ಈ ಸಂಜೆ

ಕಾಮನ ಬಿಲ್ಲು ಹಿಡಿಯಲಾಗದ ನೋವು
ನೀನು ಮುಂಜಾನೆ ಕಿರಣಗಳ ಹೊತ್ತು ತಂದಾಗ,
ಕರಗಿತು ನದಿಯಾಗಿ ಅದ್ಭುತ ಸೌಂದರ್ಯವತಿ.
ನನ್ನೊಳಗಿಳಿದ ಜ್ಞಾನ, ಬೆಳಕಿನ ಹಣತೆ
ಮತ್ತೆ ಹೂವರಳಿದೆ ದಿನವೆಲ್ಲಾ ಘಮ ಘಮ.

ಮಡಿಕೆಯಲ್ಲಿ ತುಂಬಿಟ್ಟ ನೀರು ತಣ್ಣಗೆ ಆಗಿ
ಗದ್ದೆಯ ತುಂಬೆಲ್ಲಾ ಹಸಿರು ಹರಿದ ಕ್ಷಣ,
ನಿನ್ನ ಸ್ಪರ್ಶ ನೆನೆಪಿದೆ ಚೆನ್ನಾಗಿ ಮತ್ತು ಮಿಂಚುಳಿ
ನೀಲಿ ಹರಿಡಿದ ಆಕಾಶವ ಸ್ಪರ್ಶಿಸಿದೆ. ಹೊಳೆಯುತ್ತಿದೆ
ಕತ್ತಲೆ ಬೇರೂರಿದ ಮನದ ತುಂಬ ಚೆಂದಿರನ ಬೆಳಕು.

ಮನದ ತುಂಬ ನಿನ್ನೊಲವಿನ ಮಂದಹಾಸ ಅರಳಿ
ಹಿಂಬಾಲಿಸಿವೆ ಸುಂದರ ಕನಸುಗಳು, ಆಕಾಶ
ಮಲ್ಲಿಗೆ ಅರಳುತ್ತಿವೆ. ಸಂಜೆ ತುಂಬ ಹಕ್ಕಿಗಳ
ರಾಗಗಳು ಹರಡಿ ಸಾವಿರ ಕವನಗಳ ಬೇರು,
ಮೌನದಲಿ ಹೊಸ ಪ್ರತಿಮೆಗಳ ಹುಡುಕಾಟದ ಮೆರವಣಿಗೆ.

ಮುನಿಸಿಕೊಂಡ ಅಕ್ಷರಗಳು ಮತ್ತೆ ನಿನ್ನಿಂದ ವಾಪಸ್ಸು
ನನ್ನ ಮನೆಯ ಬಾಗಿಲಿಗೆ ಬಂದು ನಿಂತುಕೊಂಡಿವೆ.
ಸುರಿವ ಚಳಿಯಲಿ ದುಂಬಿಗಳ ಹಾರಾಟ, ಹೂಗಳಲಿ
ಎಂದೂ ಮುಗಿಯದ ಹಾಡು ಪೋಣಿಸುತ್ತಿದ್ದೇನೆ.
ಒಂದು ಹೂವಿನ ಸರ, ಈ ಸಂಜೆ ನಿನಗಾಗಿ ಕಾದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತವಿದು ಭಾರತ
Next post ಗಂಡಸಿನ ‘ಹೂಂಕಾರ’!

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…