ಗಾಂಧಿ

ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ
ಪ್ರೀತಿಯ ನಿತ್ಯ ಸತ್ಯಗಳು ಹಸಿರು.
ಅಹಿಂಸೆಯು ಬಯಲ ಗಾಳಿಯಲಿ ತೇಲಿ
ಒಂದು ಸರಳ ಮಾರ್ಗದರ್ಶನ ನಿನ್ನಿಂದ
ಜಗಕೆ.

ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ
ಹೇಳಿದ ಪ್ರಾರ್ಥನೆಯ ಆಳ ಎದೆ ಎದೆಗೂ
ಇಳಿದು ಸಂಧ್ಯಾರಾಗದ ಸಂಭ್ರಮದ
ತಿಳಿ ಹಾಸಿದ ಸಂಜೆ, ಸಾಮರಸ್ಯ ಅರಳಿದ ಸಂಜೆ
ಮಲ್ಲಿಗೆ.

ಸಹಜ ಜೀವನದ ಸಾದಾ ನಡುಗೆಯು
ಸುದ್ದಿಯಾಗುವುದಿಲ್ಲ ಜಗದೊಳು. ಆದರೆ
ನಿನ್ನ ಮೌನದ ನಡುಗೆ ವಿಶ್ವವನವನೇ ಅಲ್ಲಾಡಿಸಿ,
ಅಳಿದುಳಿದ ದ್ವೇಷ ಕರುಗಿ ಸತ್ಯ ಮಿತ್ರತ್ವವಾಗಿದೆ.

ತನ್ನಂತೆ ಪರರ ಬಗೆಯುವ ಪರಿ ಮತ್ತೆ
ಅವರ ದಾರಿಯಲಿ ಅಡ್ಡಾಗದೇ, ನೀ ತಬ್ಬಿದ
ಗೌರವದ ಅಭಿಪ್ರಾಯಗಳು, ಹೃದಯಗಳು
ಒಂದಾಗಿ ಝಗಮಗಿಸುವ ಸೂರ್ಯೋದಯ
ಎಲ್ಲೆಲ್ಲೂ.

ಒಲುಮೆ ವಿಶ್ವಾಸದಲಿ ನೀ ಅರಳಿಸಿದ ಪ್ರೀತಿ,
ಕ್ಯಾದಿಗೆ ಘಮ ಜಗದ ತುಂಬೆಲ್ಲಾ ಹರಡಿ,
ತನ್ನೊಳಗಿನ ಕಾಯಕವ ದಂಡಿಗೆ ಮಾಡಿ,
ದಾಂಡೀ ಯಾತ್ರೆ ನಡೆದ ಫಕೀರ, ಜಗದ ತಂದೆ
ನಿನ್ನ ತತ್ವಗಳಿಗೆ ನಮೋ ನಮೋ ಎಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋತಿ ಒಂದೇ
Next post ಧರ್ಮ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys