ಅಲ್ಲಮ

ಕವಿ ಸಮಯವಲ್ಲ ಮಟ ಮಟ ಮಧ್ಯಾಹ್ನ
ಬೇವಿನ ಮರದ ಬೊಡ್ಡೆಗೆ ಒರಗಿದ ಅವ್ವನ
ಎದೆಯು ತುಂಬಿದ ಗಾಳಿ ಸಳಸಳ
ಒಳ ಸರಿದು, ಎದೆಯ ಭಾರವ ಇಳಿಸಿ
ಕಾಯ ಜೀವದ ನೋವ ತಣಿಸಿತು ಮತ್ತೆ
ಗಿಡದಲ್ಲಿಯ ಪುಟ್ಟ ಹಕ್ಕಿ ಹಾಡಿತು.

ಕವಿ ಸಮಯವಲ್ಲ ಬಯಲ ತುಂಬ ನಿಶ್ಯಬ್ದ
ಎಲೆ ಎಲೆಗಳು ಹರಿದಾಡಿದ ರಿಂಗಣದ ಸದ್ದು.
ಅರಿವಾಗದೇ ಅರಿವ ಹರಿವು ಹರಿದು ಮೌನ,
ಬೆಳಕಿನಲಿ ಮಾತಾಗಿದೆ. ಅಡೆತಡೆಯಿಲ್ಲದ ಧ್ಯಾನ
ತೋಪಿನ ಮರಗಳಿಗೆ ಸೋಕಿ ಒಳ ಹೊರಗೂ
ನೆರಳು, ಬುಡದ ಮಣ್ಣಿನ ನರಳಿಕೆ ಮರಕೆ.

ಕವಿ ಸಮಯವಲ್ಲ ಸಂಚರಿಸುವ ಪಾದಗಳ
ಗುರುತುಗಳು, ಬೆವರ ಹನಿಗಳ ಹೊತ್ತು ಸಾಗಿದ
ದಾರಿಗಳು, ಗಂಧ ರುಚಿಗಳ ಹೂಗಳು ಅರಳಿದ
ಸುವಾಸನೆ, ಚಿಗುರು ಚಿಮ್ಮಿದ ಹಸಿರ ನಾದಕೆ,
ಪುಲಕಗೊಂಡ ಸಕಲ ಭೋಗ ಭಾಗ್ಯಗಳ ಬಯಲು,
ಹೌದು ಅಲ್ಲಗಳು ನೆರಳಾಟ ನಡೆಸಿದ ಎರಡರಿಂದ
ಕಂಗೆಟ್ಟ ಕವಿ ಕಂಪಿಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇರುವುವಂದದಾರೂಪ
Next post ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

cheap jordans|wholesale air max|wholesale jordans|wholesale jewelry|wholesale jerseys