Home / ಕವನ / ಕವಿತೆ / ಮರುಹುಟ್ಟು

ಮರುಹುಟ್ಟು

ಆ ಹಳೇ ಮರದ ಬೇರುಗಳು ನನ್ನ
ಎದೆಯ ಗೂಡಿನೊಳಗೆ ಇಳಿದು ಭಾಷೆ
ಪರಿಭಾಷೆಯಾಗಿ ಸಂವತ್ಸರಗಳು ಉರುಳಿ
ಓದುತ್ತಿರುವ ಅಕ್ಷರಗಳು, ಸಾಕ್ಷಿಯಾಗಿವೆ
ಕವಿತೆಗಳು.

ದಟ್ಟ ನೆರಳಿನ ಬೇವಿನ ಬಡ್ಡಿಗೆ ಒರಗಿದ
ಅವ್ವನ ಬೆವರ ಹನಿಗಳು ಇಂಗಿ ನೀಲಿ ಆಕಾಶದ
ತುಂಬ ಬದುಕಿನ ಬಿಳಿ ಮೋಡಗಳು ಕದಲಿ,
ಗಾಳಿ ಮಳೆ ಬಿಸಿಲಿಗೆ ನಿಂತ ಆರ್ಧ್ರ ಹಸಿರು.

ದಿಬ್ಬಣದ ಸಾಲಿನಂತೆ ಮೈಲುಗಲ್ಲುಗಳ ಸವರಿ
ಸಾಗಿದೆ ಅವರಿವರ ಹೆಜ್ಜೆಗಳ, ಎಲ್ಲಾ ನೋಡುತ್ತಾ
ಸುಃಖಿಸಿದ ದಿನಗಳ ಬಿಂಬಗಳು ಅಲೆಗಳಾಗಿ
ನದಿಯಾಗಿ ಹರಿದು ಸಮುದ್ರ ಉಕ್ಕಿತು ಜಲದಲಿ.

ಈ ಭ್ರಹ್ಮಾಂಡ ಭಾರದಲಿ ನೀನು ನಾನೂ
ದಾರಿಗಳ ಸವೆದಾಗ ಅವ ಇಳಿಸಿದ ಬೆಳಕು,
ಕರಗಿ ರುದ್ರಭೂಮಿಯ ನಾದದೊಳು ಒಂದಾದ
ಆತ್ಮಗಳು ನೆಲದ ಬೇರುಗಳಾಗಿ ಮತ್ತೆ ಚಿಗುರು.

ನಮ್ಮ ಉಸುರಿನ ವ್ಯಾದಿ, ಕೇದಿಗೆ ಘಮವಾಗಿ,
ಕಡು ಕದನದ ನಮ್ಮೊಳಗೇ ಇಳಿದು,
ಉಲ್ಲಾಸದ ಅಂಗೈಯಲ್ಲಿ ಲಿಂಗ ಹಿಡಿದು,
ಮನಸ್ಸಿನ ಕಾಯಕದ ಕುಲುಮೆಯಲಿ ಶಬ್ದ
ನಿಶ್ಯಬ್ದಗಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...