ಧರ್ಮ


ಕೂಳಿಲ್ಲದಿಹ ನನಗೆ
ಕಲ್ಲಿನಾರ್ಚನೆಯಂತೆ!
ಸೆರೆಮನೆಯ ಸೋಬತಿಗೆ
ಸೂರ್ಯ ಜಪ ತಪವಂತೆ!


ನಾನೊಲ್ಲದಿಹ ನಾರಿ
ನನಗಾಗಿ ಇಹಳಂತೆ!
ಪಿತನ ನುಡಿ ಮೀರಿ
ನಡೆಯೆ ನರಕವಂತೆ!


ಹೆಣ್ಣಿನಾ ಹಣೆಬರಹ
ಪುರುಷ ಬರೆದುದೆ ಅಂತೆ!
ಇಲ್ಲದೊಡೆ ವಿರಹ
ಅವಳ ಜೀವನಕಂತೆ!


ನನ್ನವರ ನಾನೆಂದು
ಮುಟ್ಟಕೂಡದು ಅಂತೆ!
ಹೊಲೆಯನವನೆಂದು
ಶಾಸ್ತ್ರ ಶಾಸನವಂತೆ!


ಅಪ್ಪ ಹೇಳುವುದೆಲ್ಲ
ಮೇರುಪರ್ವತವಂತೆ!
ಮೀರಿ ನಡೆವರಿಗೆಲ್ಲ
ನರಕ ಸಿದ್ದವೆ ಅಂತೆ!


ಕಾಲವರಿಯದ ಧರ್ಮ
ಕುಲಗೇಡಿ ಅಲ್ಲಂತೆ!
ಯುವಕರೆಲ್ಲರ ಧರ್ಮ
ಅವಿಚಾರವಹುದಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ
Next post ವಚನ ವಿಚಾರ – ಪುರುಷತ್ವ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…