ಈ ಸಂಜೆ

ಕಾಮನ ಬಿಲ್ಲು ಹಿಡಿಯಲಾಗದ ನೋವು
ನೀನು ಮುಂಜಾನೆ ಕಿರಣಗಳ ಹೊತ್ತು ತಂದಾಗ,
ಕರಗಿತು ನದಿಯಾಗಿ ಅದ್ಭುತ ಸೌಂದರ್ಯವತಿ.
ನನ್ನೊಳಗಿಳಿದ ಜ್ಞಾನ, ಬೆಳಕಿನ ಹಣತೆ
ಮತ್ತೆ ಹೂವರಳಿದೆ ದಿನವೆಲ್ಲಾ ಘಮ ಘಮ.

ಮಡಿಕೆಯಲ್ಲಿ ತುಂಬಿಟ್ಟ ನೀರು ತಣ್ಣಗೆ ಆಗಿ
ಗದ್ದೆಯ ತುಂಬೆಲ್ಲಾ ಹಸಿರು ಹರಿದ ಕ್ಷಣ,
ನಿನ್ನ ಸ್ಪರ್ಶ ನೆನೆಪಿದೆ ಚೆನ್ನಾಗಿ ಮತ್ತು ಮಿಂಚುಳಿ
ನೀಲಿ ಹರಿಡಿದ ಆಕಾಶವ ಸ್ಪರ್ಶಿಸಿದೆ. ಹೊಳೆಯುತ್ತಿದೆ
ಕತ್ತಲೆ ಬೇರೂರಿದ ಮನದ ತುಂಬ ಚೆಂದಿರನ ಬೆಳಕು.

ಮನದ ತುಂಬ ನಿನ್ನೊಲವಿನ ಮಂದಹಾಸ ಅರಳಿ
ಹಿಂಬಾಲಿಸಿವೆ ಸುಂದರ ಕನಸುಗಳು, ಆಕಾಶ
ಮಲ್ಲಿಗೆ ಅರಳುತ್ತಿವೆ. ಸಂಜೆ ತುಂಬ ಹಕ್ಕಿಗಳ
ರಾಗಗಳು ಹರಡಿ ಸಾವಿರ ಕವನಗಳ ಬೇರು,
ಮೌನದಲಿ ಹೊಸ ಪ್ರತಿಮೆಗಳ ಹುಡುಕಾಟದ ಮೆರವಣಿಗೆ.

ಮುನಿಸಿಕೊಂಡ ಅಕ್ಷರಗಳು ಮತ್ತೆ ನಿನ್ನಿಂದ ವಾಪಸ್ಸು
ನನ್ನ ಮನೆಯ ಬಾಗಿಲಿಗೆ ಬಂದು ನಿಂತುಕೊಂಡಿವೆ.
ಸುರಿವ ಚಳಿಯಲಿ ದುಂಬಿಗಳ ಹಾರಾಟ, ಹೂಗಳಲಿ
ಎಂದೂ ಮುಗಿಯದ ಹಾಡು ಪೋಣಿಸುತ್ತಿದ್ದೇನೆ.
ಒಂದು ಹೂವಿನ ಸರ, ಈ ಸಂಜೆ ನಿನಗಾಗಿ ಕಾದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾರತವಿದು ಭಾರತ
Next post ಗಂಡಸಿನ ‘ಹೂಂಕಾರ’!

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys