ಮರುಹುಟ್ಟು

ಆ ಹಳೇ ಮರದ ಬೇರುಗಳು ನನ್ನ
ಎದೆಯ ಗೂಡಿನೊಳಗೆ ಇಳಿದು ಭಾಷೆ
ಪರಿಭಾಷೆಯಾಗಿ ಸಂವತ್ಸರಗಳು ಉರುಳಿ
ಓದುತ್ತಿರುವ ಅಕ್ಷರಗಳು, ಸಾಕ್ಷಿಯಾಗಿವೆ
ಕವಿತೆಗಳು.

ದಟ್ಟ ನೆರಳಿನ ಬೇವಿನ ಬಡ್ಡಿಗೆ ಒರಗಿದ
ಅವ್ವನ ಬೆವರ ಹನಿಗಳು ಇಂಗಿ ನೀಲಿ ಆಕಾಶದ
ತುಂಬ ಬದುಕಿನ ಬಿಳಿ ಮೋಡಗಳು ಕದಲಿ,
ಗಾಳಿ ಮಳೆ ಬಿಸಿಲಿಗೆ ನಿಂತ ಆರ್ಧ್ರ ಹಸಿರು.

ದಿಬ್ಬಣದ ಸಾಲಿನಂತೆ ಮೈಲುಗಲ್ಲುಗಳ ಸವರಿ
ಸಾಗಿದೆ ಅವರಿವರ ಹೆಜ್ಜೆಗಳ, ಎಲ್ಲಾ ನೋಡುತ್ತಾ
ಸುಃಖಿಸಿದ ದಿನಗಳ ಬಿಂಬಗಳು ಅಲೆಗಳಾಗಿ
ನದಿಯಾಗಿ ಹರಿದು ಸಮುದ್ರ ಉಕ್ಕಿತು ಜಲದಲಿ.

ಈ ಭ್ರಹ್ಮಾಂಡ ಭಾರದಲಿ ನೀನು ನಾನೂ
ದಾರಿಗಳ ಸವೆದಾಗ ಅವ ಇಳಿಸಿದ ಬೆಳಕು,
ಕರಗಿ ರುದ್ರಭೂಮಿಯ ನಾದದೊಳು ಒಂದಾದ
ಆತ್ಮಗಳು ನೆಲದ ಬೇರುಗಳಾಗಿ ಮತ್ತೆ ಚಿಗುರು.

ನಮ್ಮ ಉಸುರಿನ ವ್ಯಾದಿ, ಕೇದಿಗೆ ಘಮವಾಗಿ,
ಕಡು ಕದನದ ನಮ್ಮೊಳಗೇ ಇಳಿದು,
ಉಲ್ಲಾಸದ ಅಂಗೈಯಲ್ಲಿ ಲಿಂಗ ಹಿಡಿದು,
ಮನಸ್ಸಿನ ಕಾಯಕದ ಕುಲುಮೆಯಲಿ ಶಬ್ದ
ನಿಶ್ಯಬ್ದಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ಸಲಗ
Next post ಗೆಳೆಯನ ಗಂಡುಮಗು

ಸಣ್ಣ ಕತೆ

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…