ಅಲ್ಲಮ

ಕವಿ ಸಮಯವಲ್ಲ ಮಟ ಮಟ ಮಧ್ಯಾಹ್ನ
ಬೇವಿನ ಮರದ ಬೊಡ್ಡೆಗೆ ಒರಗಿದ ಅವ್ವನ
ಎದೆಯು ತುಂಬಿದ ಗಾಳಿ ಸಳಸಳ
ಒಳ ಸರಿದು, ಎದೆಯ ಭಾರವ ಇಳಿಸಿ
ಕಾಯ ಜೀವದ ನೋವ ತಣಿಸಿತು ಮತ್ತೆ
ಗಿಡದಲ್ಲಿಯ ಪುಟ್ಟ ಹಕ್ಕಿ ಹಾಡಿತು.

ಕವಿ ಸಮಯವಲ್ಲ ಬಯಲ ತುಂಬ ನಿಶ್ಯಬ್ದ
ಎಲೆ ಎಲೆಗಳು ಹರಿದಾಡಿದ ರಿಂಗಣದ ಸದ್ದು.
ಅರಿವಾಗದೇ ಅರಿವ ಹರಿವು ಹರಿದು ಮೌನ,
ಬೆಳಕಿನಲಿ ಮಾತಾಗಿದೆ. ಅಡೆತಡೆಯಿಲ್ಲದ ಧ್ಯಾನ
ತೋಪಿನ ಮರಗಳಿಗೆ ಸೋಕಿ ಒಳ ಹೊರಗೂ
ನೆರಳು, ಬುಡದ ಮಣ್ಣಿನ ನರಳಿಕೆ ಮರಕೆ.

ಕವಿ ಸಮಯವಲ್ಲ ಸಂಚರಿಸುವ ಪಾದಗಳ
ಗುರುತುಗಳು, ಬೆವರ ಹನಿಗಳ ಹೊತ್ತು ಸಾಗಿದ
ದಾರಿಗಳು, ಗಂಧ ರುಚಿಗಳ ಹೂಗಳು ಅರಳಿದ
ಸುವಾಸನೆ, ಚಿಗುರು ಚಿಮ್ಮಿದ ಹಸಿರ ನಾದಕೆ,
ಪುಲಕಗೊಂಡ ಸಕಲ ಭೋಗ ಭಾಗ್ಯಗಳ ಬಯಲು,
ಹೌದು ಅಲ್ಲಗಳು ನೆರಳಾಟ ನಡೆಸಿದ ಎರಡರಿಂದ
ಕಂಗೆಟ್ಟ ಕವಿ ಕಂಪಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುವುವಂದದಾರೂಪ
Next post ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…