ಹಗಲು ಇರುಳೆನ್ನದೆ
ಸಾಗುತಿದೆ ಬದುಕು
ಎಷ್ಟು ದುಡಿದರೂ ದುಡಿಮೆ
ಸಾಲದು ಅದಕೂ ಇದಕೂ
ದುಡಿಯುವವ ಒಬ್ಬ
ತಿನ್ನುವ ಕೈಗಳು ಹತ್ತು
ಶ್ರಮಕ್ಕೆ ತಕ್ಕ ಫಲ
ಪ್ರತಿಭೆಗೆ ತಕ್ಕ ಪುರಸ್ಕಾರ
ಮರಳುಗಾಡಿನ ಮರೀಚಿಕೆ
ಶೋಷಿತ ಸಮಾಜದ ಅಡಿಗಲು
ಪೆಟ್ಟು ತಿನ್ನದ ಬದುಕುಳಿಯುವುದೇ ದುಸ್ತರ
ಒಂದು ಮುಚ್ಚಲು ಮತ್ತೊಂದು ತೂತು
ಜೀವನವಿಡೀ ತೇಪೆಯ ಬದುಕು
ಹೊಸತಿಗಾತಿ ತುಡಿಯುತಿದೆ ಜೀವ
ಮುಗಿಲೆತ್ತರ ಏರುವ ಭಾವ
ಉತ್ತುಂಗಕ್ಕೇರುವ ರಭಸದಲ್ಲಿ
ಒಬ್ಬರೊನ್ನೊಬ್ಬರು ತುಳಿಯುವ
ದುರಾಸೆಯ ಬೀಜ ಮೊಳೆತು
ಬೆಳೆದು ಹೆಮ್ಮರವಾಗಿದೆ.
*****
Related Post
ಸಣ್ಣ ಕತೆ
-
ತಿಥಿ
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
-
ಒಂಟಿ ತೆಪ್ಪ
ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…