಕತ್ತರಿಸಬಹುದು
ಎಚ್ಚರವಿರಲಿ.
ಬದಲಾಗಿದೆ ಕಾಲ
ಬದುಕಿನ ಜಾಲ
ಎಚ್ಚರವಿರಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಆಸೆ ರೋಷ
Next post ಗಗನದಂಗಳ ಹಾರು ಹಕ್ಕಿಯೆ

ಸಣ್ಣ ಕತೆ

  • ತಿಮ್ಮರಯಪ್ಪನ ಕಥೆ

    ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…