ದುರಂತ

ಹೂವು ಅರಳಿದ ಮರದ ಕೆಳಗೆ
ಕುಳಿತ ಅವಳು ಕನಸಿನ ಅರಮನೆಯ
ರಾಜಕುಮಾರಿಯಂತೆ ಮಗಳ ತಬ್ಬಿ
ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ
ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ.

ನೆರಳ ನೆನಪುಗಳಲಿ ತಣ್ಣ ಮಣ್ಣಲಿ
ಸಡಗರದಲ್ಲಿ ಬೆಳಕು ಅರಳುತಿರಲು
ಯಾವುದೋ ನಿಶಾನೆಯ ಕಪ್ಪು ಮೋಡ ತೇಲಿ
ಮೈಯುಬ್ಬಿ ನಾಲ್ಕು ನಿಟ್ಟಿನ ಎಲ್ಲೆ ಕಟ್ಟು ಹರಿದು
ಬಯಕೆಗಳ ಮಂಗನಾಟ ಸಾರಿದೆ ಪಯಣ
ಏಕಾಂತದಲಿ.

ಹೊಲದುದ್ದಕ್ಕೂ ಹರಿದಾಡಿತ್ತು ನೇಗಿಲು ಮೊನೆ
ಬಸಿರೆಲ್ಲ ಬರಿದು ಬಸಿದು ಹೊರಚೆಲ್ಲಿತ್ತು ಜೀವದ ಸೊನೆ,
ಬೆದೆಯ ಕಾವಿಗೆ ಸಿಕ್ಕ ಹೂವಿನ ಒಡಲು ತುಂಬ
ನಾಗಸಂಪಿಗೆಯ ಕಾವು, ಒಂದು ಘಳಿಗೆಯಲಿ
ಅರಿವಿಲ್ಲದೆ ಪರಿವಿಲ್ಲದೇ ಜೀವ ಝಲ್ಲನೆ ಬೆತ್ತಲೆ
ಆ ಹೊತ್ತಿನಲಿ.

ಕೊಬ್ಬೇರಿದ ಮಬ್ಬಿನಲಿ, ಅಂಗಾಂಗದ ಗೂಳಿ ಮರದಲೋಕದ
ಹೊಸದಾದ ಕಂಪು ಮೆದ್ದವನಂತೆ ಕೆಂಗಣ್ಣು ಹಾಲನುಂಡ
ಹಸುಳೆ ಕದಡಿ, ಹೆಣದ ವಾಸನೆ ಕಾಮೀನ್ಮಕ ಆಹಾ ಯೋನಿ
ಚಕಿತಾ ಹದಗೇರಿದ ಪ್ರಾಣ ತೊಡೆಕಣಿವೆಯ ತಗ್ಗಿನಲಿ ನೆತ್ತರು,
ತುಂಬಿ ಇಡೀ ಹೊಲದಲ್ಲಿ ಬಾಲೆಯ ಅಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜನನಿ
Next post ಶಂತನು ಸತ್ಯವತಿಯರ ಪ್ರೇಮ ಪ್ರಸಂಗ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…