ಮನೆ

ಭಾವ ಚಿತ್ರಗಳನ್ನು ಹೊತ್ತ ಗೋಡೆ
ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ.
ಗೋಡೆಗಳು ಕಿಟಕಿಗಳು, ಬಾಗಿಲುಗಳು
ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ
ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು
ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ.

ಬಚ್ಚಲ ಮನೆಯಲ್ಲಿ ತೊಟ್ಟಿಕ್ಕುವ ನಲ್ಲಿಯ ಹನಿ
ಒಳಗಿನ ಎಲ್ಲಾ ಬಿಕ್ಕುಗಳ ಪ್ರತಿಬಿಂಬಿಸಿ, ಎಲ್ಲಾ
ಗೊಂದಲು ಗೋಜಲುಗಳ ಗಡಿಯಾರ ಮಾತ್ರ
ನಿರ್ದಿಷ್ಟ ಜಾಗದಲ್ಲಿ ಒಂದಾಗತ್ತದೆ.
ತೆರೆದ ಮುಚ್ಚಿದ ಬಾಗಿಲುಗಳಿಂದ ಗಾಳಿ ಬೆಳಕು
ಏನನ್ನಾದರೂ ಕಸಿಕಿದು ತಂದು ಗುಡ್ಡೆ ಹಾಕುತ್ತದೆ.

ಗಿಡದಲ್ಲಿ ಹಾರಾಡುವ ದುಂಬಿ ಒಮ್ಮೊಮ್ಮೆ
ಒಳತೋಟಿಯೊಳಗೆ ಇಳಿದಾಗ ಹೂ ಕಂಪನ,
ಧೀರ್ಘ ಮನಸ್ಸಿನ ಕಂಪ, ಗಾಢ ಶಾಂತಿಯನು ಕಲುಕಿ,
ಒಳ ಹೊರಗೆ ಭಂಗಗೊಳಿಸಿ ಮನೆಯ ಮೌನ
ಬಹಳ ಧೀರ್ಘ, ಮಾತುಗಳಿಲ್ಲದ, ನೋಡದ
ಮುಖಗಳು ಚಹಾದ ವಾಸನೆಯಲಿ ಕರಗುತ್ತವೆ.

ಎಲ್ಲರೂ ದೂರದೂರ, ಯಾರೂ ಬರದ ಬಯಲು
ದಾರಿ, ಶುಭಾಶಯಗಳಿಲ್ಲದ ಬೆಳಗು, ಹುಡುಕಿ
ಹೋಗದ ಊರು, ಮುಚ್ಚಿದ ಬಾಗಿಲು, ಕೌನೆರಳಿನ
ಸಂಜೆ, ನಿರ್ಜೀವ ಕುರ್ಚಿಗಳು, ಕಡಿದುಕೊಂಡ
ಬಂಧ, ಯಾರೂ ಇಲ್ಲದೇ ಬರೀ ನಾಯಿ ಒಂದೇ,
ಒಡೆಯನಿಲ್ಲದ ದೊಡ್ಡ ಮನೆ ಕಾಯುತ್ತಿದೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...