ಧರ್ಮ


ಕೂಳಿಲ್ಲದಿಹ ನನಗೆ
ಕಲ್ಲಿನಾರ್ಚನೆಯಂತೆ!
ಸೆರೆಮನೆಯ ಸೋಬತಿಗೆ
ಸೂರ್ಯ ಜಪ ತಪವಂತೆ!


ನಾನೊಲ್ಲದಿಹ ನಾರಿ
ನನಗಾಗಿ ಇಹಳಂತೆ!
ಪಿತನ ನುಡಿ ಮೀರಿ
ನಡೆಯೆ ನರಕವಂತೆ!


ಹೆಣ್ಣಿನಾ ಹಣೆಬರಹ
ಪುರುಷ ಬರೆದುದೆ ಅಂತೆ!
ಇಲ್ಲದೊಡೆ ವಿರಹ
ಅವಳ ಜೀವನಕಂತೆ!


ನನ್ನವರ ನಾನೆಂದು
ಮುಟ್ಟಕೂಡದು ಅಂತೆ!
ಹೊಲೆಯನವನೆಂದು
ಶಾಸ್ತ್ರ ಶಾಸನವಂತೆ!


ಅಪ್ಪ ಹೇಳುವುದೆಲ್ಲ
ಮೇರುಪರ್ವತವಂತೆ!
ಮೀರಿ ನಡೆವರಿಗೆಲ್ಲ
ನರಕ ಸಿದ್ದವೆ ಅಂತೆ!


ಕಾಲವರಿಯದ ಧರ್ಮ
ಕುಲಗೇಡಿ ಅಲ್ಲಂತೆ!
ಯುವಕರೆಲ್ಲರ ಧರ್ಮ
ಅವಿಚಾರವಹುದಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ
Next post ವಚನ ವಿಚಾರ – ಪುರುಷತ್ವ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…