ಗಾಂಧಿ

ಬಾಪು ನೀ ಮಹಾನ್. ಕೃಷಿಯಲ್ಲಿ ನಿನ್ನ
ಪ್ರೀತಿಯ ನಿತ್ಯ ಸತ್ಯಗಳು ಹಸಿರು.
ಅಹಿಂಸೆಯು ಬಯಲ ಗಾಳಿಯಲಿ ತೇಲಿ
ಒಂದು ಸರಳ ಮಾರ್ಗದರ್ಶನ ನಿನ್ನಿಂದ
ಜಗಕೆ.

ಬದುಕಿನ ಎಲ್ಲಾ ಜಂಝಡದ ಮಧ್ಯೆ ನೀ
ಹೇಳಿದ ಪ್ರಾರ್ಥನೆಯ ಆಳ ಎದೆ ಎದೆಗೂ
ಇಳಿದು ಸಂಧ್ಯಾರಾಗದ ಸಂಭ್ರಮದ
ತಿಳಿ ಹಾಸಿದ ಸಂಜೆ, ಸಾಮರಸ್ಯ ಅರಳಿದ ಸಂಜೆ
ಮಲ್ಲಿಗೆ.

ಸಹಜ ಜೀವನದ ಸಾದಾ ನಡುಗೆಯು
ಸುದ್ದಿಯಾಗುವುದಿಲ್ಲ ಜಗದೊಳು. ಆದರೆ
ನಿನ್ನ ಮೌನದ ನಡುಗೆ ವಿಶ್ವವನವನೇ ಅಲ್ಲಾಡಿಸಿ,
ಅಳಿದುಳಿದ ದ್ವೇಷ ಕರುಗಿ ಸತ್ಯ ಮಿತ್ರತ್ವವಾಗಿದೆ.

ತನ್ನಂತೆ ಪರರ ಬಗೆಯುವ ಪರಿ ಮತ್ತೆ
ಅವರ ದಾರಿಯಲಿ ಅಡ್ಡಾಗದೇ, ನೀ ತಬ್ಬಿದ
ಗೌರವದ ಅಭಿಪ್ರಾಯಗಳು, ಹೃದಯಗಳು
ಒಂದಾಗಿ ಝಗಮಗಿಸುವ ಸೂರ್ಯೋದಯ
ಎಲ್ಲೆಲ್ಲೂ.

ಒಲುಮೆ ವಿಶ್ವಾಸದಲಿ ನೀ ಅರಳಿಸಿದ ಪ್ರೀತಿ,
ಕ್ಯಾದಿಗೆ ಘಮ ಜಗದ ತುಂಬೆಲ್ಲಾ ಹರಡಿ,
ತನ್ನೊಳಗಿನ ಕಾಯಕವ ದಂಡಿಗೆ ಮಾಡಿ,
ದಾಂಡೀ ಯಾತ್ರೆ ನಡೆದ ಫಕೀರ, ಜಗದ ತಂದೆ
ನಿನ್ನ ತತ್ವಗಳಿಗೆ ನಮೋ ನಮೋ ಎಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋತಿ ಒಂದೇ
Next post ಧರ್ಮ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…