ದುರಂತ

ಹೂವು ಅರಳಿದ ಮರದ ಕೆಳಗೆ
ಕುಳಿತ ಅವಳು ಕನಸಿನ ಅರಮನೆಯ
ರಾಜಕುಮಾರಿಯಂತೆ ಮಗಳ ತಬ್ಬಿ
ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ
ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ.

ನೆರಳ ನೆನಪುಗಳಲಿ ತಣ್ಣ ಮಣ್ಣಲಿ
ಸಡಗರದಲ್ಲಿ ಬೆಳಕು ಅರಳುತಿರಲು
ಯಾವುದೋ ನಿಶಾನೆಯ ಕಪ್ಪು ಮೋಡ ತೇಲಿ
ಮೈಯುಬ್ಬಿ ನಾಲ್ಕು ನಿಟ್ಟಿನ ಎಲ್ಲೆ ಕಟ್ಟು ಹರಿದು
ಬಯಕೆಗಳ ಮಂಗನಾಟ ಸಾರಿದೆ ಪಯಣ
ಏಕಾಂತದಲಿ.

ಹೊಲದುದ್ದಕ್ಕೂ ಹರಿದಾಡಿತ್ತು ನೇಗಿಲು ಮೊನೆ
ಬಸಿರೆಲ್ಲ ಬರಿದು ಬಸಿದು ಹೊರಚೆಲ್ಲಿತ್ತು ಜೀವದ ಸೊನೆ,
ಬೆದೆಯ ಕಾವಿಗೆ ಸಿಕ್ಕ ಹೂವಿನ ಒಡಲು ತುಂಬ
ನಾಗಸಂಪಿಗೆಯ ಕಾವು, ಒಂದು ಘಳಿಗೆಯಲಿ
ಅರಿವಿಲ್ಲದೆ ಪರಿವಿಲ್ಲದೇ ಜೀವ ಝಲ್ಲನೆ ಬೆತ್ತಲೆ
ಆ ಹೊತ್ತಿನಲಿ.

ಕೊಬ್ಬೇರಿದ ಮಬ್ಬಿನಲಿ, ಅಂಗಾಂಗದ ಗೂಳಿ ಮರದಲೋಕದ
ಹೊಸದಾದ ಕಂಪು ಮೆದ್ದವನಂತೆ ಕೆಂಗಣ್ಣು ಹಾಲನುಂಡ
ಹಸುಳೆ ಕದಡಿ, ಹೆಣದ ವಾಸನೆ ಕಾಮೀನ್ಮಕ ಆಹಾ ಯೋನಿ
ಚಕಿತಾ ಹದಗೇರಿದ ಪ್ರಾಣ ತೊಡೆಕಣಿವೆಯ ತಗ್ಗಿನಲಿ ನೆತ್ತರು,
ತುಂಬಿ ಇಡೀ ಹೊಲದಲ್ಲಿ ಬಾಲೆಯ ಅಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನನಿ
Next post ಶಂತನು ಸತ್ಯವತಿಯರ ಪ್ರೇಮ ಪ್ರಸಂಗ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…