ಭಾರತವಿದು ಭಾರತ

ಭಾರತವಿದು ಭಾರತ
ನಮ್ಮಲ್ಲಿದೆ ಒಮ್ಮತ
ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್
ಎಲ್ಲಾ ಒಂದೆ ಎನ್ನುತ ||

ಸತ್ಯ ಧರ್‍ಮ ತ್ಯಾಗ ಶಾಂತಿ
ನಮಗಿದುವೆ ಸಮ್ಮತ
ವೀರ ಧೀರ ಕಲಿಗಳ ನೆಲೆಬೀಡು ಎನ್ನುತ ||

ಗಂಧ ಕುಸುಮ ಅಂದ ಚೆಂದ
ಪ್ರಕೃತಿ ಚೆಲುವು ಬೀರುತ
ಸುಂದರ ಬನಸಿರಿಯ ಸ್ವರ್ಗವಿದುವೆ ಎನ್ನುತ ||

ಭಾರತಾಂಬೆ ಒಲುಮೆ ನಮಗೆ
ಮಮತೆ ಮಡಿಲು ಎನ್ನುತ
ಮೇರು ಶಿಖರ ಗಿರಿಧಾಮ ಭಾರತ ಕೀರ್‍ತಿ ಮೆರೆಸುತ ||

ಹಿಮಗಿರಿ ಮುಕುಟ ಜಲಧಾರೆ ತರಂಗ
ಸಹ್ಯಾದ್ರಿ ಶೃ೦ಗ ಕಾವೇರಿ ಗಂಗಾ
ಸೂಯ್ಗುಟ್ಟುವ ತಂಗಾಳಿಯ ತನುಮನ ಪುಳಕಿತ ||

ಅನಂತ ಅನಂತವಾಗಿ ತನನ
ತನನ ತಾನವಾಗಿ ಹಾಡಿರಿನ್ನು
ಹೊಗಳುತಾ ಹೊಗಳುತಾ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಕ್ತಿ ಮಾರ್‍ಗದತ್ತ
Next post ಈ ಸಂಜೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…